ನಿನ್ನ ಸೆರಗಿನ ಜಗ!

ಜಗದ ಅದ್ಭುತ
ಸೌಂದರ್ಯಗಳೆಡೆ
ದಟ್ಟ ನಿರ್ಲಕ್ಷ್ಯ..
ಕಣ್ಣೆದುರು ಸದಾ
ನಗುಮೊಗದ
ದಿವ್ಯ ಲಾಸ್ಯ…
ಮಾಡದ ತಪ್ಪಿಗೆ
ಊರಜನರೆಲ್ಲಾ ಸೇರಿ
ನೀಡುವ ವಿಧವಿಧ ಶಿಕ್ಷೆ..
ಮನ ಬೇಡುವುದು ನಿನ್ನ
ಕಣ್ಣ ತೀರ್ಪು..
ಹೊರಗಡಿ ಇಟ್ಟಾಗೆಲ್ಲ
ಹೆಜ್ಜೆ ಹೆಜ್ಜೆಗೂ ವಿಷ..
ಒಳಗೆ ಕಾಯುವುದು
ನಿನ್ನ ಮುತ್ತಿನಮೃತ…
ಬದುಕೆತ್ತೆತ್ತಿ ಎಸೆವಾಗ
ನೀಡುವುದು ಬೆಚ್ಚಗಿನಾಶ್ರಯ
ನಿನ್ನ ಸೆರಗಿನ ಜಗ!
Categories: ಕವಿತೆ

ಮಾಡದ ತಪ್ಪಿಗೆ
ಊರಜನರೆಲ್ಲಾ ಸೇರಿ
ನೀಡುವ ವಿಧವಿಧ ಶಿಕ್ಷೆ..
ಮನ ಬೇಡುವುದು ನಿನ್ನ
ಕಣ್ಣ ತೀರ್ಪು.
ಈ ಸಾಲು ಮನಮುಟ್ಟಿತು… ಅಣ್ಣ…… ಮುದ್ದಾದ ಕವನ………….
ರಂಜಿತ್ ಗುರುಗಳೇ ,
ಮಾಡದ ತಪ್ಪಿಗೆ
ಊರಜನರೆಲ್ಲಾ ಸೇರಿ
ನೀಡುವ ವಿಧವಿಧ ಶಿಕ್ಷೆ..
ಮನ ಬೇಡುವುದು ನಿನ್ನ
ಕಣ್ಣ ತೀರ್ಪು.
ಈ ಸಾಲುಗಳು ತುಂಬಾ ಇಷ್ಟವಾದವು….
ರಂಜಿತ್ ಸರ್,
ಕವನ ಸ್ವಲ್ಪ ವಿಭಿನ್ನವೆನಿಸುತ್ತೆ…..ಹೇಳುವ ವಿಚಾರದಲ್ಲಿ ಹೊರಗಿನ ಸಮಾಜವನ್ನು ಬಳಸಿಕೊಂಡಿದ್ದೀರಿ….
ಬದುಕೆತ್ತೆತ್ತಿ ಎಸೆವಾಗ
ನೀಡುವುದು ಬೆಚ್ಚಗಿನಾಶ್ರಯ
ನಿನ್ನ ಸೆರಗಿನ ಜಗ!
ಈ ಪದ್ಯವಂತೂ ವಿಶಿಷ್ಟ ಪ್ರಯೋಗವೆನಿಸುತ್ತೆ…
ಮುಂದುವರಿಯಲಿ…ಧನ್ಯವಾದಗಳು.
ನೀಲಿ ಹೂ…
ಪಾಕಿಸ್ತಾನದಲ್ಲಿ ಗೆಳೆಯನ ಸಂಗಡ ತಾಲಿಬಾನಿಗಳಿಗೆ
ಸಿಕ್ಕಿಬಿದ್ದ ಮಹಿಳೆಯ..
ಘಟನೆ ನೆನಪಾಯಿತು..
