ನನ್ನೊಳಗೂ ಒಂದು ಸುಂದರ ಬೆಳಗು!

August 20, 2009 ರಂಜಿತ್ 8 comments
ತನ್ನ ಮಡಿಲಿನಲಿ ಒಂದು ಜಗತ್ತನ್ನೇ ಮಲಗಿಸಿಕೊಂಡಿರುವ ರಾತ್ರಿಯೊಂದು, ಅದನ್ನು ಹಗಲಿನ ಹೆಗಲಿಗೆ, ಸೂರ್ಯನ ಸುಪರ್ದಿಗೆ ಒಪ್ಪಿಸಲು ತಯಾರಾಗುವ ಸಮಯ.
ಚಂದ್ರ ಹೊರಗೆ ತನ್ನ ಪಾಳಿ ಯಾವಾಗ ಮುಗಿಯುತ್ತದೋ ಎಂದು ಆಕಳಿಸುತ್ತಿದ್ದಾನೆ. ದಿನವೂ ಅಮ್ಮ ಅದ್ಯಾವಾಗಲೋ ಎದ್ದು ಮನೆಮುಂದೆ ರಂಗವಲ್ಲಿ ಇಡುವಾಗ ಕಣ್ಣೆತ್ತಿ ನೋಡಿದರೆ ತನ್ನ ಮೇಲೂ ರಂಗೋಲಿ ಬರೆದುಬಿಟ್ಟಾಳು ಎಂದು ಹೆದರಿ ಪಿಳಿಪಿಳಿ ನೋಡುವ ಆಗಸದ ಚುಕ್ಕಿಗಳು. ಜಯಂತರು ತಮ್ಮ ಒಂದು ಕವಿತೆಯಲ್ಲಿ ಅಂದಂತೆ ಹಿತ್ತಲಿನ ತೋಟದಲಿ “ರೆಕ್ಕೆಗಳ ಫಡಫಡಿಸಿ ಮರವೊಂದು ಕತ್ತಲ ಕೊಡವಿಕೊಳ್ಳುತ್ತಿದೆ”. ಪಾರಿಜಾತ ಗಿಡದ ಮೇಲಿನ ಇಬ್ಬನಿ ಇನ್ನೂ ಜಾರದೇ ಜಂಭ ಬೀರುತ್ತಿದೆ. ಇಬ್ಬನಿ ಜಾರದೇ ತನ್ನ ಹೂವಿನ ಮೊಗ್ಗೊಡೆಸುವುದಿಲ್ಲ ಎಂಬ ಗಿಡದ ಹಠ ಇನ್ನೂ ಜಾರಿಯಲ್ಲಿದೆ. ತೋಟದ ಕರವೀರ, ತುಳಸಿಯಂತೆ ತನಗೂ ಕಟ್ಟೆ ಕಟ್ಟಿಲ್ಲ ಅಂತೆಲ್ಲಾ ಸಿಟ್ಟಿನಿಂದ ಎಂದೂ ಹೂವ ಬಿಡದೇ ಇದ್ದುದಿಲ್ಲ. ಗಿಡದ ಗೂಡಿನಲಿ ಆಗಲೇ ಬೆಳಗಾಗಿದೆ. ಮರಿ ಎದ್ದುದ್ದಕ್ಕೆ ಹಕ್ಕಿ ಬೇಗ ಬೇಗ ಗೂಡಿನಿಂದ ಹೊರಟಿದೆ; ಮರಿಯ ಕೂಗು ತಾರಕಕ್ಕೇರುವ ಮುನ್ನ ಕಾಳೊಂದನು ಅದರ ಗಂಟಲಲ್ಲಿ ಇಳಿಸಬೇಕಿದೆ. ಸ್ವಲ್ಪವೇ ದೂರದಲ್ಲಿ ಎನ್ನೆಚ್ ೧೭ ರ ವಾಹನಗಳು ಚಲಿಸುವ ಸದ್ದು ಕತ್ತಲೆಯ ಮೌನಕ್ಕೆ ಹಿನ್ನೆಲೆ ಸಂಗೀತ ಒದಗಿಸುತ್ತದೆ. ಒಮ್ಮೊಮ್ಮೆ ಹಾಗೆ ಕೇಳದೇ ಹೋದರೆ ಮನಸ್ಸಿಗೆ ಬೆಳಗ್ಗೆಂದು ಒಪ್ಪಿಕೊಳ್ಳುವುದೇ ಕಷ್ಟ.
