Archive

Author Archive

ಬಾಲಿವುಡ್ಡಿನ ಪ್ಲಾಸ್ಟಿಕ್ಕು ಮುಖಗಳು ಮತ್ತು ವಿವೇಕ..!

November 5, 2009 ರಂಜಿತ್ 4 comments

actgal2179

“ಗುಜರಿ ಅಂಗಡಿಯಲ್ಲಿ ಸಿಗುವ ಪ್ಲಾಸ್ಟಿಕ್ಕುಗಳಿಗಿಂತ ಹೆಚ್ಚು ನಮ್ಮ ಬಾಲಿವುಡ್ಡಿನಲ್ಲಿ ಸಿಗುತ್ತದೆ.. ಪ್ಲಾಸ್ಟಿಕ್ ನಗು, ಪ್ಲಾಸ್ಟಿಕ್ ಅಳು.. ಏನು ಬೇಕು, ಎಲ್ಲಾ ಪ್ಲಾಸ್ಟಿಕ್ ಮಯ!” ಅನ್ನುತ್ತಾ ವಿಷಣ್ಣನಾಗಿ ನಗುತ್ತಾರೆ ಬಾಲಿವುಡ್ಡಿನ ಪ್ರತಿಭಾನ್ವಿತ ನಟನಲ್ಲಿ ಓರ್ವನಾದ ವಿವೇಕ್ ಓಬರಾಯ್!

ಕೆಲ ವರುಷಗಳ ಹಿಂದೆ ತನಗೊಂದು ಚಾನ್ಸ್ ಕೊಡಿ ಅಂತ ವಿವೇಕ್, ರಾಮ್ ಗೋಪಾಲ್ ವರ್ಮಾನ ಬಳಿ ಬಂದಾಗ ಈತನ ವೇಷ ಭೂಷಣ ನೋಡಿ ವರ್ಮಾ ತನ್ನ ಕಥೆಯಲ್ಲಿನ ಪಾತ್ರಕ್ಕೆ ಈತ ಒಗ್ಗುವನಾ ಎಂದು ಸ್ವಲ್ಪ ಅನುಮಾನಿತನಾಗಿದ್ದ. ಸ್ಲಮ್ಮಿನ ಹುಡುಗನೊಬ್ಬ ಭೂಗತಲೋಕದ ಡಾನ್ ಆಗುವ ಪಾತ್ರಕ್ಕೆ ತನ್ನ ಗೆಟಪ್ಪು ಯಾವ ರೀತಿ ಇರಬೇಕೆಂದು ವಿವೇಕ್ ಆಗಲೇ ಮಾನಸಿಕವಾಗಿ ಸಿದ್ದನಾಗಿದ್ದು. ವರ್ಮಾ ಆಫೀಸಿಗೆ ಮರುದಿನವೇ ಆ ಹುಡುಗನ ರೀತಿಯಲ್ಲಿ ವಸ್ತ್ರ ಧರಿಸಿ ಬಂದದ್ದು ಕಂಡು ವಿವೇಕ್ ಗೆ ಚಾನ್ಸ್ ಕೊಡಲು ಬೇರಾವ ಕಾರಣವೂ ಬೇಕಾಗಿರಲಿಲ್ಲ. “ಕಂಪನಿ” ಚಿತ್ರದಿಂದ ತೆರೆಗೆ ಪದಾರ್ಪಣೆ ಮಾಡಿದ್ದ ವಿವೇಕ್ ಒಂದು ಕಾಲದಲ್ಲಿ ಅಂದಿನ ನಾಯಕರಿಗೆಲ್ಲಾ ಪೈಪೋಟಿಯಾಗಿ ಸಿದ್ಧವಾಗಿದ್ದ. ಕಣ್ಣಲ್ಲಿನ ಕೆಚ್ಚು, ಡೈಲಾಗ್ ಹೇಳುವ ಆಂಗ್ರಿ ಯಂಗ್ ಮ್ಯಾನ್ ಶೈಲಿ ಎಲ್ಲವೂ ಯುವಕರಿಗೆ ಅಚ್ಚುಮೆಚ್ಚಾಗಿತ್ತು. ಅದೇ ಚಿತ್ರದಲ್ಲಿ ಅಭಿನಯಿಸಿದ್ದ ಅಜಯ್ ದೇವಗನ್ ಅಭಿನಯವೂ ವಿವೇಕ್ ಅಭಿನಯದ ಹಿಂದೆ ಉಳಿದುಕೊಂಡಿತು.

ಅದು ವಿವೇಕ್ ನ ಪ್ರಥಮ ಹೆಜ್ಜೆ. ನಂತರದ್ದು ಈಗ ಇತಿಹಾಸ. “ಸಾಥಿಯಾ”, “ಧಮ್”, “ಶೂಟ್ ಔಟ್ ಅಟ್ ಲೋಖಂಡ್ ವಾಲಾ” ಎಲ್ಲಾ ಚಿತ್ರಗಳಲ್ಲಿ ವಿವೇಕ್ ತನ್ನ ಛಾಪು ಬಾಲಿವುಡ್ಡಿನಲ್ಲಿ ಮೂಡಿಸಿಯಾಗಿದೆ.

ಆದರೆ ಬದುಕು ಎಲ್ಲಾ ಸಿಹಿ ಬಡಿಸದು. ಖಾರ ಕಹಿ ಮಿಶ್ರಿತ ಅಡುಗೆ ಬದುಕಿನದ್ದು. ಒಂದು ಕಡೆಯಲ್ಲಿ ಬಾಲಿವುಡ್ಡಿನಲ್ಲಿ ತನ್ನತನವನ್ನು ಗಾಢವಾಗಿ ರೂಪಿಸಿಕೊಳ್ಳುವ ಹೊತ್ತಲ್ಲಿ ಬಿರುಗಾಳಿಯೊಂದು ಅವನ ಬದುಕನ್ನೇ ಅಲುಗಾಡಿಸಿತು. ಕನಸುಗಳನ್ನು ಕಡಿದು ಬೋಳು ಮಾಡಿತು.

ವಿವೇಕ್ ಬದುಕು ಮುಖ್ಯ ತಿರುವು ಕಂಡಿದ್ದು “ಕ್ಯೂಂ, ಹೋ ಗ ಯಾ ನಾ?” ಚಿತ್ರದ ಹೊತ್ತಿಗೆ. ಆಗ ಅದರಲ್ಲಿನ ನಾಯಕಿ ಐಶ್ವರ್ಯಾ ರೈ ಜತೆಗಿನ ವಿವೇಕ್ ಪ್ರೇಮ ಬರೀ ರೂಮರ್ ಆಗಿ ಉಳಿದಿರಲಿಲ್ಲ. ಮಡಿಕೇರಿಯಲ್ಲಿ ಶೂಟಿಂಗ್ ಆಗುವ ಸಮಯದಲ್ಲಿ ಅವರಿಬ್ಬರ ಪ್ರೇಮ ಬಾಲಿವುಡ್ಡಿನಲ್ಲು ಬಹಳ ಸುದ್ಧಿಯಾಗಿತ್ತು. ಆಗಷ್ಟೇ ಐಶ್ವರ್ಯಾ ರೈ, ಸಲ್ಮಾನ್ ನ ಪ್ರೇಮದ ಕಬಂಧ ಹಸ್ತದಿಂದ ಮುಕ್ತಿಯಾಗಿದ್ದಳು. ಸಲ್ಮಾನ್, ದೇವದಾಸನಂತೆ ಕುಡಿದು ಐಶ್ವರ್ಯಾ ಮನೆಯಲ್ಲಿ ರಂಪಾಟ ಮಾಡಿದ್ದೂ ಸುದ್ಧಿಯಾಗಿದ್ದಿತ್ತು. ಅಂತಹ ಹೊತ್ತಿನಲ್ಲೇ ತನ್ನ ಪ್ರೇಯಸಿ ವಿವೇಕ್ ಪಾಲಾಗುತ್ತಿರುವುದಕ್ಕೆ ಹೊತ್ತಿ ಉರಿದ ಸಲ್ಲೂ ಕುಡಿದ ಮತ್ತಿನಲ್ಲಿ ವಿವೇಕ್ ಗೆ ಮತ್ತೆ ಮತ್ತೆ ಕಾಲ್ ಮಾಡುತ್ತಾ ಬೆದರಿಕೆಯೊಡ್ಡಿದ. ಇಂತಹ

ಸಮಯದಲ್ಲಿ ಈ ಪ್ರಸಂಗವನ್ನು ಯಾವ ರೀತಿ ಡೀಲ್ ಮಾಡಬೇಕೆಂದು ಗೈಡ್ ಮಾಡಲು ವಿವೇಕ್ ನ ತಂದೆಯೂ ಜತೆಯಲ್ಲಿರಲಿಲ್ಲ. ವಿದೇಶದಲ್ಲಿದ್ದಿದ್ದರು. ಪ್ರೇಮದ ಮತ್ತಿನಲ್ಲಿದ್ದ ವಿವೇಕ್ ಗೆ ಆಗ ತೋಚಿದ್ದು ಇದನ್ನೆಲ್ಲಾ ಜನರಿಗೆ ತಿಳಿಸಬೇಕೆಂದಷ್ಟೇ. ಜನರಿಗೆ ಸಲ್ಮಾನ್ ಹೇಗೆ ಅನ್ನುವ ನಿಜ ಗೊತ್ತಾಗಲಿ ಎಂಬುದು ಆತನ ಉದ್ದೇಶವಾಗಿತ್ತು. ಹೀಗೆ ಮಾಡುವುದರಿಂದ ಐಶ್ವರ್ಯಾ ಮೆಚ್ಚಿಕೊಳ್ಳಬಹುದು, ಒಂದು ರೀತಿಯಲ್ಲಿ ಆಕೆಗೆ ಪರೋಕ್ಷ ಸಹಾಯ ಮಾಡಿದಂತೆ ಅಂತ ಭಾವಿಸಿದ ವಿವೇಕ್ ಪತ್ರಿಕೆಯವರನ್ನು ಕರೆದು ನಡೆದದ್ದನ್ನೆಲ್ಲಾ ವಿವರಿಸಿದ. ಬಾಯಿ ಚಪ್ಪರಿಸುತ್ತಾ ಪತ್ರಿಕೆಗಳು ಬರೆದುಕೊಂಡವು. ಹೆಡ್ ಲೈನ್ ಗೆ ವಿಷಯ ಸಿಕ್ಕಿದ ಖುಷಿಯಿಂದ ಮುಲುಗಿದವು. ದೃಶ್ಯ ಮಾಧ್ಯಮಕ್ಕೂ ಬ್ರೇಕಿಂಗ್ ನ್ಯೂಸ್ ಗೆ ಸ್ಕೂಪ್ ಸಿಕ್ಕಂತಾಯಿತು. ಆತ ಹೇಳಿದ್ದು ನಿಮಿಷಕ್ಕೆ ಅರವತ್ತು ಸೆಕಂಡುಗಳಂತೆ ಮತ್ತೆ ಮತ್ತೆ ತೋರಿಸಲ್ಪಟ್ಟಿತು.

ಇದೊಂದು ಘಟನೆ ವಿವೇಕ್ ಬದುಕಿನ ಪಥವನ್ನೇ ತಿರುಗಿಸಿತು. ತನ್ನ ಭವಿಷ್ಯತ್ತಿನ ಅಡಿಗಲ್ಲೇ ಬುಡಮೇಲಾದವು. ಮುಂದೆ ಹೀಗಾಗಬಹುದು ಅನ್ನುವ ಚಿಕ್ಕ ಸುಳಿವೂ ಸಿಗದಂತಿದ್ದ ವಿವೇಕ್ ಗೆ ಮುಂದಿನ ಕ್ಷಣಗಳು “ಬದುಕನ್ನು” ತೆರೆದಿಡುತ್ತಾ ಹೋದವು. ಸಂಗಡಿಗರ ನಿಲುವುಗಳಲ್ಲಿನ ಬದಲಾವಣೆ ಅವನಿಗೆ ಜೀವನ ಪಾಠ ಕಲಿಸಿತು.

ಮೊದಲು ಐಶ್ವರ್ಯಾಳಿಂದ ಆತನಿಗೆ “ನಿನ್ನ ವರ್ತನೆ ಬಾಲಿಶ, ಹಾಗೆ ಮಾಡಬಾರದಿತ್ತು, ತೀರಾ ಚೈಲ್ಡಿಶ್ ನೀನು!” ಅನ್ನುವ ಉತ್ತರ ಬಂದಿತು. ನಿಧಾನವಾಗಿ ಆಕೆ ಅವನಿಂದ ದೂರವಾದಳು. ಬಾಲಿವುಡ್ಡಿನಲ್ಲಿ ಸಲ್ಮಾನ್ ಪ್ರಭಾವ ಹೇಗಿತ್ತೆಂದರೆ ಈ ಎಲ್ಲಾ ಘಟನೆಗಳಿಂದ ತುಂಬಾ ನಷ್ಟವಾಗಿದ್ದು ತಪ್ಪೇನೂ ಮಾಡದ ವಿವೇಕ್ ಗೇನೆ ಆಯಿತು. ಖಾನ್ ದಾನ್ ಪ್ರಭಾವದಿಂದ ವಿವೇಕ್ ನ ಸಿನೆಮಾ ಜೀವನ ಅಸ್ತವ್ಯಸ್ತವಾಯಿತು. ತಮ್ಮ ಚಿತ್ರಕ್ಕಾಗಿ ಸಹಿ ಮಾಡಿಸಿದ್ದ ನಿರ್ಮಾಪಕರು ಏನೇನೋ ಕಾರಣ ಹೇಳಿ ಸಿನೆಮಾ ಮಾಡುವುದನ್ನು ತಪ್ಪಿಸಿಕೊಂಡರು. ಚಿತ್ರದ ಉದ್ಯಮದವರು ವಿವೇಕ್ ನನ್ನು ಗೆಳೆಯನೆಂದರೆ ತಮಗೆ ನಷ್ಟ ಎಂಬಂತೆ ನಡೆದುಕೊಂಡರು.

ಚಿತ್ರವೊಂದಕ್ಕೆ ತನ್ನ ನಟನೆಗೆ ಪ್ರಶಸ್ತಿ ಕೊಡುವುದಾಗಿ ಪತ್ರ ಬರೆದಿದ್ದ ಪ್ರಸಿದ್ಧ ಸಂಘಟನೆ ನಂತರ ತಾನು ಆ ಸಮಾರಂಭಕ್ಕೆ ಬರಬಾರದೆಂಬಂತೆ ನಡೆದುಕೊಂಡಿತು.

ಇದೆಲ್ಲಾ ವಿವೇಕ್ ಗೆ ಆ ಘಟನೆಯಲ್ಲಿ ನಿಜವಾದ ತಪ್ಪಿತಸ್ಥ ಸಲ್ಲೂ ಅಲ್ಲ, ತಾನೇ ಎಂಬ ಭಾವನೆ ಮೂಡುತ್ತಿತ್ತು. ಅಲ್ಲದೇ ಹಾಗೆ ಪಬ್ಲಿಕ್ ಆಗಿ ಒಬ್ಬರ ಮಾನ ಹರಾಜು ಹಾಕುವುದು ತಪ್ಪು ಎಂಬ ಅರಿವೂ ಆಗಿ, ಇಡೀ ಚಿತ್ರೋದ್ಯಮದೆದುರು ಸ್ಟೇಜ್ ನ ಮೇಲೆ ಸಮಾರಂಭವೊಂದರಲ್ಲಿ ತಲೆಬಾಗಿ “ಸಾರಿ” ಕೇಳಿದ. ಸಲ್ಮಾನ್ ತಂದೆ ಅನಾರೋಗ್ಯವಾಗಿದ್ದಾಗ ಸೌಜನ್ಯಕ್ಕಾಗಿ ಅವರನ್ನು ಭೇಟಿ ಮಾಡಿ ಅವರ ಆರೋಗ್ಯಕ್ಕಾಗಿ ಬೇಡಿದ. ತನ್ನ ನಡೆವಳಿಕೆಯಿಂದ ಅವರಿಗೆಷ್ಟು ನೋವಾಗಿದ್ದಿರಬೇಕು ಅದಕ್ಕೆ ಕ್ಷಮೆ ಯಂತಹ ಭೇಟಿಯದು ಅಂತ ಹೇಳಿಕೊಂಡ.

