02
Oct
09

ಇತ್ತೀಚೆಗೆ

ಬಾಲ್ಯದ ತುಂಬಾ

ಚಂದಮಾಮನನು ತೋರಿಸಿಯೇ

ಉಣ್ಣಿಸಿದ್ದ ಅವ್ವನಿಗೆ

ಕಲೆಯಿರದ ಚಂದಿರನ

ಕಲ್ಪನೆಯೇ ಇರಲಿಲ್ಲವಂತೆ

 

painting

ರೂಮಿನಲಿ ಚೆಲ್ಲಾಪಿಲ್ಲಿಯಾಗಿ

ಬಿದ್ದ ವಸ್ತುಗಳಂತಿದ್ದ ಬದುಕಿಗೆ

ಒಪ್ಪ ಓರಣಗಳ ಕಲಿಸುವ

ಟೀಚರಿನ ಅವಶ್ಯಕತೆಯಿದೆಯೆಂದು

ನನಗೂ ಅರಿವಿರಲಿಲ್ಲ.

ಬೇಲಿ ಹಾರಿ ಲೂಟಿ ಮಾಡುವ

ಜೋಡಿ ಹೋರಿಗಳಂತಿದ್ದ ಕಣ್ಣುಗಳನು

ನೊಗ ಕಟ್ಟುವಂಥ ಮೊಗ

ಇದೆಯೆಂಬುದರ ತಿಳಿವೂ ಇದ್ದಿರಲಿಲ್ಲ

ಅವಳು ಸಿಕ್ಕಿದ್ದು

ತೀರಾ ಇತ್ತೀಚೆಗೆ.

 

- ಅಕ್ಟೋಬರ್ ಮಾಸದ “ಮಯೂರ” ದಲ್ಲಿ ಪ್ರಕಟಿತ.


23 Responses to “ಇತ್ತೀಚೆಗೆ”


  1. 1 manasu
    October 2, 2009 at 9:11 am

    nice one!!! istavaayitu

  2. October 2, 2009 at 1:59 pm

    ತುಂಬಾ ಇಷ್ಟವಾಯ್ತು… :)

  3. October 4, 2009 at 10:32 am

    ರಂಜಿತ್,

    ಇದನ್ನು ಮೊದಲೇ ಮಯೂರದಲ್ಲಿ ಓದಿ ಖುಷಿಪಟ್ಟಿದ್ದೆ. ತುಂಬಾ ಚೆನ್ನಾಗಿದೆ.

  4. 4 Karthik S Udupa
    October 4, 2009 at 5:33 pm

    ತುಂಬಾ ಚೆನ್ನಾಗಿದೆ, ಮೊದಲ ಪ್ಯಾರವಂತು ಸೂಪರ್.

  5. October 5, 2009 at 4:39 am

    ಚೆನ್ನಾಗಿದೆ!! :-)

  6. 6 ವಿಜಯರಾಜ್ ಕನ್ನಂತ
    October 5, 2009 at 8:40 am

    nice :-)

  7. 8 ram
    October 5, 2009 at 11:04 am

    hi ranjit,
    do you know why they have stopped kendasampige ? editor has not given any information about that.What happened all in a sudden ?

    regards,
    Ramesh

  8. October 6, 2009 at 4:46 am

    Neevu andahaage ilvallaa sirr!!
    Chennagi bandide…

  9. 10 sharanu hullur
    October 6, 2009 at 9:51 am

    ranjita ji.. hegiddiri?… tumba channagi kavite baradiddiri…thanks

  10. October 7, 2009 at 7:38 am

    ಚೆನ್ನಾಗಿದೆ, ಮಯೂರದಲ್ಲೇ ಓದಿದ್ದೆ. ಕೊನೆಯ ಸಾಲಿನಲ್ಲಿ ಮಯೂರದಲ್ಲಿ ಪ್ರಕಟವಾಗಿದ್ದಾಗ “ಅವಳು ಸಿಕ್ಕದ್ದು.. ತೀರಾ ಇತ್ತೀಚೆಗೆ” ಅಂತ ಇದೆ.

    ಇಲ್ಲಿ ಅದು ಸಿಕ್ಕಿದ್ದು ಆಗಿದೆ.

    ಯಾವುದು ಸರಿ?

  11. 12 Shruthi
    October 8, 2009 at 6:11 am

    chennagide anna………. howdu…..ittichege elli sikidru???

  12. October 12, 2009 at 9:16 am

    Tumbaa ishtavaaytu kavithe… :-)