ಒಲೆಗೆ ಇದ್ದ ಕಟ್ಟಿಗೆಗಳನ್ನು ಕೊಂಚ ಕೊಂಚವೇ ಹಾಕಿ ಈಗ ಅಮ್ಮ ಬಿಸಿನೀರು ಕಾಯಿಸುತ್ತಿದ್ದಾಳೆ. ಅವಳ ಅರ್ಧ ತೆರೆದ  ಕಣ್ಣು ಒಲೆಯ ಬೆಂಕಿ ಬೆಳಕಲ್ಲಿ ಮತ್ತಷ್ಟು ಹೊಳೆಯುತ್ತಿದೆ. ಹಿಂದಿನ ದಿನದ ಒಲೆಯ ಬಿಸಿಗೆ ಬೆಚ್ಚಗೆ ಮಲಗಿದ್ದ ಬೆಕ್ಕು, ಅಮ್ಮ ಏಳಿಸಿದ್ದಕ್ಕೆ ಮತ್ತು ತನ್ನ ನಿದಿರೆ ಭಂಗವಾಗಿದ್ದಕ್ಕೆ ಸಿಟ್ಟಿನಿಂದ ನೋಡುತ್ತಿದೆ. ಅಮ್ಮ ಮಧ್ಯೆ ಮಧ್ಯೆ ಅಡುಗೆ ಮನೆಗೆ ಬಂದು ಅಲ್ಲಿನ ತಯಾರಿಯನ್ನೂ ನೋಡಿಕೊಳ್ಳುತ್ತಿದ್ದಾಳೆ. ಅಡುಗೆ ಮನೆಗೆ ಹೋಗುವ ದಾರಿಯಲೇ ಒಂದು ಹಾಲ್. ಅಲ್ಲಿ ಒಬ್ಬರ ಪಕ್ಕ ಇನ್ನೊಬ್ಬರಂತೆ ನಾನು, ನನ್ನಣ್ಣ ಬಿದ್ದುಕೊಂಡಿದ್ದೇವೆ. ಫ್ಯಾನಿನ ಸದ್ದಿಗೂ, ಗೊರಕೆಗೂ ಸ್ಪರ್ಧೆ ನಡೆಯುತ್ತಿರುತ್ತದೆ. ದೊಡ್ಡ ಗೊರಕೆ ಸದ್ದು ಕೇಳಿ ಅಮ್ಮನಿಗೆ ಅಪ್ಪನ ನೆನಪಾಗಿ ಪುಟ್ಟ ಕಣ್ಣು ಮಂಜಾಗುತ್ತದೆ. ಅಣ್ಣನಿಗಿನ್ನೂ ಮಧ್ಯರಾತ್ರಿ. ಆತನದು ಸೂರ್ಯವಂಶ. ಸೂರ್ಯ ಹುಟ್ಟಿ ಬಹಳ ಹೊತ್ತಿನ ನಂತರವಷ್ಟೇ ಅವನ ಬೆಳಗು. ದಿನವೂ ಮಲಗುವಾಗಲೇ ಅಪರಾತ್ರಿ.  ಎಚ್ಚರಿರುವ ಅಮ್ಮ ದಿನವೂ ಹನ್ನೆರೆಡು-ಒಂದಾಗುತ್ತಲೇ ಒತ್ತಾಯ ಮಾಡಿ ಅವನ ಅಕೌಂಟ್ಸ್ ಬರವಣಿಗೆಯನು ನಿಲ್ಲಿಸುತ್ತಾಳೆ. ಗಾಢವಾದ ನಿದ್ರೆಯಲ್ಲಿರುವ ಅವನ ಬಿಳೀ ಬನೀನಿನಲಿ ಪುಟ್ಟ ತೂತೊಂದು ನಕ್ಷತ್ರದಂತೆ ಕಾಣುತ್ತಿದೆ, ಅದ ನೋಡಿದ ಅಮ್ಮ ತನ್ನಷ್ಟಕ್ಕೆ ತಾನೇ ಮುಗುಳ್ನಗುತ್ತಾಳೆ. ಆ ನಗು ಅರಳುವಾಗ ಮುಂಚೆ ಮೂಡಿದ್ದ ಬಿಂದು, ಕಣ್ಣಿನ ಹಿತ್ತಲುಬಾಗಿಲಿಂದ ಓಡಿಹೋಗುತ್ತದೆ.