ಇಷ್ಟಾಗಿಯೂ ವಿವೇಕ್ ಗೆ ಏನೂ ಸಿಗಲಿಲ್ಲ; ಕೊನೆಗೆ ಕ್ಷಮೆಯೂ!

ತನ್ನ ಗೆಳೆಯನಿಗಿಂತ ಹೆಚ್ಚಾಗಿದ್ದ ಸೊಹೈಲ್ ಖಾನ್ ( ಸಲ್ಲೂ ಸಹೋದರ) ಒಂದು ಪಾರ್ಟಿಯಲ್ಲಿ ವಿವೇಕ್ ಮಾತಾಡಿಸಲು ಬಂದೊಡೆ ಮುಖ ತಿರುವಿ ಹೊರಟುಹೋದ. ಒಂದಿಷ್ಟು ದಿನ ವಿವೇಕ್ ಗೆ ಯಾವ ಸಿನೆಮಾನೂ ಸಿಗಲಿಲ್ಲ. ಪ್ರಮುಖ ನಿರ್ದೇಶರೊಬ್ಬರು ಪಾರ್ಟಿಯೊಂದರಲ್ಲಿ ಭೇಟಿಯಾದಾಗ, “ವಿವೇಕ್, ನಿಮ್ಮ ಜತೆ ಸಿನೆಮಾ ಮಾಡಬೇಕೆಂದು ತುಂಬಾ ಅನ್ನಿಸಿತ್ತು, ಆದರೇನು ಮಾಡಲಿ ನಾನು ಮಾಡಲು ಸಾಧ್ಯವಿಲ್ಲ!” ಎಂದು ಸಲ್ಮಾನ್ ಗುಂಪಿನಿಂದ ತಿರಸ್ಕೃತರಾಗುವ ಭಯ ತೋಡಿಕೊಂಡಿದ್ದನ್ನು ನೋವಿನಿಂದಲೇ ಹೇಳಿಕೊಳ್ಳುತ್ತಾರೆ ವಿವೇಕ್.

ಇದೆಲ್ಲದರ ಹೊರತಾಗಿ, ಆತನ ಎಷ್ಟೇ ಸಿನೆಮಾ ಗೆಲ್ಲಲಿ, ಸೋಲಲಿ, ಇಡೀ ಬಾಲಿವುಡ್ಡು ಆತನಿಗೆ ಅಂಟುರೋಗ ಬಂದವನಂತಾಡಲಿ, ನಮಗೆ ಮಾತ್ರ ತಮಿಳುನಾಡಿನಲ್ಲಿ ಸುನಾಮಿಯಿಂದಾಗಿ ಸಾವು ನೋವು ಸಂಭವಿಸಿ ಅಲ್ಲಿನ ಜಾಗವೆಲ್ಲಾ ಸ್ಮಶಾನದಂತಾಗಿದ್ದಾಗ ತನ್ನ ಬಾಲಿವುಡ್ಡುಗಿರಿ ಎಲ್ಲ ಪಕ್ಕಕ್ಕಿಟ್ಟು ಗ್ರಾಮವೊಂದರ ಪುನರ್ನಿರ್ಮಾಣಕ್ಕಾಗಿ ತೊಡಗಿಕೊಂಡವನಾಗಿ, ಇಡೀ ಬಾಲಿವುಡ್ಡು ತನ್ನ ಅದೇ ಪ್ಲಾಸ್ಟಿಕ್ ಮುಖ, ಪ್ಲಾಸ್ಟಿಕ್ ಹೃದಯ, ಪ್ಲಾಸ್ಟಿಕ್ ನಗುವಿನಿಂದ ತಮ್ಮ ವ್ಯಥೆಯನ್ನು ಬಾಯ್ಮಾತಲ್ಲಿ ತೋಡಿಕೊಂಡಾಗ, ಅದನ್ನೆಲ್ಲಾ ಏನೂ ಮಾಡದೇ ಮೌನವಾಗಿ ತನ್ನ ಮಾನವೀಯತೆಗಾಗಿಯಷ್ಟೇ ಕೆಲಸ ಮಾಡುವಂತೆ ತನ್ನ ಸಮಯ, ಹಣವನ್ನು ಮುಡುಪಾಗಿಟ್ಟ ಹೃದಯವಂತನಾಗಿ ಸದಾ ನಮ್ಮೆದೆಯಲ್ಲಿರುವ ವ್ಯಕ್ತಿಯಾಗಿ

ವಿವೇಕ್ ಗೆಲ್ಲುತ್ತಲೇ ಇರುತ್ತಾನೆ. ಪ್ಲಾಸ್ಟಿಕ್ ಹೂಗಳ ಮಧ್ಯೆ ಅರಳಿದ ಮೊಗ್ಗಿನಂತೆ ಕಂಪು ಸೂಸುತ್ತಾನೆ, ಅಭಿಮಾನಿಗಳೆದೆಯಲಿ ಜೀವಂತವಾಗಿರುತ್ತಾನೆ.

ಈಗ ಅದು ಹೇಗೋ “ಖುರ್ಬಾನ್” ನಲ್ಲಿ ವಿವೇಕ್ ಗೆ ಬಾಲಿವುಡ್ಡಿನಲ್ಲಿ ಎಲ್ಲಾ ಬಿರುಗಾಳಿಯ ನಡುವೆಯೂ ತನ್ನ ಅಸ್ತಿತ್ವ ತೋರಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಯಾಕೋ ಆತ ಗೆಲ್ಲಲಿ, ಅವಮಾನದ ಮಂಜೆಲ್ಲಾ ಕರಗಲಿ, ಎಲ್ಲಾ ಖಾನ್ ದಾನ್ ಗಳ ಸುಳಿಯಲ್ಲೂ ತನ್ನ ಗಾಡ್ ಫಾದರ್ ಗಳಿಲ್ಲದ ಸಿನೆಮಾ ಬದುಕು ಕಂಗೊಳಿಸಲಿ ಅಂತ ಹಾರೈಸಬೇಕನ್ನಿಸುತ್ತಿದೆ.

ವಿವೇಕ ಗೆಲ್ಲಲಿ!

********

(ಇದು “ಪೃಥ್ವಿ” ಪತ್ರಿಕೆಯಲ್ಲಿ ಪ್ರಕಟಿತ ಬರಹ.)

 

Categories: ಸಿನೆಮಾ

ಹೆಸರಿನ ಹಂಗಿಲ್ಲದ ಹನಿಗಳು

November 2, 2009 ರಂಜಿತ್ 9 comments

ಅಂಗಳದ ಉದ್ದಕ್ಕೂ

ತಾರೆಗಳ ಪ್ರಣತಿ ಸಾಲು..

 ಇದ್ದರೂ ಸಹ ಅಂಗಳದ

ತುಂಬಾ ಚೆಲ್ಲಿಹನು ಚಂದಿರ

ತನ್ನ ಬೆಳಕಿನ ಹಾಲು…

 

 

******

 

ನೋವುಗಳ ಕತ್ತಲನು

ಹೊಡೆದೋಡಿಸಲಿ

ನಗುವಿನ ಬಿಸಿಲುಕೋಲು..

 ಎದೆಯ ಗಾಯಗಳನ್ನೆಲ್ಲಾ

ನಯವಾಗಿ ಹೊಲಿದುಬಿಡಲಿ

ಪ್ರೀತಿಯ ಒಂದು ಎಳೆ ನೂಲು..

 

*******

 

 

ಈ ಖಾಲಿ ನಟ್ಟಿರುಳಲಿ

ನಾನು ಮತ್ತು

ಬಾನು

ಎರಡೂ

ಚುಕ್ಕಿ ಜೋಡಿಸಲು

ಬರುವ ಹುಡುಗಿಗಾಗಿ

ಕಾಯುತಿರುವ ಅಂಗಳ

 

*******

 

ನೇಸರನು ಎಲ್ಲೋ

ಮರೆಯಲ್ಲಿ ಕೂತು..

ಕತ್ತಲ ಕಾವಲಿಗೆ

ಹುಯ್ದ ರಾತ್ರಿಯ ದೋಸೆಗೆ

ನೂರೆಂಟು ತೂತು!

 

*****

 First_Light

 

ಮುಂದಿನ ದಾರಿಗೆ

ಬೆಳಕೆಲ್ಲಾ ಮುಗಿದು ಹೋದರೂ

ಎದೆಯೊಳಗೆ ಉರಿಯುತಿರಲಿ ಸದಾ

ಭರವಸೆಯ ಮಿಣುಕು ದೀಪ..

 

****

 

ಈ ಹನಿಗಳು ಇವತ್ತಿನ (೨-೧೧-೦೯) ವಿಜಯ ಕರ್ನಾಟಕ ದ ಸಿಂಪ್ಲಿಸಿಟಿ ಪೇಜ್ ನಲ್ಲಿ ಪ್ರಕಟವಾಗಿವೆ.

 

 

Categories: ಹನಿಗಳು...

ಕವಿತೆಯೆಂದರೆ..!

October 30, 2009 ರಂಜಿತ್ 6 comments

 

ಕವಿತೆಯೆಂದರೆ
ನಾನು ನೀನಾಗುವ ಅದ್ಭುತ
ಅವಕಾಶ
ಆದ್ದರಿಂದಲೇ ನಾನು ಕವಿತೆಯಾಗುವುದನು
ಪ್ರೀತಿಸುತ್ತೇನೆ..

37291288_67970d6387

ಕವಿತೆಯೆಂದರೆ
ನಾನು ನೀನು ಇಬ್ಬರೂ
ಕಲೆತು ನಾನ್ಯಾರು ನೀನ್ಯಾರು
ಅಂತ ಗೊತ್ತಾಗದ ಮಬ್ಬು.
ಅದಕ್ಕೇ ಕೆಲವೊಮ್ಮೆ ಕವಿತೆಯಾಗಲು
ಭಯಪಡುತ್ತೇನೆ.

ಕವಿತೆಯೆಂದರೆ
ಕತ್ತಲೆಯಲಿ ಮೆದು ದೇಹವೊಂದು
ಡಿಕ್ಕಿ ಹೊಡೆದಂತೆ,
ಸ್ಪರ್ಶಿಸಿದ್ದು ಹೆಣ್ಣೆಂದು ಖುಷಿಪಡಬೇಕೋ
ಗಂಡೆಂದು ಸಿಟ್ಟಾಗಬೇಕೋ
ಎಂದು ಅರಿವಾಗದ ಗೊಂದಲ.

ಅದಕ್ಕೆ ಕವಿತೆಯಾಗಲು
ತುಂಬ ಸಲ ಸಂದೇಹಿಸುತ್ತೇನೆ!

Categories: ಕವಿತೆ

ನಿಮಗುಂಟೇ ಅರಿವು?

October 26, 2009 ರಂಜಿತ್ 7 comments

ಪಕ್ಕದಮನೆಯಲ್ಲೇ ಕುಟುಂಬದ ಹಿರಿಯನೊಬ್ಬನ ಸಾವು
ಇದ್ದಿದ್ದರೂ ನಿಮ್ಮ ಮನೆಯ ಸಡಗರದ
ಕೇವಲ ಒಂದು ಪಾಲೂ
ಬಿಟ್ಟುಕೊಡದೇ ಹೋದಿರಾ
ಒಂದೇ ಒಂದು ಕ್ಷಣದ ಮೌನಪ್ರಾರ್ಥನೆ
ನಿಮ್ಮನ್ನು ಮನುಷ್ಯನಾಗಿಸುತ್ತಿತ್ತಲ್ಲ
ಎಂಥಾ ಅವಕಾಶ ತಪ್ಪಿಸಿಕೊಂಡಿರಲ್ಲಾ

ಅಕೋ ಅಲ್ಲಿ ರೋಗಿಷ್ಟ ಕೈಯ್ಯನ್ನು ಪ್ರೀತಿಯಿಂದ
ನೇವರಿಸಿದ ಹೃದಯದ ಬಿಸಿ
ನಿಮ್ಮವರೆಗೂ ಯಾಕೆ ಬರದೇಹೋಯಿತು

ಆತ್ಮಸಾಕ್ಷಿಯ ಪ್ರಶ್ನೆಗಳಿಗೆ ತಡವಿ
ಆತಂಕಿತರಾಗಿ ಬೆವರಿಳಿಸಿದಾಗ
ನಿಮ್ಮನು ನೇವರಿಸಿದ ತಂಗಾಳಿಗಾಗಿ
ನೀವೇನು ನೀಡಿದಿರಿ

ಅಲೆಮಾರಿಗಳ ಊರಿನಲ್ಲಿ
ಜಾರಿದವರಿಗೆ ಆಸರೆಯಾಗಲಿಲ್ಲವೇಕೆ ನೀವು
ಅದರ ಅರಿವೇ ಇರಲಿಲ್ಲವಲ್ಲವೇ
ನಿಮ್ಮದೇ ಊರುಗೋಲು ಎಡವಿದವರೆಗೂ

ನಿಜಾ ಹೇಳಿ, ನಿಮಗುಂಟೇ ಅರಿವು

ದಿಗ್ದಿಗಂತದ ಮೂಲೆಯಲ್ಲೆಲ್ಲೋ
ಇದ್ದರೂ ನಿಮ್ಮ ಹಾದಿಯುದ್ದಕ್ಕೂ
ಖುಷಿ ನೀಡಿದ,
ಗೌಜುಗದ್ದಲದ ಬೇಲಿಯೊಳಗೇ
ಮೌನವಾಗಿ ನಸುನಗುತ್ತಿದ್ದ,
ನಿಮ್ಮ ಒಂದು ಪ್ಚ್ ನ್ನು ಎಂದೂ ಬಯಸದ
ನೀಲಿಹೂವಿನ ಮರಣ?

ಇತ್ತೀಚೆಗೆ

ಬಾಲ್ಯದ ತುಂಬಾ

ಚಂದಮಾಮನನು ತೋರಿಸಿಯೇ

ಉಣ್ಣಿಸಿದ್ದ ಅವ್ವನಿಗೆ

ಕಲೆಯಿರದ ಚಂದಿರನ

ಕಲ್ಪನೆಯೇ ಇರಲಿಲ್ಲವಂತೆ

 

painting

ರೂಮಿನಲಿ ಚೆಲ್ಲಾಪಿಲ್ಲಿಯಾಗಿ

ಬಿದ್ದ ವಸ್ತುಗಳಂತಿದ್ದ ಬದುಕಿಗೆ

ಒಪ್ಪ ಓರಣಗಳ ಕಲಿಸುವ

ಟೀಚರಿನ ಅವಶ್ಯಕತೆಯಿದೆಯೆಂದು

ನನಗೂ ಅರಿವಿರಲಿಲ್ಲ.

ಬೇಲಿ ಹಾರಿ ಲೂಟಿ ಮಾಡುವ

ಜೋಡಿ ಹೋರಿಗಳಂತಿದ್ದ ಕಣ್ಣುಗಳನು

ನೊಗ ಕಟ್ಟುವಂಥ ಮೊಗ

ಇದೆಯೆಂಬುದರ ತಿಳಿವೂ ಇದ್ದಿರಲಿಲ್ಲ

ಅವಳು ಸಿಕ್ಕಿದ್ದು

ತೀರಾ ಇತ್ತೀಚೆಗೆ.

 

- ಅಕ್ಟೋಬರ್ ಮಾಸದ “ಮಯೂರ” ದಲ್ಲಿ ಪ್ರಕಟಿತ.

Categories: ಕವಿತೆ

ಚಿವುಟಿ ನೋಡಿಕೊಳ್ಳಬಾರದೆಂಬಂತಹ ಕನಸು!