  13. 14 ವೈಶಾಲಿ
    October 13, 2009 at 3:11 am

    Good one…

  14. 16 Chamaraj Savadi
    October 15, 2009 at 7:42 am

    ರಂಜಿತ್‌,
    ಎಂದಿನಂತೆ ಸಕತ್ತಾದ ಕವನ. ಕೊನೆಯ ಸಾಲು ಬರುವವರೆಗೆ ಕವಿತೆಯ ಒಳಾರ್ಥ ನಿಗೂಢವೇ. ಕೊನೆಯ ಸಾಲುಗಳನ್ನು ಓದಿದಾಗ ಮುಗುಳ್ನಗೆ ತನಗೆ ತಾನೇ ಮೂಡುತ್ತದೆ. ಮತ್ತೆ ಮೊದಲಿನಿಂದ ಓದುವಂತೆ ಪ್ರೇರೇಪಿಸುತ್ತದೆ. ನಿಮಗೆ ಕೈತುತ್ತು ಉಣ್ಣಿಸುವಾಗ ಅಮ್ಮನಿಗೆ ಚೆಂದುಳ್ಳಿ ಸೊಸೆಯ ಕಲ್ಪನೆ ಬಂದೀತಾದರೂ ಹೇಗೆ? ಇನ್ನು ಬ್ಯಾಚಲರ್‌ ಬದುಕಲ್ಲಿ ಮುಳುಗಿರುವಾಗ, ರೋಮ್ಯಾಂಟಿಕ್‌ ಜಗತ್ತಿನಲ್ಲಿ ಇಲ್ಲವಾಗಿರುವಾಗ, ಒಪ್ಪ ಓರಣದ ಒಡತಿಯೊಬ್ಬಳು ನೊಗ ಕಟ್ಟಲು ಬರುತ್ತಾಳೆಂಬ ಯೋಚನೆ ಬರುವುದಾದರೂ ಹೇಗೆ?
    ಸೊಗಸಾಗಿದೆ ಕವನ.

  15. October 15, 2009 at 9:26 am

    ಚೆನ್ನಾಗಿದೆ

  16. October 19, 2009 at 3:20 pm

    ಮನಸು, ದಿಲೀಪ್ ಹೆಗ್ಡೆ, ಶಿವು, ಪ್ರದೀಪ್, ವಿಜಯರಾಜ್ ಕನ್ನಂತ್, ಅನಿಕೇತನ ಸುನಿಲ್, ರೂಪಾ ಸತೀಶ್, ವೈಶಾಲಿ, ರೂಪಾ,

    ಕವಿತೆ ಮೆಚ್ಚಿಕೊಂಡಿದ್ದಕ್ಕೆ ನಿಮಗೆಲ್ಲರಿಗೂ ಧನ್ಯವಾದಗಳು,

  17. October 19, 2009 at 3:47 pm

    ಕಲ್ಲರೆ,

    ಹ್ಯಾಗೆ ಬರೆದರೂ ಒಂದು ಅಳುಕು ಇದ್ದೇ ಇರುತ್ತದೆ. ನಾನು ಬರೆವ ಕ್ಷಣ ಇದ್ದ ಗುಂಗಿನಲ್ಲಿ ಅರ್ಥವಾದ (ಇಷ್ಟವಾದ ಅಂತಲೂ ಅರ್ಥೈಸಿಕೊಳ್ಳಿ) ಕವಿತೆ, ಓದುಗನಿಗೆ (ಕೊನೆಗೆ ನನಗೂ!) ಓದುವಾಗ ದೊರಕುತ್ತದೋ ಇಲ್ಲವೋ ಎಂಬ ಅಳುಕು ಅದು.

    ನನಗ್ಯಾಕೋ ಇಂತದ್ದೆಲ್ಲಾ ಸಾತ್ವಿಕ ರೀತಿಯದ್ದು ಅನ್ನಿಸಿದೆ.

    ಚೆನ್ನಾಗಿ ಬಂದಿದೆ ಅಂದಿರಿ, ಥ್ಯಾಂಕ್ಯೂ!

  18. October 19, 2009 at 3:52 pm

    ಚಕೋರ,

    ನಿಮಗೆ ಯಾವುದು ಸರಿ ಅನ್ನಿಸಿದೆ, ಹೇಳಿ?

    ಅದರಲ್ಲೇ ನನ್ನುತ್ತರ ಅಡಗಿದೆ!

  19. October 19, 2009 at 3:54 pm

    ಶೃತಿ,

    ಬರೆದದ್ದು ಕವಿಸಮಯದಲ್ಲಿ, ಕವಿಕಲ್ಪನೆಯಲ್ಲಿ… ನಿಮ್ಮ ಪ್ರಶ್ನೆಗೆ ಉತ್ತರ ಇನ್ನೂ ಒಂದೆರಡು ವರುಷದಲ್ಲಿ ತಿಳಿಯುತ್ತದೆ..:)

  20. October 19, 2009 at 3:57 pm

    ಶರಣು,

    ಚೆನಾಗಿದೀನಿ ಸರ್. ಕವಿತೆ ನೀವು ಮೆಚ್ಕೊಂಡಿದ್ದು ನನಗೆ ಹೆಮ್ಮೆ ನೀಡಿದೆ.

    ******

    ಗೌತಮ್ ಹೆಗ್ಡೆ, ಕಾರ್ತಿಕ್ ಉಡುಪ,

    ನೀಲಿಹೂವಿನ ತೋಟಕ್ಕೆ ಸ್ವಾಗತ!

  21. October 19, 2009 at 4:03 pm

    ಚಾಮರಾಜ ಸವಡಿ,

    ಕವಿತೆ ನಿಮಗೆ ಇಷ್ಟವಾಗಿ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್.


Leave a Reply




ಹೆಜ್ಜೆ ಗುರುತು

  • 23,179 ಜನ

ಈ ಕ್ಷಣ

ಮೆನು

ಇಣುಕಿದವರ ಜಿಯೋಗ್ರಫಿ

Page copy protected against web site content infringement by Copyscape