ಅಸಹಾಯಕ ಪ್ರೇಮದ ಎಳೆಯನ್ನಿಟ್ಟು ರಚಿಸಿದ ಈ ಕವನ
ಮನದಲ್ಲಿಳಿಯುತ್ತದೆ…
ಕೊನೆಯ ಸಾಲುಗಳು ಬಹಳ ಇಷ್ಟವಾದವು…
ಕೊನೆಯ ಸಾಲುಗಳು ಬಹಳ ಇಷ್ಟವಾದವು…
ವಿಶಿಷ್ಟವೆನಿಸಿದೆ ಕವನದ ಭಾವನೆಗಳು… ತುಂಬ ಹಿಡಿಸಿತು
ಎಂದಿನಂತೆ ಅದ್ಭುತ ಸಾಲುಗಳು
-ಶೆಟ್ಟರು
ಕೊನೆಯ ಪ್ಯಾರ ತುಂಬಾ ಇಷ್ಟವಾಯಿತು. ಚೆಂದದ ಕವಿತೆ…
ನೀಲಿ ಹೂದೋಟದ ಸೊಗಸಾದ ಹೂಗಳಲ್ಲೊಂದು ಬಲು ಸೊಗಸಾದ ಹೂವಿದು……
Tumba chennagide Ranjith.
Abhinandanegalu.
Sunil.
Ranjith,
Tumbaa beautiful aagide lines….
nanage tumba ishtavaagida saalugaLu
“ಮಾಡದ ತಪ್ಪಿಗೆ
ಊರಜನರೆಲ್ಲಾ ಸೇರಿ
ನೀಡುವ ವಿಧವಿಧ ಶಿಕ್ಷೆ..
ಮನ ಬೇಡುವುದು ನಿನ್ನ
ಕಣ್ಣ ತೀರ್ಪು”
keep rocking
ಇಂಚರ,
ಆ ಸಾಲು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ಒಟ್ಟಾರೆ ಕವನ ಹಿಡಿಸಲಿಲ್ವೇ?
ಜ್ಞಾನಮೂರ್ತಿಗಳೇ,
ಅಪರೂಪದ ಬ್ಲಾಗಿನ ಭೇಟಿಗೆ, ಮತ್ತು ಮೆಚ್ಚುಗೆಗೆ ಧನ್ಯವಾದಗಳು.
ಶಿವೂ,
ಪ್ರತೀ ಸಲ ಬರೆಯುವುದಕ್ಕಿಂತ ವಿಭಿನ್ನ ಭಾವದಲ್ಲಿ ಬರೆಯುವ ಪ್ರಯತ್ನ ಮಾಡಿದ್ದು ಹೌದು. ಹಾಗೆ ಮೂಡಿದ್ದೂ ಹೌದಾದರೆ ನನಗೆ ಖುಷಿ. ಕವನ ಒಬ್ಬೊಬ್ಬರಿಗೆ ಒಂದೊಂದು ವಿಧದ ಅನುಭೂತಿ ನೀಡುತ್ತದೆ ಎಂದು ನನ್ನ ನಂಬುಗೆ. ಇನ್ನೊಂದು ಮನಸ್ಥಿತಿಯಲ್ಲಿ ಓದಿದರೆ ಬೇರೆ ರೀತಿ ಅನ್ನಿಸಬಹುದಾ ಎಂದು ನೀವೇ ತಿಳಿಸಬೇಕು.
ಎಂದಿನಂತೆ ನಿಮ್ಮ ಮೆಚ್ಚುಗೆಗೆ ನನ್ನ ನನ್ನಿ.
ಪ್ರಕಾಶ್ ಹೆಗ್ಡೆ,
ಜೋಗಿಯವರು ಒಂದು ಕಡೆ ’ಈಗಿನ ಕವಿತೆಗಳು, ನನ್ನನ್ನು ಓದುವುದಕ್ಕೆ ನೀನು ಸಿದ್ಧತೆ ಮಾಡಿಕೊಂಡಿದ್ದೀಯಾ ಅಂತ ಓದುಗನನ್ನು ಕೇಳುತ್ತದೆ’ ಅಂತಾರೆ. ಪರೀಕ್ಷೆಯಲಿ ಎಷ್ಟು ಓದಿದ್ದರೆ ಅಷ್ಟು ಮಾರ್ಕ್ಸು ಬರುವಂತೆ ಕವಿತೆ ಓದಲು ನೀನೆಷ್ಟು ಸಿದ್ಧನಾಗಿದ್ದೀಯೋ ಅಷ್ಟು ಮಾತ್ರ ಕವಿತೆ ನಿನಗೆ ದಕ್ಕುತ್ತದೆ ಅನ್ನುವ ರೀತಿ. ನೀವು ಕವಿತೆ ಓದುವ ರೀತಿ ನೋಡಿ ಅಸೂಯೆಯಾಯಿತು. ಹಾಗೆ ಮೂಲ ಪ್ರೇರಣೆ ಕುರಿತ ಮಾತಿಗೆ ಅಚ್ಚರಿಯೂ.