September 22, 2009 ರಂಜಿತ್ 14 comments
ವರುಷಗಳ ಕೆಳಗೆ ಅಂಜುತ್ತ ಮೊದಲ ಹೆಜ್ಜೆಯಿಟ್ಟಿದ್ದ ನೀಲಿಹೂವು ಈಗ ನೂರು ಪೋಸ್ಟ್ ನ್ನು ಮುಟ್ಟಿದೆ. ಒಂದಿಷ್ಟು ಹನಿ, ಒಂದಿಷ್ಟು ಕವಿತೆ, ಮತ್ತೊಂದಿಷ್ಟು ಪುಟ್ಟ ಪುಟ್ಟ ಕತೆಗಳೊಂದಿಗೆ ಹೆಜ್ಜೆ ಬೆಳೆಸಿದ ಹೂವು, ಅಡುಗೆ, ಸಿನೆಮಾ, ಮಾಧ್ಯಮ, ಕತೆ, ಲೇಖನ, ಹಾಸ್ಯ, ಹೀಗೆ ಭಿನ್ನ ಎಸಳುಗಳೊಂದಿಗೆ ಅರಳಿದೆ. ಭಾವಗಳನ್ನು ಉದ್ದೀಪಿಸಿಕೊಳ್ಳುತ್ತ ಬೆಳೆದಿದೆ. ಹೆಜ್ಜೆ ಜತೆ ಹೆಜ್ಜೆಗೂಡುತ್ತಾ ನೂರು ಮುಟ್ಟಿದೆ.
ಪ್ರಾರಂಭದಲ್ಲಿ ನನ್ನ ಬರಹಗಳ ಹದದ, ನಾನು ಬರೆಯಬಾರದೇನೋ ಎಂಬಂತೆ ಮೂಡಿದ್ದ ಅನುಮಾನಗಳೆಲ್ಲ ನಿಮ್ಮೆಲ್ಲರ ಪ್ರೋತ್ಸಾಹ, ಪ್ರೇರಣೆ ಮೆಚ್ಚುಗೆಯಿಂದ ಹೋಗಲಾಡಿಸಿಕೊಂಡು ಮತ್ತೆ ಮತ್ತೆ ಬರೆದಿದ್ದೇನೆ. ಅಲ್ಲಲ್ಲಿ  ಆಗಿದ್ದ ತಪ್ಪುಗಳನ್ನು ಮತ್ತೊಮ್ಮೆ ಮಾಡಲಾರೆ ಎಂದು ಧೃಡವಾಗಿ ಅಂದುಕೊಂಡೇ ಮುಂದುವರಿದಿದ್ದೇನೆ. ಕಲಿತಿದ್ದೇನೆ, ಬರಹದಲ್ಲಿ ಮೊದಲಿಗಿಂತ ಬಲಿತಿದ್ದೇನೆ.
ಈಗ ಅಜೇಯವಾಗಿ ನೂರು ಮುಟ್ಟಿದ ಹೆಮ್ಮೆಯ ಜತೆಗೆ ಮತ್ತೆರಡು ಖುಷಿಯ ವಿಚಾರಗಳೂ ಇವೆ.
ನನ್ನ “ಬದುಕು, ಪ್ರೀತಿ ಮತ್ತು ನಿನ್ನ ಮೇಲೆ ಬರೆಯುತ್ತಿರುವ ಕೊನೆಯ ಅಕ್ಷರಗಳಿವು!” ಎಂಬ ಪ್ರೇಮ ಪತ್ರಕ್ಕೆ “ಸಖಿ” ಪಾಕ್ಷಿಕದಲ್ಲಿ ಉತ್ತಮ ಪತ್ರಲೇಖನ ಎಂಬ ಬಹುಮಾನ ಬಂದಿದೆ. ಮತ್ತು ಮೊದಲ ಬಾರಿಗೆ ಈ ಸಲದ “ಮಯೂರ”ದಲ್ಲಿ ನನ್ನದೊಂದು ಕವಿತೆ ಪ್ರಕಟ ಆಗಿದೆ.
ಈ ನೀಲಿಹೂವು ಎಂದರೆ ನನ್ನ ಪಾಲಿಗೆ  ನಗೆಮುಗುಳಿನ ಆಳದಲ್ಲಿನ ನೋವಿನೆಸಳಿನ ಹೀನಾಯ ಸೋಲು. ಸೋಲೊಪ್ಪದ ನೋವುಗಳನ್ನೆಲ್ಲಾ ನಮ್ಮದಾಗಿಸಿ, ನಲಿವಾಗಿಸಿಕೊಳ್ಳುವ ಪ್ರಯತ್ನ.  ಬೆರಗಿಂದ ಬದುಕಿನತ್ತ ಮುಖಮಾಡಿಕೊಂಡಿರುವ ಮನಸಿನ ಪಲುಕುಗಳು.
ನೀಲಿಹೂವು ನನ್ನ ಪಾಲಿನ ಚಿವುಟಿ ನೋಡಿಕೊಳ್ಳಬಾರದಂಥ ಕನಸು!
ಈ ನೂರು ನಾಟೌಟ್ ಸಂದರ್ಭದಲ್ಲಿ ನನ್ನ ಇಷ್ಟದ ಲೇಖಕರೂ ಆಗಿರುವ ಚೇತನಾ ತೀರ್ಥಹಳ್ಳಿ, ಮತ್ತು ಚಾಮರಾಜ ಸವಡಿ ಯವರಿಗೆ ನೀಲಿಹೂವಿನ ಕುರಿತು ಎರಡು ಮಾತು ಆಡಲು ಕೇಳಿಕೊಂಡಿದ್ದೆ. ಪ್ರೀತಿಯಿಂದ ನಾಲ್ಕಕ್ಷರ ಬರೆದಿದ್ದಾರೆ. ಇನ್ನಷ್ಟು ಬರೆಯಲು ಉಮೇದು, ಧೈರ್ಯ ತುಂಬಿದಾರೆ. ಮೊದಲ ಹೆಜ್ಜೆಯಿಟ್ಟಾಗ ನೀಡುವ ಪ್ರೋತ್ಸಾಹ, ಚಪ್ಪಾಳೆ ಮುಂದೆ ಓಡುವಾಗಲೂ ನೆನಪಿನ ಪದರಗಳಲ್ಲಿ ಅಳಿಯದೇ ಅಚ್ಚಾಗಿರುತ್ತದಂತೆ. ಆ ಮಾತುಗಳು ಉಂಟು ಮಾಡುತಿರುವ ಸಂತೋಷ ಮತ್ತು ಸ್ಪೂರ್ತಿ, ಪ್ರೇರಣೆಗೆ ನಾನವರಿಗೆ ಸದಾ ಋಣಿ.
ಹಾಗೂ ಓದಿ, ತಿದ್ದಿ, ಮೆಚ್ಚಿ, ಹೊಗಳಿ, ಸುಮ್ಮನಿದ್ದು ಕೂಡ, ಸದಾ ಪ್ರೋತ್ಸಾಹಿಸುತ್ತಿರುವ ನಿಮಗೂ ಧನ್ಯವಾದಗಳು.
**********
ಮನಸಿನ ಹದವ ನೀವೇ ಬಲ್ಲಿರಿ…
ನಿಮ್ಮ ಬ್ಲಾಗ್‌ ಮತ್ತು ಅದರಲ್ಲಿರುವ ಅದ್ಭುತ ಕವಿತೆಗಳು ನನಗೆ ನೀಡಿದ ಪ್ರೇರಣೆಯನ್ನು ಹೇಗೆ ಹೇಳಲಿ ರಂಜಿತ್? ಅವು ನನ್ನನ್ನು ಕಾಡಿವೆ, ಕೆಣಕಿವೆ, ಪ್ರೇರೇಪಿಸಿವೆ. ನಾನು ಮರೆತೇಬಿಟ್ಟಿದ್ದ ನನ್ನೊಳಗಿನ ಕವಿಯನ್ನು ಮತ್ತೆ ಎಚ್ಚರಿಸಿವೆ. ಅತ್ಯಂತ ತಾಕತ್ತಿನ ಕವಿತೆಗಳವು. ಸಮಾನ ಮನಸ್ಕರೊಂದಿಗೆ ನಿಮ್ಮ ಕವಿತೆಗಳನ್ನು ಎತ್ತಿಕೊಂಡು ಚರ್ಚಿಸುವಷ್ಟರ ಮಟ್ಟಿಗೆ ಅವು ನನ್ನನ್ನು ಪ್ರಭಾವಿತನನ್ನಾಗಿಸಿವೆ.
ನಿಮ್ಮಿಂದ ಮತ್ತಷ್ಟು ಕವಿತೆಗಳು ಬರಲಿ. ಭಾವನೆಗಳನ್ನು ಹೀಗೂ ಹೇಳಲು ಸಾಧ್ಯ ಎಂಬ ಅಚ್ಚರಿ-ಮುದ ಮೂಡಿಸುವ ನಿಮ್ಮ ಬರವಣಿಗೆ ಮತ್ತಷ್ಟು ಸಮೃದ್ಧವಾಗಲಿ. ಅವನ್ನು ಓದುತ್ತ ನಾವೂ ಎತ್ತರದ ಸ್ಥಿತಿ ತಲುಪುವಂತಾಗಲಿ. ಗಜಲ್‌ನ ಸೊಗಸನ್ನು ಕನ್ನಡಕ್ಕೆ ಉತ್ಕೃಷ್ಟವಾಗಿ ತರುತ್ತಿರುವ ನಿಮ್ಮ ಲೇಖನಿಗೆ ಸಾವಿರ ವಂದನೆಗಳು.
ನೀಲಿಹೂವು ಅರಳುತ್ತಲೇ ಹೋಗಲಿ. ಅದರ ಬರವಣಿಗೆಯ ಪರಿಮಳ ಎಲ್ಲರನ್ನೂ ತಾಕಲಿ. ಮನಸ್ಸು ಮುದಗೊಳಿಸಲಿ.
- ಚಾಮರಾಜ ಸವಡಿ
***************
ನೀಲಿ ಹೂವು ಬ್ಲಾಗ್ ಶುರುವಾದಾಗ ನನ್ನ ಗಮನ ಅತ್ತ ಹರಿದಿದ್ದು, ಮತ್ತೆ ಮತ್ತೆ ನೋಡುವಂತೆ ಮಾಡಿದ್ದು ಅದರ್ಲ್ಲಿ ಬರುತ್ತಿದ್ದ ಜೇನಹನಿಯಂತಹ ಕವಿತೆಗಳು (ರುಚಿ ಮತ್ತು ಗಾತ್ರಗಳೆರಡರಲ್ಲೂ) ಹಾಗೂ ಪುಟಾಣಿ ಸಾಲುದ್ದದ ಕಥೆ ಹೇಳುವ ಬರಹಗಳು. ರಂಜಿತ್ ನನಗೆ ವೈಯಕ್ತಿಕವಾಗಿ ಪರಿಚಿತರಲ್ಲ.  ಬ್ಲಾಗಿಗೆ ಮೊದಲು ಏನಾದರೂ ಬರೆದಿದ್ದಿದೆಯೇ ಅನ್ನೋದೂ ಗೊತ್ತಿಲ್ಲ. ಆದರೆ ಬ್ಲಾಗ್ ಬರಹಗಳ ಮೂಲಕ ಓದಿದವರ ನೆನಪಲ್ಲುಳಿಯುವಂತೆ ಸೆಳೆಯುವ ಸಾಮರ್ಥ್ಯ ಇವರಲ್ಲಿರುವುದು ನಿಜ.
ಸದಾ ಉತ್ಸಾಹದಿಂದ ಬ್ಲಾಗಿಸುತ್ತ, ಚರ್ಚೆಗೆಳೆಯುತ್ತ ನೂರರ ಗಡಿ ತಲುಪಿರುವ ನೀಲಿಹೂವಿನಲ್ಲಿ ವೈವಿಧ್ಯತೆಯಿದೆ. ಮತ್ತು, ‘ಬ್ಲಾಗ್ ಸ್ಪೇಸ್ ತೋಚಿದ್ದು ಗೀಚುವುದಕ್ಕೆ’ ಅಂತಿದ್ದರೂ ತಮಗೆ ತೋಚಿದ್ದನ್ನೆಲ್ಲ ಚೆಂದವಾಗಿಯೇ ಗೀಚುತ್ತ ಯಾರೇ ಆದರೂ ಖುಷಿಯಿಂದ ಓದಬಹುದಾದಂತದ್ದನ್ನೆ ಬ್ಲಾಗ್ ಜಗತ್ತಿಗೆ ಕೊಡುತ್ತಿದೆ. (ಹಾಗೇ ಒಂದೆರಡು ತರಲೆ ಪೋಸ್ಟ್ ಗಳ ಮೂಲಕ ಬ್ಲಾಗಿನ ‘ಹದ’ ಕಾಯ್ದಿಟ್ಟುಕೊಂಡಿರುವುದೂ ಇದರ ಹೆಗ್ಗಳಿಕೆ!)
ಬ್ಲಾಗ್ ನಲ್ಲಿ ಬರೆಯುತ್ತ ಬರೆಯುತ್ತಲೇ ಒಳ್ಳೆಯ ಕವಿಯ ಎಲ್ಲ ಲಕ್ಷಣಗಳನ್ನೂ (ವಿಶೇಷವಾಗಿ ನನಗೆ ಇವರ ಕವಿತೆಗಳು ಇಷ್ಟವಾಗುವುದರಿಂದ) ಮೈಗೂಡಿಸಿಕೊಂಡಿರುವ ರಂಜಿತ್ ಬರೀ ಬ್ಲಾಗಿಂಗಿಗೆ ಸೀಮಿತವಾಗದೆ ಬೆಳೆಯಲಿ, ನೀಲಿ ಹೂವನ್ನು ಚಿಮ್ಮುಹಲಗೆಯಾಗಿಸಿಕೊಂಡು ಜಿಗಿಯಲಿ ಅಂತ ಹಾರೈಸ್ತೇನೆ.
ತುಂಬು ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ.
*********
ವರುಷಗಳ ಕೆಳಗೆ ಅಂಜುತ್ತ ಮೊದಲ ಹೆಜ್ಜೆಯಿಟ್ಟಿದ್ದ ನೀಲಿಹೂವು ಈಗ ನೂರು ಪೋಸ್ಟ್ ನ್ನು ಮುಟ್ಟಿದೆ. ಒಂದಿಷ್ಟು ಹನಿ, ಒಂದಿಷ್ಟು ಕವಿತೆ, ಮತ್ತೊಂದಿಷ್ಟು ಪುಟ್ಟ ಪುಟ್ಟ ಕತೆಗಳೊಂದಿಗೆ ಹೆಜ್ಜೆ ಬೆಳೆಸಿದ ಹೂವು, ಅಡುಗೆ, ಸಿನೆಮಾ, ಮಾಧ್ಯಮ, ಕತೆ, ಲೇಖನ, ಹಾಸ್ಯ, ಹೀಗೆ ಭಿನ್ನ ಎಸಳುಗಳೊಂದಿಗೆ ಅರಳಿದೆ. ಭಾವಗಳನ್ನು ಉದ್ದೀಪಿಸಿಕೊಳ್ಳುತ್ತ ಬೆಳೆದಿದೆ. ಹೆಜ್ಜೆ ಜತೆ ಹೆಜ್ಜೆಗೂಡುತ್ತಾ ನೂರು ಮುಟ್ಟಿದೆ.
ಪ್ರಾರಂಭದಲ್ಲಿ ನನ್ನ ಬರಹಗಳ ಹದದ, ನಾನು ಬರೆಯಬಾರದೇನೋ ಎಂಬಂತೆ ಮೂಡಿದ್ದ ಅನುಮಾನಗಳೆಲ್ಲ ನಿಮ್ಮೆಲ್ಲರ ಪ್ರೋತ್ಸಾಹ, ಪ್ರೇರಣೆ ಮೆಚ್ಚುಗೆಯಿಂದ ಹೋಗಲಾಡಿಸಿಕೊಂಡು ಮತ್ತೆ ಮತ್ತೆ ಬರೆದಿದ್ದೇನೆ. ಅಲ್ಲಲ್ಲಿ  ಆಗಿದ್ದ ತಪ್ಪುಗಳನ್ನು ಮತ್ತೊಮ್ಮೆ ಮಾಡಲಾರೆ ಎಂದು ಧೃಡವಾಗಿ ಅಂದುಕೊಂಡೇ ಮುಂದುವರಿದಿದ್ದೇನೆ. ಕಲಿತಿದ್ದೇನೆ, ಬರಹದಲ್ಲಿ ಮೊದಲಿಗಿಂತ ಬಲಿತಿದ್ದೇನೆ.
ಈಗ ಅಜೇಯವಾಗಿ ನೂರು ಮುಟ್ಟಿದ ಹೆಮ್ಮೆಯ ಜತೆಗೆ ಮತ್ತೆರಡು ಖುಷಿಯ ವಿಚಾರಗಳೂ ಇವೆ.
ನನ್ನ “ಬದುಕು, ಪ್ರೀತಿ ಮತ್ತು ನಿನ್ನ ಮೇಲೆ ಬರೆಯುತ್ತಿರುವ ಕೊನೆಯ ಅಕ್ಷರಗಳಿವು!” ಎಂಬ ಪ್ರೇಮ ಪತ್ರಕ್ಕೆ “ಸಖಿ” ಪಾಕ್ಷಿಕದಲ್ಲಿ ಉತ್ತಮ ಪತ್ರಲೇಖನ ಎಂಬ ಬಹುಮಾನ ಬಂದಿದೆ. ಮತ್ತು ಮೊದಲ ಬಾರಿಗೆ ಈ ಸಲದ “ಮಯೂರ”ದಲ್ಲಿ ನನ್ನದೊಂದು ಕವಿತೆ ಪ್ರಕಟ ಆಗಿದೆ.
ಈ ನೀಲಿಹೂವು ಎಂದರೆ ನನ್ನ ಪಾಲಿಗೆ  ನಗೆಮುಗುಳಿನ ಆಳದಲ್ಲಿನ ನೋವಿನೆಸಳಿನ ಹೀನಾಯ ಸೋಲು. ಸೋಲೊಪ್ಪದ ನೋವುಗಳನ್ನೆಲ್ಲಾ ನಮ್ಮದಾಗಿಸಿ, ನಲಿವಾಗಿಸಿಕೊಳ್ಳುವ ಪ್ರಯತ್ನ.  ಬೆರಗಿಂದ ಬದುಕಿನತ್ತ ಮುಖಮಾಡಿಕೊಂಡಿರುವ ಮನಸಿನ ಪಲುಕುಗಳು.
ನೀಲಿಹೂವು ನನ್ನ ಪಾಲಿನ ಚಿವುಟಿ ನೋಡಿಕೊಳ್ಳಬಾರದಂಥ ಕನಸು!
ಈ ನೂರು ನಾಟೌಟ್ ಸಂದರ್ಭದಲ್ಲಿ ನನ್ನ ಇಷ್ಟದ ಲೇಖಕರೂ ಆಗಿರುವ ಚೇತನಾ ತೀರ್ಥಹಳ್ಳಿ, ಮತ್ತು ಚಾಮರಾಜ ಸವಡಿ ಯವರಿಗೆ ನೀಲಿಹೂವಿನ ಕುರಿತು ಎರಡು ಮಾತು ಆಡಲು ಕೇಳಿಕೊಂಡಿದ್ದೆ. ಪ್ರೀತಿಯಿಂದ ನಾಲ್ಕಕ್ಷರ ಬರೆದಿದ್ದಾರೆ. ಇನ್ನಷ್ಟು ಬರೆಯಲು ಉಮೇದು, ಧೈರ್ಯ ತುಂಬಿದಾರೆ. ಮೊದಲ ಹೆಜ್ಜೆಯಿಟ್ಟಾಗ ನೀಡುವ ಪ್ರೋತ್ಸಾಹ, ಚಪ್ಪಾಳೆ ಮುಂದೆ ಓಡುವಾಗಲೂ ನೆನಪಿನ ಪದರಗಳಲ್ಲಿ ಅಳಿಯದೇ ಅಚ್ಚಾಗಿರುತ್ತದಂತೆ. ಆ ಮಾತುಗಳು ಉಂಟು ಮಾಡುತಿರುವ ಸಂತೋಷ ಮತ್ತು ಸ್ಪೂರ್ತಿ, ಪ್ರೇರಣೆಗೆ ನಾನವರಿಗೆ ಸದಾ ಋಣಿ.
ಹಾಗೂ ಓದಿ, ತಿದ್ದಿ, ಮೆಚ್ಚಿ, ಹೊಗಳಿ, ಸುಮ್ಮನಿದ್ದು ಕೂಡ, ಸದಾ ಪ್ರೋತ್ಸಾಹಿಸುತ್ತಿರುವ ನಿಮಗೂ ಧನ್ಯವಾದಗಳು.
**********
ಮನಸಿನ ಹದವ ನೀವೇ ಬಲ್ಲಿರಿ…