ನಾನು ಕೆಲವೊಮ್ಮೆ ಐದಕ್ಕೆಲ್ಲಾ ಎದ್ದಿದ್ದರೂ ಸುಮ್ಮನೆ ಏನೋ ಆಲೋಚಿಸುತ್ತಾ, ಮೌನವಾಗಿ ಮಲಗಿಕೊಂಡೇ ಇರುವುದನ್ನು ಅಮ್ಮ ಗಮನಿಸಿದ್ದಾಳೆ. ಅದಕ್ಕೇ ಅಡುಗೆಮನೆಗೆ ಹೋಗುವಾಗಲೆಲ್ಲ ಒಮ್ಮೆ ನನ್ನ ಕಣ್ಣಬಳಿ ಬಂದು ಎಚ್ಚರಿದ್ದಾನೇನೋ ಅಂತ ಇಣುಕುತ್ತಾಳೆ. ನಾನು ನಾಟಕವಾಡುತ್ತಿದ್ದೆನೇನೊ ಅನ್ನಿಸಿ ಕೈಯ್ಯಲ್ಲಿನ ಹನಿಯನ್ನು ಚಿಮುಕಿ ಪರೀಕ್ಷಿಸುತ್ತಾಳೆ. ಮೆದುವಾಗಿ ಕೆನ್ನೆಬಡಿದು ನೋಡುತ್ತಾಳೆ. ಆಕೆಯ ಮಮತೆಯ, ಬೆಚ್ಚಗಿನ ಕೈಯ್ಯ ಸ್ಪರ್ಶ, ಒಂದು ಜೀವಂತಿಕೆಯ ಅಲೆಯೊಂದನು ದೇಹವಿಡೀ ಪಸರಿಸುತ್ತದೆ. ಅಡುಗೆಮನೆಯಲಿ ಹಬೆಯಾಡುವ ಒಂದು ಲೋಟ ಕಾಫಿ ರೆಡಿಯಾಗಿರುತ್ತದೆ ಆಗಲೇ. ನಾನೆದ್ದ ಕೂಡಲೇ ಕಾಫಿ ಕುಡಿಯುತ್ತಾ ಸ್ವಲ್ಪ ಹರಟೆ ಹೊಡೆಯಬೇಕೆಂಬುದವಳಾಸೆ.
ಮನೆಬೆಕ್ಕು ತನ್ನ ಮೊದಲ ಸುತ್ತಿನ ಊಟಕ್ಕಾಗಿ ಅಮ್ಮನನ್ನು ಪೀಡಿಸುತ್ತಿದೆ. ತುರಿದ ಕಾಯಿ, ಹಾಲು ಬಿಸ್ಕಿಟ್ಟು ಹಾಕುವವರೆಗೂ ಹಾಗೆಲ್ಲ ಸುಮ್ಮನೇ ಇರುವುದಿಲ್ಲವದು. ಅಮ್ಮ ಕಾಯಿ ತುರಿಯುವಾಗ ಮಾತ್ರ ಧ್ಯಾನಸ್ಥ ಮುನಿಯಂತೆ ಎದುರೇ ಕುಳಿತಿರುತ್ತದೆ. ಅದಕ್ಕೆ ಹಾಕದೇ ಇದ್ದರೆ ನಮ್ಮ ಹೊಟ್ಟೆಕೆಟ್ಟೀತು ಎಂಬ ಭಾವ ಉಕ್ಕಿಸುವಂತೆ ಅದು ತಿಂಡಿಯೆಡೆಗೆ ನೋಡುವ ರೀತಿ ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತದೆ. ನಮ್ಮ ಸೈಕಾಲಜಿಯೆಲ್ಲಾ ಅರಗಿಸಿಕೊಂಡುಬಿಟ್ಟಿತೇ ಈ ಪುಟ್ಟ ಮುದ್ದು ಪ್ರಾಣಿ !?