ನಿಮ್ಮ ಹೆಜ್ಜೆಗುರುತು ನೀಲಿಹೂವಿನ ತೋಟದಲ್ಲಿ ಮೂಡುತಿರಲಿ.
ಧನ್ಯವಾದಗಳು.
ಮನಸು ಮೇಡಮ್,
ನಿಮ್ಮ ಹುರುಪು ನೀಡುವ ಹೊಗಳಿಕೆಗಳಿಗೆ ಋಣಿಯಾಗಿರುವೆ. ಮತ್ತಷ್ಟು ಬರೆಯಲು ಇಂಥ ಸಣ್ಣ ಪ್ಯಾಟಿಂಗ್ (ಬೆನ್ತಟ್ಟುವಿಕೆ) ಗಳೇ ಕಾರಣ.
ಶೆಟ್ಟರೇ,
ಬ್ಲಾಗಿನ ಒಳ್ಳೆಯಬರಹಗಳಿಗೆ, ಹೊಸ ಪ್ರಯೋಗಗಳಿಗೆ ಮಾತ್ರ ಪ್ರೋತ್ಸಾಹಿಸಿ ಪ್ರೇರಣೆ ನೀಡುತ್ತಾ ಬಂದಿದ್ದೀರಿ.
ಧನ್ಯವಾದಗಳು.
ವಿನಾಯಕ ಕೊಡ್ಸರ,
ಮೊದಲಿಗೆ ನೀಲಿಹೂವಿಗೆ ಸ್ವಾಗತ. ಮತ್ತು ಕವಿತೆ ಮೆಚ್ಚಿಕೊಂಡಿದ್ದಕ್ಕೊಂದಿಷ್ಟು ನನ್ನಿ.
ಸುನಿಲ್,
ಧನ್ಯವಾದಗಳು.
ರೂಪ ಸತೀಶ್,
ನಿಮ್ಮ ಬ್ಯುಸಿ ಶೆಡ್ಯೂಲ್ ಗಳಲ್ಲಿ ಬ್ಲಾಗಿಗೆ ವಿನಿಯೋಗಿಸಿದ ಸಮಯ ನಿಮಗೆ ಖುಷಿ ನೀಡಿದರೆ ತೋಟದ ಮಾಲಿಗೆ ಸಂಬಳ ಸಿಕ್ಕಂತೆಯೇ!
ಈ ಕವಿತೆ ನಿಮ್ಮ ಆರ್ಕುಟ್ ನ 3K ಕಮ್ಯೂನಿಟಿಯಲ್ಲಿ ಮೊದಲು ಪ್ರಕಟವಾಗಿ ಅಲ್ಲಿ ಮೆಚ್ಚುಗೆ ಗಳಿಸಿಕೊಂಡ ಮೇಲಷ್ಟೇ ಬ್ಲಾಗಿಗೆ ಹಾಕಲು ನಿರ್ಧರಿಸಿದ್ದೆ. ನಿಮಗೂ ಧನ್ಯವಾದಗಳನ್ನು ಹೇಳಲೇಬೇಕಾಗಿದೆ..
ಹೀಗೇ ಬರುತ್ತಿರಿ.
ಕವಿವರ್ಯ,
) ಇವುಗಳು.
ಕವನ ಸೂಪರ್… ಪ್ರತಿ ಸಾಲುಗಳು ಇಷ್ಟವಾಗಿವೆ, ಮಾಲ್ಡಿವ್ಸ್ ದ್ವೀಪದಂಚಿನಲ್ಲಿ ಹೆಕ್ಕಿ ಪೋಣಿಸಿದ ಮುತ್ತುಗಳೆನು (ನಾಮ ಪದ
ಅಣ್ಣ,
ಕವನನೂ ಹಿಡಿಸಿತು.. ಆದರೆ ಆ ಸಾಲು ತುಂಬಾ ಹಿಡಿಸಿತು….
Ranjith….swalpa busyy yaagidde.. haagaagi yaava blog kadegoo hecchige hogoke aaglilla… nan blog goo Enoo bareede tingaLaaythu…
nimma ee iDee kavana, aadara pratee saaalooo…. sakkat ishTa aaythu…