ಟಣ್ ಟಣ್ ಸಾಸರಿನೊಳಗೆ
ಅಳತೆ ಮಾಡಿ ಹಾಕುವ ಚಾ
ಅಲ್ಲವೋ ಕವಿತೆಯೆಂದರೆ
ಗೂಡಂಗಡಿಯಲಿ ದಾರಿಹೋಕ
ಸುರಕ್ ಸುರಕ್
ಎಂದು ಸವಿವ ಟೀ.
ಬೇಕಾದ್ದನ್ನು ಹೆಕ್ಕಿ
ಬೇಡದ್ದನ್ನು ಬಿಸುಡುವ
ಬಫೆಯಲ್ಲವೋ ಕವಿತೆಯೆಂದರೆ
ಬಟ್ಟಲಿನೊಳಗೊಂದಗುಳೂ
ಉಳಿಯದಂತೆ ತಿಂದು
ತಪ್ತನಾಗಬಲ್ಲಂಥ ಹಸಿವು.
ಚೂರು ಸುರಿದು ಗಾಳಿಗೆ
ಹಾರಿಹೋಗುವ ಮೇಘವಲ್ಲವೋ
ಕವಿತೆಯೆಂದರೆ
ಸರ್ವಸ್ವವನೂ ಸುರಿದು
ಬರಿದಾಗುವ ಮಳೆ.
ಮಡಿಕೆಗಳಿಲ್ಲದ ರೇಷಿಮೆ
ಜರತಾರಿ ಸೀರೆಯಲ್ಲವೋ
ಕವಿತೆಯೆಂದರೆ
ಪುಟ್ಟನ ಮೂಗೊರೆಸಲ್ಪಟ್ಟ
ಅವ್ವನ ಸೀರೆ.
****
(ಫೋಟೋಕೃಪೆ : www.gulfnews.com)


ಜಗತ್ ಸತ್ಯವನ್ನೊಂದೇ
ಸಾಲಲ್ಲಿ ಕೆಡವಿ
ಹಾಕುವುದಲ್ಲವೋ,
ಸಾಲು ಸಾಲಲ್ಲು
ಸಾಲದಷ್ಟು ಕೆನ್ನೆ
ಮಿದು ಮುತ್ತುಗಳಂತೆ
ಕವಿತೆ
chennagide!
Hi Ranjith,
ಬಟ್ಟಲಿನೊಳಗೊಂದಗುಳೂ
ಉಳಿಯದಂತೆ ತಿಂದು
ತಪ್ತನಾಗಬಲ್ಲಂಥ ಹಸಿವು.
killer lines…! too gud ri…
Hi Ranjith,
ಬಟ್ಟಲಿನೊಳಗೊಂದಗುಳೂ
ಉಳಿಯದಂತೆ ತಿಂದು
ತಪ್ತನಾಗಬಲ್ಲಂಥ ಹಸಿವು.
Killer lines ri… liked it!
unable to comment
Beautiful lines Ranjith!!
ಮಡಿಕೆಗಳಿಲ್ಲದ ರೇಷಿಮೆ
ಜರತಾರಿ ಸೀರೆಯಲ್ಲವೋ
ಕವಿತೆಯೆಂದರೆ
ಪುಟ್ಟನ ಮೂಗೊರೆಸಲ್ಪಟ್ಟ
ಅವ್ವನ ಸೀರೆ.
ವಾಹ್, ಎಂಥಾ ಚೆಂದದ ಸಾಲು!
nimma avvan sire kavite tumba chennagide kivtea artavannu nivu visistvagiruv pratitimeglind kottiddiri.sogasagive nimma pratimegalu.