ಎದ್ದಿದ್ದರೂ ನನ್ನ ಮೌನ ತಪಸ್ಸಿಗೆ ಭಂಗ ಬರಬಾರದೆಂಬಾಸೆಯಿಂದ ಮಲಗಿದ್ದಂತೆ ನಾಟಕವಾಡುತ್ತೇನೆ. ಹನಿ ಚಿಮುಕಿಸುವಿಕೆಗೆಲ್ಲಾ ಅಲುಗದಂತೆ ನಿದ್ರಿಸುವ ನಾಟಕ ಅಭ್ಯಾಸವಾಗಿದೆ. ಅತ್ತ ಅಡುಗೆ ಮನೆಯ ಕಿಟಕಿಯಿಂದ ಸೂರ್ಯ ಕಾಣತೊಡಗುತ್ತಲೇ, ಮೌನವೂ ಕೊಂಚ ಭಾರವೆನ್ನಿಸಿ ಎದ್ದು ಹಗುರಾಗುತ್ತೇನೆ. ಆಗಲೇ ಘನೀಭವಿಸಿದ್ದ ಭಾವವೊಂದನ್ನು ಪುಟ್ಟದಾಗಿ ಮೊಬೈಲಿನಲ್ಲಿ ಇಳಿಸುತ್ತೇನೆ. ನಂತರ ಎಲ್ಲರಿಗೂ ಎಸ್ಸೆಮ್ಮೆಸ್ಸಿನ ಮೂಲಕ ಕಳಿಸುವಾಗ ಆಗುತ್ತಿರುವ ಸದ್ದಿಗೆ ತಣ್ಣಗಾಗಿದ್ದ ಕಾಫಿಯನು ಮತ್ತೆ ಬಿಸಿಮಾಡುತ್ತಾಳೆ ಅಮ್ಮ. ಮುಖತೊಳೆದು ಬರುತ್ತಲೇ  ಕಾಫಿಯೊಂದಿಗೆ ಬಿಸಿಬಿಸಿ ಹರಟೆ ಶುರು. ಬೆಕ್ಕು ಈಗ ನನ್ನ ಕಾಲು ಸುತ್ತುವರಿಯುತ್ತದೆ. ಗೊತ್ತಿದೆ ಅದಕ್ಕೆ, ತನಗೆ ಎರಡನೇ ಸುತ್ತಿನ ಊಟ ಸಿಗಲಿದೆ ಎಂಬುದು.
“ಅಲ್ಲಿ ಊಟ ಹ್ಯಾಗೆ? ತರಕಾರಿ ಸಿಗ್ತದಾ? ಏನೂ ಸಿಗದಿದ್ರೆ ಅವಲಕ್ಕಿ-ಮೊಸರು ಸೇರಿಸ್ಕೊಂಡು ತಿನ್ಬಾರ್ದಾ? ” ಹೀಗೆ ಪ್ರಾರಂಭ ಅಮ್ಮನ ಪ್ರಶ್ನಾವಳಿ; ಮುದ್ದು ಸುಪ್ರಭಾತ!  ಅಲ್ಲಿನೆಲ್ಲಾ ವಿವರಗಳನ್ನು ಪದರು ಪದರಾಗಿ ವಿವರಿಸುತ್ತಿರುವಾಗ ಸೂರ್ಯ ಹೊಟ್ಟೆಕಿಚ್ಚಿನಿಂದಲೋ, ತನ್ನ ಕಾರ್ಯವೇ ಅದೇ ಎಂಬಂತೆ ಉರಿಯುತ್ತಾ ಮೆತ್ತಗೆ ಮೂಡಿಬರುತ್ತಿರುತ್ತಾನೆ.
ಒಂದು ಸುಂದರ ಸಸಿಯಂತ ದಿನದ, ಹೂವಿನಂತ ಬೆಳಿಗ್ಗೆ ಹೀಗೆ ಮೊಗ್ಗೊಡೆಯುತ್ತದೆ; ನನ್ನೊಳಗೂ ಕೂಡ!
ತನ್ನ ಮಡಿಲಿನಲಿ ಒಂದು ಜಗತ್ತನ್ನೇ ಮಲಗಿಸಿಕೊಂಡಿರುವ ರಾತ್ರಿಯೊಂದು, ಅದನ್ನು ಹಗಲಿನ ಹೆಗಲಿಗೆ, ಸೂರ್ಯನ ಸುಪರ್ದಿಗೆ ಒಪ್ಪಿಸಲು ತಯಾರಾಗುವ ಸಮಯ.