ನಿಮ್ಮ ಬ್ಲಾಗ್‌ ಮತ್ತು ಅದರಲ್ಲಿರುವ ಅದ್ಭುತ ಕವಿತೆಗಳು ನನಗೆ ನೀಡಿದ ಪ್ರೇರಣೆಯನ್ನು ಹೇಗೆ ಹೇಳಲಿ ರಂಜಿತ್? ಅವು ನನ್ನನ್ನು ಕಾಡಿವೆ, ಕೆಣಕಿವೆ, ಪ್ರೇರೇಪಿಸಿವೆ. ನಾನು ಮರೆತೇಬಿಟ್ಟಿದ್ದ ನನ್ನೊಳಗಿನ ಕವಿಯನ್ನು ಮತ್ತೆ ಎಚ್ಚರಿಸಿವೆ. ಅತ್ಯಂತ ತಾಕತ್ತಿನ ಕವಿತೆಗಳವು. ಸಮಾನ ಮನಸ್ಕರೊಂದಿಗೆ ನಿಮ್ಮ ಕವಿತೆಗಳನ್ನು ಎತ್ತಿಕೊಂಡು ಚರ್ಚಿಸುವಷ್ಟರ ಮಟ್ಟಿಗೆ ಅವು ನನ್ನನ್ನು ಪ್ರಭಾವಿತನನ್ನಾಗಿಸಿವೆ.
ನಿಮ್ಮಿಂದ ಮತ್ತಷ್ಟು ಕವಿತೆಗಳು ಬರಲಿ. ಭಾವನೆಗಳನ್ನು ಹೀಗೂ ಹೇಳಲು ಸಾಧ್ಯ ಎಂಬ ಅಚ್ಚರಿ-ಮುದ ಮೂಡಿಸುವ ನಿಮ್ಮ ಬರವಣಿಗೆ ಮತ್ತಷ್ಟು ಸಮೃದ್ಧವಾಗಲಿ. ಅವನ್ನು ಓದುತ್ತ ನಾವೂ ಎತ್ತರದ ಸ್ಥಿತಿ ತಲುಪುವಂತಾಗಲಿ. ಗಜಲ್‌ನ ಸೊಗಸನ್ನು ಕನ್ನಡಕ್ಕೆ ಉತ್ಕೃಷ್ಟವಾಗಿ ತರುತ್ತಿರುವ ನಿಮ್ಮ ಲೇಖನಿಗೆ ಸಾವಿರ ವಂದನೆಗಳು.
ನೀಲಿಹೂವು ಅರಳುತ್ತಲೇ ಹೋಗಲಿ. ಅದರ ಬರವಣಿಗೆಯ ಪರಿಮಳ ಎಲ್ಲರನ್ನೂ ತಾಕಲಿ. ಮನಸ್ಸು ಮುದಗೊಳಿಸಲಿ.
- ಚಾಮರಾಜ ಸವಡಿ
***************
ನೀಲಿ ಹೂವು ಬ್ಲಾಗ್ ಶುರುವಾದಾಗ ನನ್ನ ಗಮನ ಅತ್ತ ಹರಿದಿದ್ದು, ಮತ್ತೆ ಮತ್ತೆ ನೋಡುವಂತೆ ಮಾಡಿದ್ದು ಅದರ್ಲ್ಲಿ ಬರುತ್ತಿದ್ದ ಜೇನಹನಿಯಂತಹ ಕವಿತೆಗಳು (ರುಚಿ ಮತ್ತು ಗಾತ್ರಗಳೆರಡರಲ್ಲೂ) ಹಾಗೂ ಪುಟಾಣಿ ಸಾಲುದ್ದದ ಕಥೆ ಹೇಳುವ ಬರಹಗಳು. ರಂಜಿತ್ ನನಗೆ ವೈಯಕ್ತಿಕವಾಗಿ ಪರಿಚಿತರಲ್ಲ.  ಬ್ಲಾಗಿಗೆ ಮೊದಲು ಏನಾದರೂ ಬರೆದಿದ್ದಿದೆಯೇ ಅನ್ನೋದೂ ಗೊತ್ತಿಲ್ಲ. ಆದರೆ ಬ್ಲಾಗ್ ಬರಹಗಳ ಮೂಲಕ ಓದಿದವರ ನೆನಪಲ್ಲುಳಿಯುವಂತೆ ಸೆಳೆಯುವ ಸಾಮರ್ಥ್ಯ ಇವರಲ್ಲಿರುವುದು ನಿಜ.
ಸದಾ ಉತ್ಸಾಹದಿಂದ ಬ್ಲಾಗಿಸುತ್ತ, ಚರ್ಚೆಗೆಳೆಯುತ್ತ ನೂರರ ಗಡಿ ತಲುಪಿರುವ ನೀಲಿಹೂವಿನಲ್ಲಿ ವೈವಿಧ್ಯತೆಯಿದೆ. ಮತ್ತು, ‘ಬ್ಲಾಗ್ ಸ್ಪೇಸ್ ತೋಚಿದ್ದು ಗೀಚುವುದಕ್ಕೆ’ ಅಂತಿದ್ದರೂ ತಮಗೆ ತೋಚಿದ್ದನ್ನೆಲ್ಲ ಚೆಂದವಾಗಿಯೇ ಗೀಚುತ್ತ ಯಾರೇ ಆದರೂ ಖುಷಿಯಿಂದ ಓದಬಹುದಾದಂತದ್ದನ್ನೆ ಬ್ಲಾಗ್ ಜಗತ್ತಿಗೆ ಕೊಡುತ್ತಿದೆ. (ಹಾಗೇ ಒಂದೆರಡು ತರಲೆ ಪೋಸ್ಟ್ ಗಳ ಮೂಲಕ ಬ್ಲಾಗಿನ ‘ಹದ’ ಕಾಯ್ದಿಟ್ಟುಕೊಂಡಿರುವುದೂ ಇದರ ಹೆಗ್ಗಳಿಕೆ!)
ಬ್ಲಾಗ್ ನಲ್ಲಿ ಬರೆಯುತ್ತ ಬರೆಯುತ್ತಲೇ ಒಳ್ಳೆಯ ಕವಿಯ ಎಲ್ಲ ಲಕ್ಷಣಗಳನ್ನೂ (ವಿಶೇಷವಾಗಿ ನನಗೆ ಇವರ ಕವಿತೆಗಳು ಇಷ್ಟವಾಗುವುದರಿಂದ) ಮೈಗೂಡಿಸಿಕೊಂಡಿರುವ ರಂಜಿತ್ ಬರೀ ಬ್ಲಾಗಿಂಗಿಗೆ ಸೀಮಿತವಾಗದೆ ಬೆಳೆಯಲಿ, ನೀಲಿ ಹೂವನ್ನು ಚಿಮ್ಮುಹಲಗೆಯಾಗಿಸಿಕೊಂಡು ಜಿಗಿಯಲಿ ಅಂತ ಹಾರೈಸ್ತೇನೆ.
ತುಂಬು ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ.
*********
ವರುಷಗಳ ಕೆಳಗೆ ಅಂಜುತ್ತ ಮೊದಲ ಹೆಜ್ಜೆಯಿಟ್ಟಿದ್ದ ನೀಲಿಹೂವು ಈಗ ನೂರು ಪೋಸ್ಟ್ ನ್ನು ಮುಟ್ಟಿದೆ. ಒಂದಿಷ್ಟು ಹನಿ, ಒಂದಿಷ್ಟು ಕವಿತೆ, ಮತ್ತೊಂದಿಷ್ಟು ಪುಟ್ಟ ಪುಟ್ಟ ಕತೆಗಳೊಂದಿಗೆ ಹೆಜ್ಜೆ ಬೆಳೆಸಿದ ಹೂವು, ಅಡುಗೆ, ಸಿನೆಮಾ, ಮಾಧ್ಯಮ, ಕತೆ, ಲೇಖನ, ಹಾಸ್ಯ, ಹೀಗೆ ಭಿನ್ನ ಎಸಳುಗಳೊಂದಿಗೆ ಅರಳಿದೆ. ಭಾವಗಳನ್ನು ಉದ್ದೀಪಿಸಿಕೊಳ್ಳುತ್ತ ಬೆಳೆದಿದೆ. ಹೆಜ್ಜೆ ಜತೆ ಹೆಜ್ಜೆಗೂಡುತ್ತಾ ನೂರು ಮುಟ್ಟಿದೆ.
ಪ್ರಾರಂಭದಲ್ಲಿ ನನ್ನ ಬರಹಗಳ ಹದದ, ನಾನು ಬರೆಯಬಾರದೇನೋ ಎಂಬಂತೆ ಮೂಡಿದ್ದ ಅನುಮಾನಗಳೆಲ್ಲ ನಿಮ್ಮೆಲ್ಲರ ಪ್ರೋತ್ಸಾಹ, ಪ್ರೇರಣೆ ಮೆಚ್ಚುಗೆಯಿಂದ ಹೋಗಲಾಡಿಸಿಕೊಂಡು ಮತ್ತೆ ಮತ್ತೆ ಬರೆದಿದ್ದೇನೆ. ಅಲ್ಲಲ್ಲಿ  ಆಗಿದ್ದ ತಪ್ಪುಗಳನ್ನು ಮತ್ತೊಮ್ಮೆ ಮಾಡಲಾರೆ ಎಂದು ಧೃಡವಾಗಿ ಅಂದುಕೊಂಡೇ ಮುಂದುವರಿದಿದ್ದೇನೆ. ಕಲಿತಿದ್ದೇನೆ, ಬರಹದಲ್ಲಿ ಮೊದಲಿಗಿಂತ ಬಲಿತಿದ್ದೇನೆ.
ಈಗ ಅಜೇಯವಾಗಿ ನೂರು ಮುಟ್ಟಿದ ಹೆಮ್ಮೆಯ ಜತೆಗೆ ಮತ್ತೆರಡು ಖುಷಿಯ ವಿಚಾರಗಳೂ ಇವೆ.
blue-mountain-flowers_14008
ನನ್ನ “ಬದುಕು, ಪ್ರೀತಿ ಮತ್ತು ನಿನ್ನ ಮೇಲೆ ಬರೆಯುತ್ತಿರುವ ಕೊನೆಯ ಅಕ್ಷರಗಳಿವು!” ಎಂಬ ಪ್ರೇಮ ಪತ್ರಕ್ಕೆ “ಸಖಿ” ಪಾಕ್ಷಿಕದಲ್ಲಿ ಉತ್ತಮ ಪತ್ರಲೇಖನ ಎಂಬ ಬಹುಮಾನ ಬಂದಿದೆ. ಮತ್ತು ಮೊದಲ ಬಾರಿಗೆ ಈ ಸಲದ “ಮಯೂರ”ದಲ್ಲಿ ನನ್ನದೊಂದು ಕವಿತೆ ಪ್ರಕಟ ಆಗಿದೆ.
ಈ ನೀಲಿಹೂವು ಎಂದರೆ ನನ್ನ ಪಾಲಿಗೆ  ನಗೆಮುಗುಳಿನ ಆಳದಲ್ಲಿನ ನೋವಿನೆಸಳಿನ ಹೀನಾಯ ಸೋಲು. ಸೋಲೊಪ್ಪದ ನೋವುಗಳನ್ನೆಲ್ಲಾ ನಮ್ಮದಾಗಿಸಿ, ನಲಿವಾಗಿಸಿಕೊಳ್ಳುವ ಪ್ರಯತ್ನ.  ಬೆರಗಿಂದ ಬದುಕಿನತ್ತ ಮುಖಮಾಡಿಕೊಂಡಿರುವ ಮನಸಿನ ಪಲುಕುಗಳು.
ನೀಲಿಹೂವು ನನ್ನ ಪಾಲಿನ ಚಿವುಟಿ ನೋಡಿಕೊಳ್ಳಬಾರದಂಥ ಕನಸು!
ಈ ನೂರು ನಾಟೌಟ್ ಸಂದರ್ಭದಲ್ಲಿ ನನ್ನ ಇಷ್ಟದ ಲೇಖಕರೂ ಆಗಿರುವ ಚೇತನಾ ತೀರ್ಥಹಳ್ಳಿ, ಮತ್ತು ಚಾಮರಾಜ ಸವಡಿ ಯವರಿಗೆ ನೀಲಿಹೂವಿನ ಕುರಿತು ಎರಡು ಮಾತು ಆಡಲು ಕೇಳಿಕೊಂಡಿದ್ದೆ. ಪ್ರೀತಿಯಿಂದ ನಾಲ್ಕಕ್ಷರ ಬರೆದಿದ್ದಾರೆ. ಇನ್ನಷ್ಟು ಬರೆಯಲು ಉಮೇದು, ಧೈರ್ಯ ತುಂಬಿದಾರೆ. ಮೊದಲ ಹೆಜ್ಜೆಯಿಟ್ಟಾಗ ನೀಡುವ ಪ್ರೋತ್ಸಾಹ, ಚಪ್ಪಾಳೆ ಮುಂದೆ ಓಡುವಾಗಲೂ ನೆನಪಿನ ಪದರಗಳಲ್ಲಿ ಅಳಿಯದೇ ಅಚ್ಚಾಗಿರುತ್ತದಂತೆ. ಆ ಮಾತುಗಳು ಉಂಟು ಮಾಡುತಿರುವ ಸಂತೋಷ ಮತ್ತು ಸ್ಪೂರ್ತಿ, ಪ್ರೇರಣೆಗೆ ನಾನವರಿಗೆ ಸದಾ ಋಣಿ.
ಹಾಗೂ ಓದಿ, ತಿದ್ದಿ, ಮೆಚ್ಚಿ, ಹೊಗಳಿ, ಸುಮ್ಮನಿದ್ದು ಕೂಡ, ಸದಾ ಪ್ರೋತ್ಸಾಹಿಸುತ್ತಿರುವ ನಿಮಗೂ ಧನ್ಯವಾದಗಳು.
**********
ಮನಸಿನ ಹದವ ನೀವೇ ಬಲ್ಲಿರಿ…
ನಿಮ್ಮ ಬ್ಲಾಗ್‌ ಮತ್ತು ಅದರಲ್ಲಿರುವ ಅದ್ಭುತ ಕವಿತೆಗಳು ನನಗೆ ನೀಡಿದ ಪ್ರೇರಣೆಯನ್ನು ಹೇಗೆ ಹೇಳಲಿ ರಂಜಿತ್? ಅವು ನನ್ನನ್ನು ಕಾಡಿವೆ, ಕೆಣಕಿವೆ, ಪ್ರೇರೇಪಿಸಿವೆ. ನಾನು ಮರೆತೇಬಿಟ್ಟಿದ್ದ ನನ್ನೊಳಗಿನ ಕವಿಯನ್ನು ಮತ್ತೆ ಎಚ್ಚರಿಸಿವೆ. ಅತ್ಯಂತ ತಾಕತ್ತಿನ ಕವಿತೆಗಳವು. ಸಮಾನ ಮನಸ್ಕರೊಂದಿಗೆ ನಿಮ್ಮ ಕವಿತೆಗಳನ್ನು ಎತ್ತಿಕೊಂಡು ಚರ್ಚಿಸುವಷ್ಟರ ಮಟ್ಟಿಗೆ ಅವು ನನ್ನನ್ನು ಪ್ರಭಾವಿತನನ್ನಾಗಿಸಿವೆ.
ನಿಮ್ಮಿಂದ ಮತ್ತಷ್ಟು ಕವಿತೆಗಳು ಬರಲಿ. ಭಾವನೆಗಳನ್ನು ಹೀಗೂ ಹೇಳಲು ಸಾಧ್ಯ ಎಂಬ ಅಚ್ಚರಿ-ಮುದ ಮೂಡಿಸುವ ನಿಮ್ಮ ಬರವಣಿಗೆ ಮತ್ತಷ್ಟು ಸಮೃದ್ಧವಾಗಲಿ. ಅವನ್ನು ಓದುತ್ತ ನಾವೂ ಎತ್ತರದ ಸ್ಥಿತಿ ತಲುಪುವಂತಾಗಲಿ. ಗಜಲ್‌ನ ಸೊಗಸನ್ನು ಕನ್ನಡಕ್ಕೆ ಉತ್ಕೃಷ್ಟವಾಗಿ ತರುತ್ತಿರುವ ನಿಮ್ಮ ಲೇಖನಿಗೆ ಸಾವಿರ ವಂದನೆಗಳು.
ನೀಲಿಹೂವು ಅರಳುತ್ತಲೇ ಹೋಗಲಿ. ಅದರ ಬರವಣಿಗೆಯ ಪರಿಮಳ ಎಲ್ಲರನ್ನೂ ತಾಕಲಿ. ಮನಸ್ಸು ಮುದಗೊಳಿಸಲಿ.
- ಚಾಮರಾಜ ಸವಡಿ
***************
blue_flowers
ನೀಲಿ ಹೂವು ಬ್ಲಾಗ್ ಶುರುವಾದಾಗ ನನ್ನ ಗಮನ ಅತ್ತ ಹರಿದಿದ್ದು, ಮತ್ತೆ ಮತ್ತೆ ನೋಡುವಂತೆ ಮಾಡಿದ್ದು ಅದರ್ಲ್ಲಿ ಬರುತ್ತಿದ್ದ ಜೇನಹನಿಯಂತಹ ಕವಿತೆಗಳು (ರುಚಿ ಮತ್ತು ಗಾತ್ರಗಳೆರಡರಲ್ಲೂ) ಹಾಗೂ ಪುಟಾಣಿ ಸಾಲುದ್ದದ ಕಥೆ ಹೇಳುವ ಬರಹಗಳು. ರಂಜಿತ್ ನನಗೆ ವೈಯಕ್ತಿಕವಾಗಿ ಪರಿಚಿತರಲ್ಲ.  ಬ್ಲಾಗಿಗೆ ಮೊದಲು ಏನಾದರೂ ಬರೆದಿದ್ದಿದೆಯೇ ಅನ್ನೋದೂ ಗೊತ್ತಿಲ್ಲ. ಆದರೆ ಬ್ಲಾಗ್ ಬರಹಗಳ ಮೂಲಕ ಓದಿದವರ ನೆನಪಲ್ಲುಳಿಯುವಂತೆ ಸೆಳೆಯುವ ಸಾಮರ್ಥ್ಯ ಇವರಲ್ಲಿರುವುದು ನಿಜ.
ಸದಾ ಉತ್ಸಾಹದಿಂದ ಬ್ಲಾಗಿಸುತ್ತ, ಚರ್ಚೆಗೆಳೆಯುತ್ತ ನೂರರ ಗಡಿ ತಲುಪಿರುವ ನೀಲಿಹೂವಿನಲ್ಲಿ ವೈವಿಧ್ಯತೆಯಿದೆ. ಮತ್ತು, ‘ಬ್ಲಾಗ್ ಸ್ಪೇಸ್ ತೋಚಿದ್ದು ಗೀಚುವುದಕ್ಕೆ’ ಅಂತಿದ್ದರೂ ತಮಗೆ ತೋಚಿದ್ದನ್ನೆಲ್ಲ ಚೆಂದವಾಗಿಯೇ ಗೀಚುತ್ತ ಯಾರೇ ಆದರೂ ಖುಷಿಯಿಂದ ಓದಬಹುದಾದಂತದ್ದನ್ನೆ ಬ್ಲಾಗ್ ಜಗತ್ತಿಗೆ ಕೊಡುತ್ತಿದೆ. (ಹಾಗೇ ಒಂದೆರಡು ತರಲೆ ಪೋಸ್ಟ್ ಗಳ ಮೂಲಕ ಬ್ಲಾಗಿನ ‘ಹದ’ ಕಾಯ್ದಿಟ್ಟುಕೊಂಡಿರುವುದೂ ಇದರ ಹೆಗ್ಗಳಿಕೆ!)
ಬ್ಲಾಗ್ ನಲ್ಲಿ ಬರೆಯುತ್ತ ಬರೆಯುತ್ತಲೇ ಒಳ್ಳೆಯ ಕವಿಯ ಎಲ್ಲ ಲಕ್ಷಣಗಳನ್ನೂ (ವಿಶೇಷವಾಗಿ ನನಗೆ ಇವರ ಕವಿತೆಗಳು ಇಷ್ಟವಾಗುವುದರಿಂದ) ಮೈಗೂಡಿಸಿಕೊಂಡಿರುವ ರಂಜಿತ್ ಬರೀ ಬ್ಲಾಗಿಂಗಿಗೆ ಸೀಮಿತವಾಗದೆ ಬೆಳೆಯಲಿ, ನೀಲಿ ಹೂವನ್ನು ಚಿಮ್ಮುಹಲಗೆಯಾಗಿಸಿಕೊಂಡು ಜಿಗಿಯಲಿ ಅಂತ ಹಾರೈಸ್ತೇನೆ.
ತುಂಬು ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ.
*********

ಸಿನೆಮಾ ಎಂದರೇನು?

September 14, 2009 ರಂಜಿತ್ 4 comments
ಈ ಪ್ರಶ್ನೆಗೆ ಒಬ್ಬ ಸಿನೆಮಾರಂಗದವನಿಂದ ಏನೇನೋ ಡೆಫಿನೇಶನ್ ಗಳು ಬರಬಹುದು. ಅವರದೇ ವೃತ್ತಿಶ್ರದ್ಧೆಯಿಂದ, passion ನಿಂದಾಗಿ ಸಿನೆಮಾಕ್ಕೆ ನೀಡುವ ವ್ಯಾಖ್ಯೆ ಬದಲಾಗಬಹುದು. ಟೆಕ್ನಿಕಲ್ ಆಗಿ ಸಿನೆಮಾ ಕ್ಕೆ ಬೇರೆ ಬೇರೆ ರೀತಿಯಲಿ ಭಾಷ್ಯ ನೀಡಬಹುದು ಕೂಡ.
ಆದರೆ ಅದನ್ನು ಮುಟ್ಟಿಸಿಕೊಳ್ಳುವ, ತಟ್ಟಿಸಿಕೊಳ್ಳುವ ಆ ಪ್ರೇಕ್ಷಕಪ್ರಭುವಿನ ಪ್ರಕಾರ ಸಿನೆಮಾ ಅಂದರೇನು?
ವಾರವಿಡೀ ಕಷ್ಟಪಟ್ಟು ಒಂದು ದಿನ ಸಮಯ ಮಾಡಿಕೊಂಡು ಫ್ಯಾಮಿಲಿ ಜತೆಗೆ ಖುಷಿಖುಷಿಯಾಗಿ ಸಮಯ ಕಳೆಯಲು ಇದೂ ಒಂದು ಮಾರ್ಗವಾ? ಅವಿವಾಹಿತನಾದರೆ ತನ್ನ ಗೆಳತಿ ಜತೆ. ಇಲ್ಲವಾದರೆ ತನ್ನ ಬೇಸರಿನ ಸಂಜೆಯನು ಕಳೆಯಲು ಇದೊಂದು ಟೈಮ್ ಪಾಸ್ ವಿಷಯವಾ? ಹೊಸದೊಂದು ಅನುಭವ ಗಿಟ್ಟಿಸುವ ಸಲುವಾಗಿ ಇಷ್ಟಪಟ್ಟು ಹೋಗುವುದಾ? ಅಥವ ತನ್ನ ಕ್ರಿಯೇಟಿವ್ ಅರ್ಜ್ ಗಾಗಿಯಷ್ಟೇ ಸಿನೆಮಾ ನೋಡುತ್ತಾನಾ?
ಹೀಗೇ ನೋಡುಗನ ಉದ್ದೇಶಕ್ಕನುಗುಣವಾಗಿಯೋ, ಮಾಡುವ ನಿರ್ದೇಶಕನ ಗ್ರಹಿಕೆಗನುಗುಣವಾಗಿಯೋ ಸಿನೆಮಾ ಬದಲಾಗುತ್ತಿರುತ್ತದೆ. ಒಬ್ಬ ನಿರ್ದೇಶಕ ಸಾಮಾಜಿಕ ಬದಲಾವಣೆಯಷ್ಟೇ ತನ್ನ ಸಿನೆಮಾದ ಉದ್ದಿಶ್ಯ ಅಂದರೆ ಇನ್ನೊಬ್ಬ ಪ್ರೇಕ್ಷಕನಿಗೆ ಮನರಂಜನೆ ನೀಡುವುದಷ್ಟೇ ತನ್ನ ಕೆಲಸ ಅಂದುಬಿಡುತ್ತಾನೆ. ಅಲ್ಲಿಗೇ ಸಿನೆಮಾ ಅನ್ನುವುದು ಕ್ಲಾಸ್ ಮತ್ತು ಮಾಸ್ ಎಂದು ಎರಡು ವಿಧವಾಗಿಬಿಡುತ್ತದೆ. ಕ್ಲಾಸ್ ಸಿನೆಮಾ ಅಂದರೆ ಜನ ನೋಡಲು ಬರುವುದಿಲ್ಲವೋ ಎನ್ನುತ್ತ ಭಯಪಡುವ ಕೆಲವು ನಿರ್ದೇಶಕರು, “ಬ್ರಿಡ್ಜ್ ಸಿನೆಮಾ” ಅನ್ನುತ್ತಾ ಮತ್ತೊಂದು ಪಂಗಡ ಹುಟ್ಟುಹಾಕಿದರು.
ಪ್ರೇಕ್ಷಕ ಮಾತ್ರ ತನಗಿಷ್ಟವಾದ ಸಿನೆಮಾ ನೋಡುತ್ತಾ ಬಂದಿದ್ದಾನೆ. ನಿಜವಾದ ಸೈಕಾಲಜಿ ಆಫ್ ಆಡಿಯೆನ್ಸ್ ನ್ನು, ಪ್ರೇಕ್ಷಕನ ನಾಡಿಮಿಡಿತವನ್ನು ಯಾವ ನಿರ್ದೇಶಕ ಲೇಖಕನಿಗೂ ಸರಿಯಾಗಿ ಹಿಡಿಯಲಾಗಿಲ್ಲ. ಪ್ರೇಕ್ಷನೊಬ್ಬನಿಗೆ ಸಿನೆಮಾ ನೋಡಲು ಸಾಕಷ್ಟು ಕಾರಣಗಳು ಒಂದಾಗಿ ನಂತರವಷ್ಟೇ ನಿರ್ಧರಿಸುತಾನೆಂದೇನೂ ಇಲ್ಲ. ಗಂಡ ತನ್ನನ್ನು ಸಿನೆಮಾಕ್ಕೆ ಕರೆದುಕೊಂಡು ಹೋಗಲೇ ಇಲ್ಲ ಅನ್ನುವ ಗೃಹಿಣಿ, ಇಂಥಾ ಸಿನೆಮಾಕ್ಕೆ ಅಂತ ಹೇಳೋಲ್ಲ, ಆಕೆಗೆ ಅಲ್ಲಿ ಗಂಡನ ಜತೆ ಸಿನೆಮಾಕ್ಕೆ ಹೋಗುವುದಷ್ಟೇ ಮುಖ್ಯ. ನಿರ್ದೇಶಕ ಎಷ್ಟು ವಿಭಿನ್ನವಾಗಿ ಸಿನೆಮಾ ಮಾಡಿದ್ದಾನೆ , ಎಷ್ಟು ಗಿಮ್ಮಿಕ್ ಮಾಡಿದಾನೆ ಅಂತೆಲ್ಲಾ ಅಲ್ಲ.
ನನ್ನ ಸಿನೆಮಾ ಬಗೆಗಿನ ಗ್ರಹಿಕೆ ಅಥವ ರುಚಿ ಬಗ್ಗೆ ವಯಸ್ಸಿಗೆ, ಅನುಭವಕ್ಕನುಗುಣವಾಗಿ ಬೇರೆಯಾಗುತ್ತಾ ಬಂದಿದೆ. ಚಿಕ್ಕ ವಯಸ್ಸಿನಲ್ಲಿ ಪ್ರಭಾಕರ್, ವಿಷ್ಣುವರ್ಧನ್ ಆಕ್ಷನ್ ಸಿನೆಮಾಗಳು ಇಷ್ಟವಾಗುತ್ತಿದ್ದವು. ಒಬ್ಬ ಮನುಷ್ಯ ಹತ್ತಿಪ್ಪತ್ತು ಮಂದಿಯನ್ನು ಹೊಡೆದುರುಳಿಸುವುದು ಪ್ರಿಯವಾಗುತ್ತಿತ್ತು. ಆಗ ನನಗೆ ಸಿನೆಮಾ ಅಂದರೇನು ಅಂತ ಯಾರಾದರೂ ಪ್ರಶ್ನೆ ಮಾಡಿದ್ದರೆ ಕಷ್ಟವನ್ನೆಲ್ಲಾ ಅಟ್ಟಿ, ವಿಜಯಿಯಾಗುವ ಹೀರೋ ನ ಸಿನೆಮಾ ಅಷ್ಟೇ ನನ್ನ ಪಾಲಿನ ಐಡಿಯಲ್ ಸಿನೆಮಾ ಆಗಿತ್ತು.  ಹದಿಹರೆಯಕ್ಕೆ ಬಂದೊಡನೆ ರೋಮ್ಯಾಂಟಿಕ್ ಸಿನೆಮಾಗಳಾದ ಡಿಡಿಎಲ್ ಜೆ, ಹಮ್ ಆಪ್ಕೆ ಹೈ ಕೌನ್ ನಂತವು ಇಷ್ಟವಾಗುತ್ತಿದ್ದವು. ಆಗ ನನ್ನ ಹೀರೋ ಹುಡುಗಿಯ ಮನಸ್ಸನ್ನು ಹೇಗೆ ಕದಿಯುತ್ತಾನೆಂಬುದೇ ಆಸಕ್ತಿಕರ ವಿಷಯ. ಸ್ವಲ್ಪ ಸಮಯ ಥ್ರಿಲ್ಲರ್ ಗಳು ಇಷ್ಟವಾಗತೊಡಗಿದವು ಥ್ರಿಲ್ಲರ್ ನೊಳಗಿನ ತಂತ್ರ, ಒಂದೊಂದೇ ವಿಷಯವನ್ನು ಪ್ರೇಕ್ಷಕನಿಗೆ ತಿಳಿಸುತ್ತಾ ಹೋಗಿ ಕೊನೆಯ ಕ್ಲೈಮಾಕ್ಸ್ ನಲ್ಲಿ ಹೇಗೆ ಮುಖ್ಯಾಂಶ ರಿವೀಲ್ ಆಗುತ್ತದೆ ಎಂಬುದು ನನ್ನ ಸಿನೆಮಾದೆಡೆಗಿನ ಕಾತರವಾಗಿತ್ತು. ಕಾಲೇಜು ಮುಗಿದು ಕೆಲಸಕ್ಕಲೆಯುವಾಗ ಸಮಾಜದ ಮುಖಗಳು ಪರಿಚಯವಾಗತೊಡಗಿತು. ಶಂಕರ್ ರ ಜಂಟಲ್ ಮ್ಯಾನ್, ಅನ್ನಿಯನ್ ಮತ್ತು ರಾಜ್ ಕುಮಾರ್ ಚಿತ್ರಗಳು ಪ್ರಿಯವಾಗತೊಡಗಿದವು. ಅ ವೆಡ್ನೆಸ್ ಡೇ , ಆಮೀರ್ ನಂತವು ಆಕರ್ಷಕವಾಗತೊಡಗಿತು. ನನ್ನ ಐಡಿಯಲ್ ಹೀರೋನ ಕೆಲಸ ಆಗ ಸಮಾಜವನ್ನು ಒಬ್ಬಂಟಿಯಾಗಿ ಗುಡಿಸುವುದು!
ಈಗೆಲ್ಲಾ ಸಿನೆಮಾ ನೋಡುವಾಗ ಅದರ ಮೇಕಿಂಗ್ ಹೇಗಾಗಿರಬಹುದು, ಯಾವ ಯಾವ ಕೋನದಲ್ಲಿ ಕ್ಯಾಮರಾ ಇಟ್ಟಿದ್ದಾರೆ, ಕಥೆ ಯಾವ ಅಂಶವನ್ನು ಮೊದಲು ಅರುಹಿ ಯಾವಂಶವನ್ನು ಕ್ಲೈಮಾಕ್ಸ್ ನಲ್ಲಿ ತಿಳಿಸಿದ್ದಾರೆ, ಪ್ರೇಕ್ಷಕನ ಮನಸ್ಸಿಗೆ ಆ ಪಾತ್ರವನ್ನು ಹೇಗೆ ರಿಜಿಸ್ಟರ್ ಮಾಡಿದ್ದಾರೆ, ಅನವಶ್ಯಕ ಸನ್ನಿವೇಶಗಳ್ಯಾವುವು, ಹಿನ್ನೆಲೆ ಸಂಗೀತ ಹೇಗೆ ಪರಿಣಾಮಕಾರಿಯಾಗಿದೆ, ಸ್ಕ್ರಿಪ್ಟ್ ನಲ್ಲಿ ಇನ್ನೂ ಹೇಗೆ ಉತ್ತಮವಾಗಿ ಮಾಡಬಹುದಿತ್ತು ಅಂಶಗಳೆಲ್ಲ ಮನಸ್ಸಿಗೆ ಬರುತ್ತದೆ. ನಿರ್ದೇಶಕನ, ಲೇಖಕನ ಸಂದರ್ಶನಗಳನ್ನೆಲ್ಲಾ ಟೀವಿಯಲ್ಲಿ ನೋಡುವುದರಿಂದ ಸಿನೆಮಾದೆಡೆಗೆ ಆಸಕ್ತಿ ಹೆಚ್ಚಾಗಿದೆ. “ಮಿಸ್ಕಿನ್” ಅನ್ನುವ ತಮಿಳು ನಿರ್ದೇಶಕ “ನನ್ನ ಪ್ರಕಾರ ಖುಷಿಯಿಂದ ಸಾಯುವುದೆಂದರೆ ಆ ಸಾವು ನಾನು ನಿರ್ದೇಶಕನಾಗಿ ಸಿನೆಮಾವೊಂದರ ಕೊನೇ ಶಾಟ್ ತೆಗೆಯುವಾಗ ಬಂದರಷ್ಟೇ” ಅಂತನ್ನುವಾಗ ಆತನ ಸಿನೆಮಾದೆಡೆಗಿನ ತುಡಿತ ನೋಡಿ ಅಸೂಯೆಮೂಡುತ್ತದೆ. ಶಾಶ್ವಂಕ್ ರಿಡಂಪ್ಶನ್, ಸಿಟಿಜನ್ ಕೇನ್ , ಆನಂದ್(ಹಿಂದಿ) ನಂತಹಾ ಸಿನೆಮಾ ನೋಡುವಾಗ ಅದರ ಸ್ಕ್ರಿಪ್ಟ್ ಸಮಯದಲ್ಲಿ ಬರೆಯುವಾತನ ಪುಳಕ ಊಹಿಸಿದರೆ ಹೊಟ್ಟೆಕಿಚ್ಚಾಗುತ್ತದೆ. ನಮ್ಮ ಪಕ್ಕದಲ್ಲಿಯೇ ಆರ್ಯ, ಅಕಾಶಮಂತ, ರೈನ್ ಬೋ ಕಾಲನಿ, ಸುಬ್ರಮಣ್ಯಪುರಂ, ಅಂಜಾದೇ ನಂತಹ ಸಿನೆಮಾ ಮಾಡುವಾಗ ನಮ್ಮಲ್ಲೂ ಅಂಥಾದ್ದು ಮಾಡುವುದು ಕಷ್ಟಕರವಲ್ಲ ಅನ್ನುವ ಅನಿಸಿಕೆ ಹುಟ್ಟುತ್ತದೆ.
ಹೀಗೆ ಈ ಸಿನೆಮಾ ಮೇಕಿಂಗ್ ನೆಡೆಗಿನ ಆಸಕ್ತಿ, ನನ್ನ “ನೋಡುವ, ಅನುಭವಿಸುವ, ನನ್ನೊಳಗಿನ ಕಲ್ಪನಾಲೋಕವನ್ನು ವಿಸ್ತರಿಸುವ ಪ್ರಕ್ರಿಯೆಗೆ” ತೊಡಕಾಗಿದೆಯೇನೊ. ಟೈಗರ್ ಪ್ರಭಾಕರ್ ಪೋಲೀಸ್ ಆಗಿ ನಾಲ್ಕು ಜನರನ್ನು ಚಚ್ಚುವಾಗ ಸಿಗುತ್ತಿದ್ದ ಆನಂದಗಳು, ಆಗಿನ ಸೆಟ್ ಗಳು, ಆಕ್ಷನ್ ಕಲಾವಿದರ ಬದುಕು, ಶಾಟ್ ತೆಗೆದಾದ ಮೇಲೆ ಏನಾಗಿರಬಹುದು ಎಂಬ ಊಹೆ, ಡಿಶ್ಯುಂ ಅನ್ನುವುದು ಹಿನ್ನೆಲೆಯಷ್ಟೇ ಅನ್ನುವ ಗ್ರಹಿಕೆ ಇದೆಲ್ಲಾ ಆಲೋಚನೆ, ಕಲ್ಪನೆ ಮನಸ್ಸಲ್ಲಿ ಹುಟ್ಟಿದ ಮೇಲೆ ಆ ದೃಶ್ಯದ ರಸವತ್ತತೆಯನ್ನು ಕಿತ್ತುಕೊಂಡಿದೆ ಅನ್ನಿಸುತ್ತದೆ. ಕ್ಯಾಮರಾ ಹಿಂದಿನ ಪರಿಕಲ್ಪನೆಗಳು ಸಿನೆಮಾ ಎಂದರೇನು ಅನ್ನುವ ನನ್ನ ಡೆಫಿನೇಶನ್ ಗಳನ್ನು ಅಂದಗೆಡಿಸಿವೆ.  ನನ್ನ ಸಿನೆಮಾದೆಡೆಗಿನ ವ್ಯಾಖ್ಯಾನಗಳು ತಾಂತ್ರಿಕತೆಗೆ, ಅದು ದೃಶ್ಯ ಮೂಡಿಸುವ “ಅನುಭವಗಳ ಹುಟ್ಟಿಸುವಿಕೆ”ಗೆ ಹೊಂದಿಕೊಂಡಿವೆಯೇ ಹೊರತು ಪ್ರೇಕ್ಷಕನ ಸ್ವಯಂ ಅನುಭೂತಿ, ಅವನ ಮನದಾಳದ ಅಚ್ಚರಿಗಳಿಗಲ್ಲ. ಅದು ಹೀಗೆ ವಿವರಿಸಬಲ್ಲೆ. ನಿರ್ದೇಶಕನೊಬ್ಬ ಒಂದು ಸಿನೆಮಾ ತೆರೆ ಮೇಲೆ ಮೂಡುವ ಮೊದಲು ಸ್ಕ್ರಿಪ್ಟಿನ ಇಂಚಿಂಚಿನ ಮೇಲೆ ಅದೆಷ್ಟು ವರ್ಕ್ ಮಾಡುತ್ತಿರುತ್ತಾನೆಂದರೆ, ಕಾಲಕ್ರಮೇಣ ಸ್ಕ್ರಿಪ್ಟಿನ ಬದಲಾವಣೆಗಳಿಗೆ, ಅದರ ಬೆಳವಣಿಗೆಯ ಮೌಲ್ಯ ತಿಳಿಯಬೇಕೆಂದರೆ ಆತ ಫ್ರೆಶ್ ಒಪೀನಿಯನ್ ಗಳ ಮೊರೆ ಹೋಗುತ್ತಾನೆ. ಮೊದಲ ಬಾರಿ ಕಥೆ ಕೇಳುವಾತನ ಪ್ರತಿಕ್ರಿಯೆಯ ಮೇಲೆ ತನ್ನ ಸ್ಕ್ರಿಪ್ಟಿನ ಶಕ್ತಿ ಅರಿಯುತ್ತಾನೆ. ಸಿಹಿ ತಿಂದಾದ ನಾಲಿಗೆ ಹೇಗೆ ಮತ್ತೆ ಕೂಡಲೇ ಸಿಹಿ ಗ್ರಹಿಸಲು ಸೋಲುತ್ತದೋ ಅಂತಹ ಮನಸ್ಥಿತಿ ಉಂಟಾಗಿರುತ್ತದೆ ಅವನಿಗೆ. ಆ ನಿರ್ದೇಶಕ ತನ್ನ ಸಿನೆಮಾ ತಯಾರಿಕೆ ಮೇಲೆಯೇ ತನ್ನ ಪ್ಯಾಶನ್ ಬೆಳೆಸಿಕೊಂಡಿರುವುದರಿಂದ, ಕಾಲಕ್ರಮೇಣ ದೃಶ್ಯಗಳಿಗೆ ಪ್ರೇಕ್ಷಕನ ಮೊದಲ ಪ್ರತಿಕ್ರಿಯೆ ಹೇಗಿರಬಹುದು ಅನ್ನುವುದನು ಗ್ರಹಿಸಲು ಆಗದೇ ಜಡ್ಡಾಗಿರುತ್ತದೆ.
ಲೋಕೋ ಭಿನ್ನ ರುಚಿಃ ಎಂಬಂತೆ ಅನುಭವ ಪಡೆದುಕೊಳ್ಳುವಾತನ (ಪ್ರೇಕ್ಷಕ) ಮತ್ತು ಅನುಭವ ಹುಟ್ಟಿಸುವಿಕೆಗೆ ಕಾರಣೀಭೂತನಾಗುವ (ನಿರ್ದೇಶಕ, ಲೇಖಕ) ಮನೋರುಚಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾದ್ದರಿಂದ ಸಿನೆಮಾಕ್ಕೆ ತಾಂತ್ರಿಕವಾಗಿ ವ್ಯಾಖ್ಯೆ ನೀಡಬಹುದಾದರೂ ಬೇರೆ ರೀತಿಯಲ್ಲಲ್ಲ.