ಚಂದ್ರ ಹೊರಗೆ ತನ್ನ ಪಾಳಿ ಯಾವಾಗ ಮುಗಿಯುತ್ತದೋ ಎಂದು ಆಕಳಿಸುತ್ತಿದ್ದಾನೆ. ದಿನವೂ ಅಮ್ಮ ಅದ್ಯಾವಾಗಲೋ ಎದ್ದು ಮನೆಮುಂದೆ ರಂಗವಲ್ಲಿ ಇಡುವಾಗ ಕಣ್ಣೆತ್ತಿ ನೋಡಿದರೆ ತನ್ನ ಮೇಲೂ ರಂಗೋಲಿ ಬರೆದುಬಿಟ್ಟಾಳು ಎಂದು ಹೆದರಿ ಪಿಳಿಪಿಳಿ ನೋಡುವ ಆಗಸದ ಚುಕ್ಕಿಗಳು. ಜಯಂತರು ತಮ್ಮ ಒಂದು ಕವಿತೆಯಲ್ಲಿ ಅಂದಂತೆ ಹಿತ್ತಲಿನ ತೋಟದಲಿ “ರೆಕ್ಕೆಗಳ ಫಡಫಡಿಸಿ ಮರವೊಂದು ಕತ್ತಲ ಕೊಡವಿಕೊಳ್ಳುತ್ತಿದೆ”. ಪಾರಿಜಾತ ಗಿಡದ ಮೇಲಿನ ಇಬ್ಬನಿ ಇನ್ನೂ ಜಾರದೇ ಜಂಭ ಬೀರುತ್ತಿದೆ. ಇಬ್ಬನಿ ಜಾರದೇ ತನ್ನ ಹೂವಿನ ಮೊಗ್ಗೊಡೆಸುವುದಿಲ್ಲ ಎಂಬ ಗಿಡದ ಹಠ ಇನ್ನೂ ಜಾರಿಯಲ್ಲಿದೆ. ತೋಟದ ಕರವೀರ, ತುಳಸಿಯಂತೆ ತನಗೂ ಕಟ್ಟೆ ಕಟ್ಟಿಲ್ಲ ಅಂತೆಲ್ಲಾ ಸಿಟ್ಟಿನಿಂದ ಎಂದೂ ಹೂವ ಬಿಡದೇ ಇದ್ದುದಿಲ್ಲ. ಗಿಡದ ಗೂಡಿನಲಿ ಆಗಲೇ ಬೆಳಗಾಗಿದೆ. ಮರಿ ಎದ್ದುದ್ದಕ್ಕೆ ಹಕ್ಕಿ ಬೇಗ ಬೇಗ ಗೂಡಿನಿಂದ ಹೊರಟಿದೆ; ಮರಿಯ ಕೂಗು ತಾರಕಕ್ಕೇರುವ ಮುನ್ನ ಕಾಳೊಂದನು ಅದರ ಗಂಟಲಲ್ಲಿ ಇಳಿಸಬೇಕಿದೆ. ಸ್ವಲ್ಪವೇ ದೂರದಲ್ಲಿ ಎನ್ನೆಚ್ ೧೭ ರ ವಾಹನಗಳು ಚಲಿಸುವ ಸದ್ದು ಕತ್ತಲೆಯ ಮೌನಕ್ಕೆ ಹಿನ್ನೆಲೆ ಸಂಗೀತ ಒದಗಿಸುತ್ತದೆ. ಒಮ್ಮೊಮ್ಮೆ ಹಾಗೆ ಕೇಳದೇ ಹೋದರೆ ಮನಸ್ಸಿಗೆ ಬೆಳಗ್ಗೆಂದು ಒಪ್ಪಿಕೊಳ್ಳುವುದೇ ಕಷ್ಟ.