ಈ ಪ್ರಶ್ನೆಗೆ ಒಬ್ಬ ಸಿನೆಮಾರಂಗದವನಿಂದ ಏನೇನೋ ಡೆಫಿನೇಶನ್ ಗಳು ಬರಬಹುದು. ಅವರದೇ ವೃತ್ತಿಶ್ರದ್ಧೆಯಿಂದ, passion ನಿಂದಾಗಿ ಸಿನೆಮಾಕ್ಕೆ ನೀಡುವ ವ್ಯಾಖ್ಯೆ ಬದಲಾಗಬಹುದು. ಟೆಕ್ನಿಕಲ್ ಆಗಿ ಸಿನೆಮಾ ಕ್ಕೆ ಬೇರೆ ಬೇರೆ ರೀತಿಯಲಿ ಭಾಷ್ಯ ನೀಡಬಹುದು ಕೂಡ.
ಆದರೆ ಅದನ್ನು ಮುಟ್ಟಿಸಿಕೊಳ್ಳುವ, ತಟ್ಟಿಸಿಕೊಳ್ಳುವ ಆ ಪ್ರೇಕ್ಷಕಪ್ರಭುವಿನ ಪ್ರಕಾರ ಸಿನೆಮಾ ಅಂದರೇನು?
ವಾರವಿಡೀ ಕಷ್ಟಪಟ್ಟು ಒಂದು ದಿನ ಸಮಯ ಮಾಡಿಕೊಂಡು ಫ್ಯಾಮಿಲಿ ಜತೆಗೆ ಖುಷಿಖುಷಿಯಾಗಿ ಸಮಯ ಕಳೆಯಲು ಇದೂ ಒಂದು ಮಾರ್ಗವಾ? ಅವಿವಾಹಿತನಾದರೆ ತನ್ನ ಗೆಳತಿ ಜತೆ. ಇಲ್ಲವಾದರೆ ತನ್ನ ಬೇಸರಿನ ಸಂಜೆಯನು ಕಳೆಯಲು ಇದೊಂದು ಟೈಮ್ ಪಾಸ್ ವಿಷಯವಾ? ಹೊಸದೊಂದು ಅನುಭವ ಗಿಟ್ಟಿಸುವ ಸಲುವಾಗಿ ಇಷ್ಟಪಟ್ಟು ಹೋಗುವುದಾ? ಅಥವ ತನ್ನ ಕ್ರಿಯೇಟಿವ್ ಅರ್ಜ್ ಗಾಗಿಯಷ್ಟೇ ಸಿನೆಮಾ ನೋಡುತ್ತಾನಾ?
ShowImage.aspx
ಹೀಗೇ ನೋಡುಗನ ಉದ್ದೇಶಕ್ಕನುಗುಣವಾಗಿಯೋ, ಮಾಡುವ ನಿರ್ದೇಶಕನ ಗ್ರಹಿಕೆಗನುಗುಣವಾಗಿಯೋ ಸಿನೆಮಾ ಬದಲಾಗುತ್ತಿರುತ್ತದೆ. ಒಬ್ಬ ನಿರ್ದೇಶಕ ಸಾಮಾಜಿಕ ಬದಲಾವಣೆಯಷ್ಟೇ ತನ್ನ ಸಿನೆಮಾದ ಉದ್ದಿಶ್ಯ ಅಂದರೆ ಇನ್ನೊಬ್ಬ ಪ್ರೇಕ್ಷಕನಿಗೆ ಮನರಂಜನೆ ನೀಡುವುದಷ್ಟೇ ತನ್ನ ಕೆಲಸ ಅಂದುಬಿಡುತ್ತಾನೆ. ಅಲ್ಲಿಗೇ ಸಿನೆಮಾ ಅನ್ನುವುದು ಕ್ಲಾಸ್ ಮತ್ತು ಮಾಸ್ ಎಂದು ಎರಡು ವಿಧವಾಗಿಬಿಡುತ್ತದೆ. ಕ್ಲಾಸ್ ಸಿನೆಮಾ ಅಂದರೆ ಜನ ನೋಡಲು ಬರುವುದಿಲ್ಲವೋ ಎನ್ನುತ್ತ ಭಯಪಡುವ ಕೆಲವು ನಿರ್ದೇಶಕರು, “ಬ್ರಿಡ್ಜ್ ಸಿನೆಮಾ” ಅನ್ನುತ್ತಾ ಮತ್ತೊಂದು ಪಂಗಡ ಹುಟ್ಟುಹಾಕಿದರು.
ಪ್ರೇಕ್ಷಕ ಮಾತ್ರ ತನಗಿಷ್ಟವಾದ ಸಿನೆಮಾ ನೋಡುತ್ತಾ ಬಂದಿದ್ದಾನೆ. ನಿಜವಾದ ಸೈಕಾಲಜಿ ಆಫ್ ಆಡಿಯೆನ್ಸ್ ನ್ನು, ಪ್ರೇಕ್ಷಕನ ನಾಡಿಮಿಡಿತವನ್ನು ಯಾವ ನಿರ್ದೇಶಕ ಲೇಖಕನಿಗೂ ಸರಿಯಾಗಿ ಹಿಡಿಯಲಾಗಿಲ್ಲ. ಪ್ರೇಕ್ಷನೊಬ್ಬನಿಗೆ ಸಿನೆಮಾ ನೋಡಲು ಸಾಕಷ್ಟು ಕಾರಣಗಳು ಒಂದಾಗಿ ನಂತರವಷ್ಟೇ ನಿರ್ಧರಿಸುತಾನೆಂದೇನೂ ಇಲ್ಲ. ಗಂಡ ತನ್ನನ್ನು ಸಿನೆಮಾಕ್ಕೆ ಕರೆದುಕೊಂಡು ಹೋಗಲೇ ಇಲ್ಲ ಅನ್ನುವ ಗೃಹಿಣಿ, ಇಂಥಾ ಸಿನೆಮಾಕ್ಕೆ ಅಂತ ಹೇಳೋಲ್ಲ, ಆಕೆಗೆ ಅಲ್ಲಿ ಗಂಡನ ಜತೆ ಸಿನೆಮಾಕ್ಕೆ ಹೋಗುವುದಷ್ಟೇ ಮುಖ್ಯ. ನಿರ್ದೇಶಕ ಎಷ್ಟು ವಿಭಿನ್ನವಾಗಿ ಸಿನೆಮಾ ಮಾಡಿದ್ದಾನೆ , ಎಷ್ಟು ಗಿಮ್ಮಿಕ್ ಮಾಡಿದಾನೆ ಅಂತೆಲ್ಲಾ ಅಲ್ಲ.
ನನ್ನ ಸಿನೆಮಾ ಬಗೆಗಿನ ಗ್ರಹಿಕೆ ಅಥವ ರುಚಿ ಬಗ್ಗೆ ವಯಸ್ಸಿಗೆ, ಅನುಭವಕ್ಕನುಗುಣವಾಗಿ ಬೇರೆಯಾಗುತ್ತಾ ಬಂದಿದೆ. ಚಿಕ್ಕ ವಯಸ್ಸಿನಲ್ಲಿ ಪ್ರಭಾಕರ್, ವಿಷ್ಣುವರ್ಧನ್ ಆಕ್ಷನ್ ಸಿನೆಮಾಗಳು ಇಷ್ಟವಾಗುತ್ತಿದ್ದವು. ಒಬ್ಬ ಮನುಷ್ಯ ಹತ್ತಿಪ್ಪತ್ತು ಮಂದಿಯನ್ನು ಹೊಡೆದುರುಳಿಸುವುದು ಪ್ರಿಯವಾಗುತ್ತಿತ್ತು. ಆಗ ನನಗೆ ಸಿನೆಮಾ ಅಂದರೇನು ಅಂತ ಯಾರಾದರೂ ಪ್ರಶ್ನೆ ಮಾಡಿದ್ದರೆ ಕಷ್ಟವನ್ನೆಲ್ಲಾ ಅಟ್ಟಿ, ವಿಜಯಿಯಾಗುವ ಹೀರೋ ನ ಸಿನೆಮಾ ಅಷ್ಟೇ ನನ್ನ ಪಾಲಿನ ಐಡಿಯಲ್ ಸಿನೆಮಾ ಆಗಿತ್ತು.  ಹದಿಹರೆಯಕ್ಕೆ ಬಂದೊಡನೆ ರೋಮ್ಯಾಂಟಿಕ್ ಸಿನೆಮಾಗಳಾದ ಡಿಡಿಎಲ್ ಜೆ, ಹಮ್ ಆಪ್ಕೆ ಹೈ ಕೌನ್ ನಂತವು ಇಷ್ಟವಾಗುತ್ತಿದ್ದವು. ಆಗ ನನ್ನ ಹೀರೋ ಹುಡುಗಿಯ ಮನಸ್ಸನ್ನು ಹೇಗೆ ಕದಿಯುತ್ತಾನೆಂಬುದೇ ಆಸಕ್ತಿಕರ ವಿಷಯ. ಸ್ವಲ್ಪ ಸಮಯ ಥ್ರಿಲ್ಲರ್ ಗಳು ಇಷ್ಟವಾಗತೊಡಗಿದವು ಥ್ರಿಲ್ಲರ್ ನೊಳಗಿನ ತಂತ್ರ, ಒಂದೊಂದೇ ವಿಷಯವನ್ನು ಪ್ರೇಕ್ಷಕನಿಗೆ ತಿಳಿಸುತ್ತಾ ಹೋಗಿ ಕೊನೆಯ ಕ್ಲೈಮಾಕ್ಸ್ ನಲ್ಲಿ ಹೇಗೆ ಮುಖ್ಯಾಂಶ ರಿವೀಲ್ ಆಗುತ್ತದೆ ಎಂಬುದು ನನ್ನ ಸಿನೆಮಾದೆಡೆಗಿನ ಕಾತರವಾಗಿತ್ತು. ಕಾಲೇಜು ಮುಗಿದು ಕೆಲಸಕ್ಕಲೆಯುವಾಗ ಸಮಾಜದ ಮುಖಗಳು ಪರಿಚಯವಾಗತೊಡಗಿತು. ಶಂಕರ್ ರ ಜಂಟಲ್ ಮ್ಯಾನ್, ಅನ್ನಿಯನ್ ಮತ್ತು ರಾಜ್ ಕುಮಾರ್ ಚಿತ್ರಗಳು ಪ್ರಿಯವಾಗತೊಡಗಿದವು. ಅ ವೆಡ್ನೆಸ್ ಡೇ , ಆಮೀರ್ ನಂತವು ಆಕರ್ಷಕವಾಗತೊಡಗಿತು. ನನ್ನ ಐಡಿಯಲ್ ಹೀರೋನ ಕೆಲಸ ಆಗ ಸಮಾಜವನ್ನು ಒಬ್ಬಂಟಿಯಾಗಿ ಗುಡಿಸುವುದು!
ಈಗೆಲ್ಲಾ ಸಿನೆಮಾ ನೋಡುವಾಗ ಅದರ ಮೇಕಿಂಗ್ ಹೇಗಾಗಿರಬಹುದು, ಯಾವ ಯಾವ ಕೋನದಲ್ಲಿ ಕ್ಯಾಮರಾ ಇಟ್ಟಿದ್ದಾರೆ, ಕಥೆ ಯಾವ ಅಂಶವನ್ನು ಮೊದಲು ಅರುಹಿ ಯಾವಂಶವನ್ನು ಕ್ಲೈಮಾಕ್ಸ್ ನಲ್ಲಿ ತಿಳಿಸಿದ್ದಾರೆ, ಪ್ರೇಕ್ಷಕನ ಮನಸ್ಸಿಗೆ ಆ ಪಾತ್ರವನ್ನು ಹೇಗೆ ರಿಜಿಸ್ಟರ್ ಮಾಡಿದ್ದಾರೆ, ಅನವಶ್ಯಕ ಸನ್ನಿವೇಶಗಳ್ಯಾವುವು, ಹಿನ್ನೆಲೆ ಸಂಗೀತ ಹೇಗೆ ಪರಿಣಾಮಕಾರಿಯಾಗಿದೆ, ಸ್ಕ್ರಿಪ್ಟ್ ನಲ್ಲಿ ಇನ್ನೂ ಹೇಗೆ ಉತ್ತಮವಾಗಿ ಮಾಡಬಹುದಿತ್ತು ಅಂಶಗಳೆಲ್ಲ ಮನಸ್ಸಿಗೆ ಬರುತ್ತದೆ. ನಿರ್ದೇಶಕನ, ಲೇಖಕನ ಸಂದರ್ಶನಗಳನ್ನೆಲ್ಲಾ ಟೀವಿಯಲ್ಲಿ ನೋಡುವುದರಿಂದ ಸಿನೆಮಾದೆಡೆಗೆ ಆಸಕ್ತಿ ಹೆಚ್ಚಾಗಿದೆ. “ಮಿಸ್ಕಿನ್” ಅನ್ನುವ ತಮಿಳು ನಿರ್ದೇಶಕ “ನನ್ನ ಪ್ರಕಾರ ಖುಷಿಯಿಂದ ಸಾಯುವುದೆಂದರೆ ಆ ಸಾವು ನಾನು ನಿರ್ದೇಶಕನಾಗಿ ಸಿನೆಮಾವೊಂದರ ಕೊನೇ ಶಾಟ್ ತೆಗೆಯುವಾಗ ಬಂದರಷ್ಟೇ” ಅಂತನ್ನುವಾಗ ಆತನ ಸಿನೆಮಾದೆಡೆಗಿನ ತುಡಿತ ನೋಡಿ ಅಸೂಯೆಮೂಡುತ್ತದೆ. ಶಾಶ್ವಂಕ್ ರಿಡಂಪ್ಶನ್, ಸಿಟಿಜನ್ ಕೇನ್ , ಆನಂದ್(ಹಿಂದಿ) ನಂತಹಾ ಸಿನೆಮಾ ನೋಡುವಾಗ ಅದರ ಸ್ಕ್ರಿಪ್ಟ್ ಸಮಯದಲ್ಲಿ ಬರೆಯುವಾತನ ಪುಳಕ ಊಹಿಸಿದರೆ ಹೊಟ್ಟೆಕಿಚ್ಚಾಗುತ್ತದೆ. ನಮ್ಮ ಪಕ್ಕದಲ್ಲಿಯೇ ಆರ್ಯ, ಆನಂದ್, ಅಕಾಶಮಂತ, ರೈನ್ ಬೋ ಕಾಲನಿ, ಸುಬ್ರಮಣ್ಯಪುರಂ, ಅಂಜಾದೇ ನಂತಹ ಸಿನೆಮಾ ಮಾಡುವಾಗ ನಮ್ಮಲ್ಲೂ ಅಂಥಾದ್ದು ಮಾಡುವುದು ಕಷ್ಟಕರವಲ್ಲ ಅನ್ನುವ ಅನಿಸಿಕೆ ಹುಟ್ಟುತ್ತದೆ.
polish-cinema
ಹೀಗೆ ಈ ಸಿನೆಮಾ ಮೇಕಿಂಗ್ ನೆಡೆಗಿನ ಆಸಕ್ತಿ, ನನ್ನ “ನೋಡುವ, ಅನುಭವಿಸುವ, ನನ್ನೊಳಗಿನ ಕಲ್ಪನಾಲೋಕವನ್ನು ವಿಸ್ತರಿಸುವ ಪ್ರಕ್ರಿಯೆಗೆ” ತೊಡಕಾಗಿದೆಯೇನೊ. ಟೈಗರ್ ಪ್ರಭಾಕರ್ ಪೋಲೀಸ್ ಆಗಿ ನಾಲ್ಕು ಜನರನ್ನು ಚಚ್ಚುವಾಗ ಸಿಗುತ್ತಿದ್ದ ಆನಂದಗಳು, ಆಗಿನ ಸೆಟ್ ಗಳು, ಆಕ್ಷನ್ ಕಲಾವಿದರ ಬದುಕು, ಶಾಟ್ ತೆಗೆದಾದ ಮೇಲೆ ಏನಾಗಿರಬಹುದು ಎಂಬ ಊಹೆ, ಡಿಶ್ಯುಂ ಅನ್ನುವುದು ಹಿನ್ನೆಲೆಯಷ್ಟೇ ಅನ್ನುವ ಗ್ರಹಿಕೆ ಇದೆಲ್ಲಾ ಆಲೋಚನೆ, ಕಲ್ಪನೆ ಮನಸ್ಸಲ್ಲಿ ಹುಟ್ಟಿದ ಮೇಲೆ ಆ ದೃಶ್ಯದ ರಸವತ್ತತೆಯನ್ನು ಕಿತ್ತುಕೊಂಡಿದೆ ಅನ್ನಿಸುತ್ತದೆ. ಕ್ಯಾಮರಾ ಹಿಂದಿನ ಪರಿಕಲ್ಪನೆಗಳು ಸಿನೆಮಾ ಎಂದರೇನು ಅನ್ನುವ ನನ್ನ ಡೆಫಿನೇಶನ್ ಗಳನ್ನು ಅಂದಗೆಡಿಸಿವೆ.  ನನ್ನ ಸಿನೆಮಾದೆಡೆಗಿನ ವ್ಯಾಖ್ಯಾನಗಳು ತಾಂತ್ರಿಕತೆಗೆ, ಅದು ದೃಶ್ಯ ಮೂಡಿಸುವ “ಅನುಭವಗಳ ಹುಟ್ಟಿಸುವಿಕೆ”ಗೆ ಹೊಂದಿಕೊಂಡಿವೆಯೇ ಹೊರತು ಪ್ರೇಕ್ಷಕನ ಸ್ವಯಂ ಅನುಭೂತಿ, ಅವನ ಮನದಾಳದ ಅಚ್ಚರಿಗಳಿಗಲ್ಲ. ಅದು ಹೀಗೆ ವಿವರಿಸಬಲ್ಲೆ. ನಿರ್ದೇಶಕನೊಬ್ಬ ಒಂದು ಸಿನೆಮಾ ತೆರೆ ಮೇಲೆ ಮೂಡುವ ಮೊದಲು ಸ್ಕ್ರಿಪ್ಟಿನ ಇಂಚಿಂಚಿನ ಮೇಲೆ ಅದೆಷ್ಟು ವರ್ಕ್ ಮಾಡುತ್ತಿರುತ್ತಾನೆಂದರೆ, ಕಾಲಕ್ರಮೇಣ ಸ್ಕ್ರಿಪ್ಟಿನ ಬದಲಾವಣೆಗಳಿಗೆ, ಅದರ ಬೆಳವಣಿಗೆಯ ಮೌಲ್ಯ ತಿಳಿಯಬೇಕೆಂದರೆ ಆತ ಫ್ರೆಶ್ ಒಪೀನಿಯನ್ ಗಳ ಮೊರೆ ಹೋಗುತ್ತಾನೆ. ಮೊದಲ ಬಾರಿ ಕಥೆ ಕೇಳುವಾತನ ಪ್ರತಿಕ್ರಿಯೆಯ ಮೇಲೆ ತನ್ನ ಸ್ಕ್ರಿಪ್ಟಿನ ಶಕ್ತಿ ಅರಿಯುತ್ತಾನೆ. ಸಿಹಿ ತಿಂದಾದ ನಾಲಿಗೆ ಹೇಗೆ ಮತ್ತೆ ಕೂಡಲೇ ಸಿಹಿ ಗ್ರಹಿಸಲು ಸೋಲುತ್ತದೋ ಅಂತಹ ಮನಸ್ಥಿತಿ ಉಂಟಾಗಿರುತ್ತದೆ ಅವನಿಗೆ. ಆ ನಿರ್ದೇಶಕ ತನ್ನ ಸಿನೆಮಾ ತಯಾರಿಕೆ ಮೇಲೆಯೇ ತನ್ನ ಪ್ಯಾಶನ್ ಬೆಳೆಸಿಕೊಂಡಿರುವುದರಿಂದ, ಕಾಲಕ್ರಮೇಣ ದೃಶ್ಯಗಳಿಗೆ ಪ್ರೇಕ್ಷಕನ ಮೊದಲ ಪ್ರತಿಕ್ರಿಯೆ ಹೇಗಿರಬಹುದು ಅನ್ನುವುದನು ಗ್ರಹಿಸಲು ಆಗದೇ ಜಡ್ಡಾಗಿರುತ್ತದೆ.
ಲೋಕೋ ಭಿನ್ನ ರುಚಿಃ ಎಂಬಂತೆ ಅನುಭವ ಪಡೆದುಕೊಳ್ಳುವಾತನ (ಪ್ರೇಕ್ಷಕ) ಮತ್ತು ಅನುಭವ ಹುಟ್ಟಿಸುವಿಕೆಗೆ ಕಾರಣೀಭೂತನಾಗುವ (ನಿರ್ದೇಶಕ, ಲೇಖಕ) ಮನೋರುಚಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾದ್ದರಿಂದ ಸಿನೆಮಾಕ್ಕೆ ತಾಂತ್ರಿಕವಾಗಿ ವ್ಯಾಖ್ಯೆ ನೀಡಬಹುದಾದರೂ ಬೇರೆ ರೀತಿಯಲ್ಲಲ್ಲ.
(ಸಾಂಗತ್ಯದಲ್ಲಿ ಪ್ರಕಟವಾದದ್ದು)
Categories: ಸಿನೆಮಾ