ಒಲೆಗೆ ಇದ್ದ ಕಟ್ಟಿಗೆಗಳನ್ನು ಕೊಂಚ ಕೊಂಚವೇ ಹಾಕಿ ಈಗ ಅಮ್ಮ ಬಿಸಿನೀರು ಕಾಯಿಸುತ್ತಿದ್ದಾಳೆ. ಅವಳ ಅರ್ಧ ತೆರೆದ  ಕಣ್ಣು ಒಲೆಯ ಬೆಂಕಿ ಬೆಳಕಲ್ಲಿ ಮತ್ತಷ್ಟು ಹೊಳೆಯುತ್ತಿದೆ. ಹಿಂದಿನ ದಿನದ ಒಲೆಯ ಬಿಸಿಗೆ ಬೆಚ್ಚಗೆ ಮಲಗಿದ್ದ ಬೆಕ್ಕು, ಅಮ್ಮ ಏಳಿಸಿದ್ದಕ್ಕೆ ಮತ್ತು ತನ್ನ ನಿದಿರೆ ಭಂಗವಾಗಿದ್ದಕ್ಕೆ ಸಿಟ್ಟಿನಿಂದ ನೋಡುತ್ತಿದೆ. ಅಮ್ಮ ಮಧ್ಯೆ ಮಧ್ಯೆ ಅಡುಗೆ ಮನೆಗೆ ಬಂದು ಅಲ್ಲಿನ ತಯಾರಿಯನ್ನೂ ನೋಡಿಕೊಳ್ಳುತ್ತಿದ್ದಾಳೆ. ಅಡುಗೆ ಮನೆಗೆ ಹೋಗುವ ದಾರಿಯಲೇ ಒಂದು ಹಾಲ್. ಅಲ್ಲಿ ಒಬ್ಬರ ಪಕ್ಕ ಇನ್ನೊಬ್ಬರಂತೆ ನಾನು, ನನ್ನಣ್ಣ ಬಿದ್ದುಕೊಂಡಿದ್ದೇವೆ. ಫ್ಯಾನಿನ ಸದ್ದಿಗೂ, ಗೊರಕೆಗೂ ಸ್ಪರ್ಧೆ ನಡೆಯುತ್ತಿರುತ್ತದೆ. ದೊಡ್ಡ ಗೊರಕೆ ಸದ್ದು ಕೇಳಿ ಅಮ್ಮನಿಗೆ ಅಪ್ಪನ ನೆನಪಾಗಿ ಪುಟ್ಟ ಕಣ್ಣು ಮಂಜಾಗುತ್ತದೆ. ಅಣ್ಣನಿಗಿನ್ನೂ ಮಧ್ಯರಾತ್ರಿ. ಆತನದು ಸೂರ್ಯವಂಶ. ಸೂರ್ಯ ಹುಟ್ಟಿ ಬಹಳ ಹೊತ್ತಿನ ನಂತರವಷ್ಟೇ ಅವನ ಬೆಳಗು. ದಿನವೂ ಮಲಗುವಾಗಲೇ ಅಪರಾತ್ರಿ.  ಎಚ್ಚರಿರುವ ಅಮ್ಮ ದಿನವೂ ಹನ್ನೆರೆಡು-ಒಂದಾಗುತ್ತಲೇ ಒತ್ತಾಯ ಮಾಡಿ ಅವನ ಅಕೌಂಟ್ಸ್ ಬರವಣಿಗೆಯನು ನಿಲ್ಲಿಸುತ್ತಾಳೆ. ಗಾಢವಾದ ನಿದ್ರೆಯಲ್ಲಿರುವ ಅವನ ಬಿಳೀ ಬನೀನಿನಲಿ ಪುಟ್ಟ ತೂತೊಂದು ನಕ್ಷತ್ರದಂತೆ ಕಾಣುತ್ತಿದೆ, ಅದ ನೋಡಿದ ಅಮ್ಮ ತನ್ನಷ್ಟಕ್ಕೆ ತಾನೇ ಮುಗುಳ್ನಗುತ್ತಾಳೆ. ಆ ನಗು ಅರಳುವಾಗ ಮುಂಚೆ ಮೂಡಿದ್ದ ಬಿಂದು, ಕಣ್ಣಿನ ಹಿತ್ತಲುಬಾಗಿಲಿಂದ ಓಡಿಹೋಗುತ್ತದೆ.