ದುರಾದೃಷ್ಟವಂತರು..!

September 8, 2009 ರಂಜಿತ್ 8 comments
ಈ ಸಂಜೆಗಳು ಹಾಗೆಯೇ
ಕೆಲವೆಡೆ ಮುಷ್ಟಿ ಬಿಗಿದಿಟ್ಟರೂ
ಕೈಯೆಡೆಯಿಂದ ಉರುಳುವ ಮರುಳು
ಎಲ್ಲೋ ಕೆಲವರಿಗೆ ಮಾತ್ರ ಸಾಧ್ಯ
ಮನೆಗೆ ಬಂದು ಕಾಫಿ
ಕುಡಿಯುತಿರುವಾಗ ಬೆಚ್ಚಗಿನ ಬೋಂಡಾ
ಸೂರ್ಯನಂತೆ ಮೆಲ್ಲ ಮೆಲ್ಲ
ಹೊಟ್ಟೆಯಾಳಕ್ಕೆ ಇಳಿಯುವ
ಅನುಭವ ಮತ್ತು
ತುಂತುರ ತಂಪು
ಸುರಿಯುವುದನು ನೋಡುತ್ತ ಕೂರುವುದು
ಮತ್ತೆ ಹಲವರು ದುರದೃಷ್ಟವಂತರು
ಎಲ್ಲಿಯೋ ಅರ್ಜೆಂಟಾಗಿ ಹೋಗಬೇಕಾಗಿದ್ದಾಗ
ಮಳೆಮೂಡಿ ಅಡ್ರೆಸ್ಸಿಲ್ಲದ ಸೂರಿರಡಿ
ಮಳೆನಿಲ್ಲುವುದ ಕಾಯುತ್ತಾ
ಮೌನವಾಗಿ ನಿಂತ ಕ್ಷಣ,
ಕಾರಣವಿಲ್ಲದೇ ಹಳೆಯ ಅವಳ ನೆನಪಾಗಿ
ತನ್ನ ಸುಂದರ ಸಂಜೆಯೊಂದು ಕಣ್ಣ ಮುಂದೆಯೇ
ಧಗಧಗಿಸುತ್ತಾ ದಹಿಸುತ್ತಿರುವುದನು
ನಿರುಪಾಯನಾಗಿ
ಯುದ್ಧಮಧ್ಯೆಯ ನಿಶ್ಯಸ್ತ್ರ ಸೈನಿಕನಂತೆ
ಸುಮ್ಮನೆ ನೋಡಬೇಕಾಗುವುದು
ಅವರಿಗೂ ತಿಳಿದಿದೆ, ಆ ಕ್ಷಣದಲಿ
ಸಾವು ಹಾಗೆಲ್ಲ
ಸುಲಭವಾಗಿ
ಕರುಣೆ ತೋರುವಂಥಾದ್ದಲ್ಲ.ಈ ಸಂಜೆಗಳು ಹಾಗೆಯೇ
ಕೆಲವೆಡೆ ಮುಷ್ಟಿ ಬಿಗಿದಿಟ್ಟರೂ
ಕೈಯೆಡೆಯಿಂದ ಉರುಳುವ ಮರುಳು
ಎಲ್ಲೋ ಕೆಲವರಿಗೆ ಮಾತ್ರ ಸಾಧ್ಯ
ಮನೆಗೆ ಬಂದು ಕಾಫಿ
ಕುಡಿಯುತಿರುವಾಗ ಬೆಚ್ಚಗಿನ ಬೋಂಡಾ
ಸೂರ್ಯನಂತೆ ಮೆಲ್ಲ ಮೆಲ್ಲ
ಹೊಟ್ಟೆಯಾಳಕ್ಕೆ ಇಳಿಯುವ
ಅನುಭವ ಮತ್ತು
ತುಂತುರ ತಂಪು
ಸುರಿಯುವುದನು ನೋಡುತ್ತ ಕೂರುವುದು
ಮತ್ತೆ ಹಲವರು ದುರದೃಷ್ಟವಂತರು
ಎಲ್ಲಿಯೋ ಅರ್ಜೆಂಟಾಗಿ ಹೋಗಬೇಕಾಗಿದ್ದಾಗ
ಮಳೆಮೂಡಿ ಅಡ್ರೆಸ್ಸಿಲ್ಲದ ಸೂರಿರಡಿ
ಮಳೆನಿಲ್ಲುವುದ ಕಾಯುತ್ತಾ
ಮೌನವಾಗಿ ನಿಂತ ಕ್ಷಣ,
ಕಾರಣವಿಲ್ಲದೇ ಹಳೆಯ ಅವಳ ನೆನಪಾಗಿ
ತನ್ನ ಸುಂದರ ಸಂಜೆಯೊಂದು ಕಣ್ಣ ಮುಂದೆಯೇ
ಧಗಧಗಿಸುತ್ತಾ ದಹಿಸುತ್ತಿರುವುದನು
ನಿರುಪಾಯನಾಗಿ
ಯುದ್ಧಮಧ್ಯೆಯ ನಿಶ್ಯಸ್ತ್ರ ಸೈನಿಕನಂತೆ
ಸುಮ್ಮನೆ ನೋಡಬೇಕಾಗುವುದು
ಅವರಿಗೂ ತಿಳಿದಿದೆ, ಆ ಕ್ಷಣದಲಿ
ಸಾವು ಹಾಗೆಲ್ಲ
ಸುಲಭವಾಗಿ
ಕರುಣೆ ತೋರುವಂಥಾದ್ದಲ್ಲ.
ಈ ಸಂಜೆಗಳು ಹಾಗೆಯೇ
ಕೆಲವೆಡೆ ಮುಷ್ಟಿ ಬಿಗಿದಿಟ್ಟರೂ
ಕೈಯೆಡೆಯಿಂದ ಉರುಳುವ ಮರುಳು
ಎಲ್ಲೋ ಕೆಲವರಿಗೆ ಮಾತ್ರ ಸಾಧ್ಯ
ಮನೆಗೆ ಬಂದು ಕಾಫಿ
ಕುಡಿಯುತಿರುವಾಗ ಬೆಚ್ಚಗಿನ ಬೋಂಡಾ
ಸೂರ್ಯನಂತೆ ಮೆಲ್ಲ ಮೆಲ್ಲ
ಹೊಟ್ಟೆಯಾಳಕ್ಕೆ ಇಳಿಯುವ
ಅನುಭವ ಮತ್ತು
ತುಂತುರ ತಂಪು
ಸುರಿಯುವುದನು ನೋಡುತ್ತ ಕೂರುವುದು
parke_summer-rain
ಮತ್ತೆ ಹಲವರು ದುರದೃಷ್ಟವಂತರು
ಎಲ್ಲಿಯೋ ಅರ್ಜೆಂಟಾಗಿ ಹೋಗಬೇಕಾಗಿದ್ದಾಗ
ಮಳೆಮೂಡಿ ಅಡ್ರೆಸ್ಸಿಲ್ಲದ ಸೂರಿರಡಿ
ಮಳೆನಿಲ್ಲುವುದ ಕಾಯುತ್ತಾ
ಮೌನವಾಗಿ ನಿಂತ ಕ್ಷಣ,
ಕಾರಣವಿಲ್ಲದೇ ಹಳೆಯ ಅವಳ ನೆನಪಾಗಿ
ತನ್ನ ಸುಂದರ ಸಂಜೆಯೊಂದು ಕಣ್ಣ ಮುಂದೆಯೇ
ಧಗಧಗಿಸುತ್ತಾ ದಹಿಸುತ್ತಿರುವುದನು
ನಿರುಪಾಯನಾಗಿ
ಯುದ್ಧಮಧ್ಯೆಯ ನಿಶ್ಯಸ್ತ್ರ ಸೈನಿಕನಂತೆ
ಸುಮ್ಮನೆ ನೋಡಬೇಕಾಗುವುದು
ಅವರಿಗೂ ತಿಳಿದಿದೆ, ಆ ಕ್ಷಣದಲಿ
ಸಾವು ಹಾಗೆಲ್ಲ
ಸುಲಭವಾಗಿ
ಕರುಣೆ ತೋರುವಂಥಾದ್ದಲ್ಲ.

ಹೊಸ ಹನಿಗಳು.

September 7, 2009 ರಂಜಿತ್ 4 comments
ಪ್ರಶ್ನೆ
ಮಾತು ಬರೆದೋರು ಯಾರೋ
ಫೈಟು ಹೇಳ್ಕೊಡೋನು ಇನ್ಯಾರೋ
ಡ್ಯಾನ್ಸು ಕಲಿಸ್ಕೊಡೋನು ಮತ್ಯಾರೋ
ಹಾಗಾದರೆ
ಇವನ್ಯಾವ ಸೀಮೆ ಹೀರೋ?!
ಅರಸಿಕ
ನಿನ್ನಂದವನು ಬರೀ
ಹೊಗಳುತ್ತಾ ಕುಳಿತ
ನನ್ನನ್ನು ಇಡೀ ಜಗತ್ತು
ಶುದ್ಧ ಅರಸಿಕ ಮುಂಡೇದು
ಎಂದು ಅಪಹಾಸ್ಯ ಮಾಡಿತು!
ಪ್ರೀತಿ ಮತ್ತು ದ್ವೇಷ!
ಜೀವಕ್ಕಿಂತ ಹೆಚ್ಚು
ಪ್ರೀತಿಸಿದವರ್ಯಾರೂ
ಈಗವನ ಬಳಿಯಿಲ್ಲ
ಅದಕ್ಕೇ ಅವನಿಗೆ
ದ್ವೇಷ ಅಂದರೆ ಪ್ರೀತಿ
ಪ್ರೀತಿ ಅಂದರೆ ದ್ವೇಷ!
(ಈ ಹನಿಗಳು ವಿ.ಕ. ದ ಸಿಂಪ್ಲಿಸಿಟಿ ಪೇಜ್ ನಲ್ಲಿ ೩೧ ಆಗಸ್ಟ್ ೦೯ ರಂದು ಪ್ರಕಟ ಆಗಿದೆ)
ಪ್ರಶ್ನೆ
ಮಾತು ಬರೆದೋರು ಯಾರೋ
ಫೈಟು ಹೇಳ್ಕೊಡೋನು ಇನ್ಯಾರೋ
ಡ್ಯಾನ್ಸು ಕಲಿಸ್ಕೊಡೋನು ಮತ್ಯಾರೋ
ಹಾಗಾದರೆ
ಇವನ್ಯಾವ ಸೀಮೆ ಹೀರೋ?!
ಅರಸಿಕ
ನಿನ್ನಂದವನು ಬರೀ
ಹೊಗಳುತ್ತಾ ಕುಳಿತ
ನನ್ನನ್ನು ಇಡೀ ಜಗತ್ತು
ಶುದ್ಧ ಅರಸಿಕ ಮುಂಡೇದು
ಎಂದು ಅಪಹಾಸ್ಯ ಮಾಡಿತು!
ಪ್ರೀತಿ ಮತ್ತು ದ್ವೇಷ!
ಜೀವಕ್ಕಿಂತ ಹೆಚ್ಚು
ಪ್ರೀತಿಸಿದವರ್ಯಾರೂ
ಈಗವನ ಬಳಿಯಿಲ್ಲ
ಅದಕ್ಕೇ ಅವನಿಗೆ
ದ್ವೇಷ ಅಂದರೆ ಪ್ರೀತಿ
ಪ್ರೀತಿ ಅಂದರೆ ದ್ವೇಷ!
(ಈ ಹನಿಗಳು ವಿ.ಕ. ದ ಸಿಂಪ್ಲಿಸಿಟಿ ಪೇಜ್ ನಲ್ಲಿ ೩೧ ಆಗಸ್ಟ್ ೦೯ ರಂದು ಪ್ರಕಟ ಆಗಿದೆ)
Categories: ಹನಿಗಳು...

ವಿರಹ ಗೀತೆ..!

September 1, 2009 ರಂಜಿತ್ 7 comments
ಈ ಮಳೆ ಇಳಿಯುವ ಮುಸ್ಸಂಜೆ ತೊಯ್ಯುವ ಗಳಿಗೆ
ದಯವಿಟ್ಟು
ಒಂದು ವಿರಹ ಗೀತೆ ಕೊಡಿ
ಗುನುಗಿ ಬದುಕಿಕೊಳ್ಳುತ್ತೇನೆ
untitled
ನಿಮಗೆ ತೋರುವ ಸುರಿಯುವ ತಂಪು
ನಿಜವಾದ್ದಲ್ಲ
ಅದರ ಮುಖವಾಡ ಕಳಚಿ
ಹನಿಹನಿಯೊಳಗಿಣುಕುವ ಕೆಂಡ
ಮೆಲ್ಲಗೆ ನನ್ನೊಳಗನ್ನು ದಹಿಸುವ ದೃಶ್ಯ
ನಿಮಗೆ ಕಾಣಿಸಲಾರೆ

 

ಮೌನವಾಗಿ ಯಾರಿಗೂ ತೋರದೇ
ಮಳೆ ಮಣ್ಣೊಳು ಸೇರಿ
ಗಂಧ ಮಾಡುವ ಮಸಲತ್ತು,
ಮತ್ತು ಅದು ತರಿಸುವ
ನೆನಪ ಮೊನೆಯಂಚು ಭಾರೀ ಚೂಪು

 

feelings,girl,neck,nude,painting,sadness,water-069e13779cbfda2448d9bac42a80ac2e_m

 

ಕೂಗಲೂ ಆಗದ ನೋವುಗಳನ್ನು
ಖಾಲೀ ಪೀಲಿ ಪದಗಳಲ್ಲಿ ನಿಮಗೆಲ್ಲಾ
ವಿವರಿಸಲಾರೆ

ಒಂದಿಷ್ಟು ಕಿಡಿಗಳಿವೆ ಒಳಗೆ
ಕ್ಷಣಗಳ ಕಾಡಿಗೆ ಸುರಿದು
ಆ ಬೆಚ್ಚಗಿನ ಮುಸುಕಿನಲ್ಲೇ ಉಳಿದುಕೊಳ್ಳುವೆ

ದಯವಿಟ್ಟು, ಒಂದು ವಿರಹ ಗೀತೆ ಕೊಡಿ.
ಗುನುಗಿ ಬದುಕಿಕೊಳ್ಳುವೆ.