ನಾನು ಕೆಲವೊಮ್ಮೆ ಐದಕ್ಕೆಲ್ಲಾ ಎದ್ದಿದ್ದರೂ ಸುಮ್ಮನೆ ಏನೋ ಆಲೋಚಿಸುತ್ತಾ, ಮೌನವಾಗಿ ಮಲಗಿಕೊಂಡೇ ಇರುವುದನ್ನು ಅಮ್ಮ ಗಮನಿಸಿದ್ದಾಳೆ. ಅದಕ್ಕೇ ಅಡುಗೆಮನೆಗೆ ಹೋಗುವಾಗಲೆಲ್ಲ ಒಮ್ಮೆ ನನ್ನ ಕಣ್ಣಬಳಿ ಬಂದು ಎಚ್ಚರಿದ್ದಾನೇನೋ ಅಂತ ಇಣುಕುತ್ತಾಳೆ. ನಾನು ನಾಟಕವಾಡುತ್ತಿದ್ದೆನೇನೊ ಅನ್ನಿಸಿ ಕೈಯ್ಯಲ್ಲಿನ ಹನಿಯನ್ನು ಚಿಮುಕಿ ಪರೀಕ್ಷಿಸುತ್ತಾಳೆ. ಮೆದುವಾಗಿ ಕೆನ್ನೆಬಡಿದು ನೋಡುತ್ತಾಳೆ. ಆಕೆಯ ಮಮತೆಯ, ಬೆಚ್ಚಗಿನ ಕೈಯ್ಯ ಸ್ಪರ್ಶ, ಒಂದು ಜೀವಂತಿಕೆಯ ಅಲೆಯೊಂದನು ದೇಹವಿಡೀ ಪಸರಿಸುತ್ತದೆ. ಅಡುಗೆಮನೆಯಲಿ ಹಬೆಯಾಡುವ ಒಂದು ಲೋಟ ಕಾಫಿ ರೆಡಿಯಾಗಿರುತ್ತದೆ ಆಗಲೇ. ನಾನೆದ್ದ ಕೂಡಲೇ ಕಾಫಿ ಕುಡಿಯುತ್ತಾ ಸ್ವಲ್ಪ ಹರಟೆ ಹೊಡೆಯಬೇಕೆಂಬುದವಳಾಸೆ.
ಮನೆಬೆಕ್ಕು ತನ್ನ ಮೊದಲ ಸುತ್ತಿನ ಊಟಕ್ಕಾಗಿ ಅಮ್ಮನನ್ನು ಪೀಡಿಸುತ್ತಿದೆ. ತುರಿದ ಕಾಯಿ, ಹಾಲು ಬಿಸ್ಕಿಟ್ಟು ಹಾಕುವವರೆಗೂ ಹಾಗೆಲ್ಲ ಸುಮ್ಮನೇ ಇರುವುದಿಲ್ಲವದು. ಅಮ್ಮ ಕಾಯಿ ತುರಿಯುವಾಗ ಮಾತ್ರ ಧ್ಯಾನಸ್ಥ ಮುನಿಯಂತೆ ಎದುರೇ ಕುಳಿತಿರುತ್ತದೆ. ಅದಕ್ಕೆ ಹಾಕದೇ ಇದ್ದರೆ ನಮ್ಮ ಹೊಟ್ಟೆಕೆಟ್ಟೀತು ಎಂಬ ಭಾವ ಉಕ್ಕಿಸುವಂತೆ ಅದು ತಿಂಡಿಯೆಡೆಗೆ ನೋಡುವ ರೀತಿ ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತದೆ. ನಮ್ಮ ಸೈಕಾಲಜಿಯೆಲ್ಲಾ ಅರಗಿಸಿಕೊಂಡುಬಿಟ್ಟಿತೇ ಈ ಪುಟ್ಟ ಮುದ್ದು ಪ್ರಾಣಿ !?
ಎದ್ದಿದ್ದರೂ ನನ್ನ ಮೌನ ತಪಸ್ಸಿಗೆ ಭಂಗ ಬರಬಾರದೆಂಬಾಸೆಯಿಂದ ಮಲಗಿದ್ದಂತೆ ನಾಟಕವಾಡುತ್ತೇನೆ. ಹನಿ ಚಿಮುಕಿಸುವಿಕೆಗೆಲ್ಲಾ ಅಲುಗದಂತೆ ನಿದ್ರಿಸುವ ನಾಟಕ ಅಭ್ಯಾಸವಾಗಿದೆ. ಅತ್ತ ಅಡುಗೆ ಮನೆಯ ಕಿಟಕಿಯಿಂದ ಸೂರ್ಯ ಕಾಣತೊಡಗುತ್ತಲೇ, ಮೌನವೂ ಕೊಂಚ ಭಾರವೆನ್ನಿಸಿ ಎದ್ದು ಹಗುರಾಗುತ್ತೇನೆ. ಆಗಲೇ ಘನೀಭವಿಸಿದ್ದ ಭಾವವೊಂದನ್ನು ಪುಟ್ಟದಾಗಿ ಮೊಬೈಲಿನಲ್ಲಿ ಇಳಿಸುತ್ತೇನೆ. ನಂತರ ಎಲ್ಲರಿಗೂ ಎಸ್ಸೆಮ್ಮೆಸ್ಸಿನ ಮೂಲಕ ಕಳಿಸುವಾಗ ಆಗುತ್ತಿರುವ ಸದ್ದಿಗೆ ತಣ್ಣಗಾಗಿದ್ದ ಕಾಫಿಯನು ಮತ್ತೆ ಬಿಸಿಮಾಡುತ್ತಾಳೆ ಅಮ್ಮ. ಮುಖತೊಳೆದು ಬರುತ್ತಲೇ  ಕಾಫಿಯೊಂದಿಗೆ ಬಿಸಿಬಿಸಿ ಹರಟೆ ಶುರು. ಬೆಕ್ಕು ಈಗ ನನ್ನ ಕಾಲು ಸುತ್ತುವರಿಯುತ್ತದೆ. ಗೊತ್ತಿದೆ ಅದಕ್ಕೆ, ತನಗೆ ಎರಡನೇ ಸುತ್ತಿನ ಊಟ ಸಿಗಲಿದೆ ಎಂಬುದು.
“ಅಲ್ಲಿ ಊಟ ಹ್ಯಾಗೆ? ತರಕಾರಿ ಸಿಗ್ತದಾ? ಏನೂ ಸಿಗದಿದ್ರೆ ಅವಲಕ್ಕಿ-ಮೊಸರು ಸೇರಿಸ್ಕೊಂಡು ತಿನ್ಬಾರ್ದಾ? ” ಹೀಗೆ ಪ್ರಾರಂಭ ಅಮ್ಮನ ಪ್ರಶ್ನಾವಳಿ; ಮುದ್ದು ಸುಪ್ರಭಾತ!  ಅಲ್ಲಿನೆಲ್ಲಾ ವಿವರಗಳನ್ನು ಪದರು ಪದರಾಗಿ ವಿವರಿಸುತ್ತಿರುವಾಗ ಸೂರ್ಯ ಹೊಟ್ಟೆಕಿಚ್ಚಿನಿಂದಲೋ, ತನ್ನ ಕಾರ್ಯವೇ ಅದೇ ಎಂಬಂತೆ ಉರಿಯುತ್ತಾ ಮೆತ್ತಗೆ ಮೂಡಿಬರುತ್ತಿರುತ್ತಾನೆ.
ಒಂದು ಸುಂದರ ಸಸಿಯಂತ ದಿನದ, ಹೂವಿನಂತ ಬೆಳಿಗ್ಗೆ ಹೀಗೆ ಮೊಗ್ಗೊಡೆಯುತ್ತದೆ; ನನ್ನೊಳಗೂ ಕೂಡ!

ತನ್ನ ಮಡಿಲಿನಲಿ ಒಂದು ಜಗತ್ತನ್ನೇ ಮಲಗಿಸಿಕೊಂಡಿರುವ ರಾತ್ರಿಯೊಂದು, ಅದನ್ನು ಹಗಲಿನ ಹೆಗಲಿಗೆ, ಸೂರ್ಯನ ಸುಪರ್ದಿಗೆ ಒಪ್ಪಿಸಲು ತಯಾರಾಗುವ ಸಮಯ.

ಚಂದ್ರ ಹೊರಗೆ ತನ್ನ ಪಾಳಿ ಯಾವಾಗ ಮುಗಿಯುತ್ತದೋ ಎಂದು ಆಕಳಿಸುತ್ತಿದ್ದಾನೆ. ದಿನವೂ ಅಮ್ಮ ಅದ್ಯಾವಾಗಲೋ ಎದ್ದು ಮನೆಮುಂದೆ ರಂಗವಲ್ಲಿ ಇಡುವಾಗ ಕಣ್ಣೆತ್ತಿ ನೋಡಿದರೆ ತನ್ನ ಮೇಲೂ ರಂಗೋಲಿ ಬರೆದುಬಿಟ್ಟಾಳು ಎಂದು ಹೆದರಿ ಪಿಳಿಪಿಳಿ ನೋಡುವ ಆಗಸದ ಚುಕ್ಕಿಗಳು. ಜಯಂತರು ತಮ್ಮ ಒಂದು ಕವಿತೆಯಲ್ಲಿ ಅಂದಂತೆ ಹಿತ್ತಲಿನ ತೋಟದಲಿ “ರೆಕ್ಕೆಗಳ ಫಡಫಡಿಸಿ ಮರವೊಂದು ಕತ್ತಲ ಕೊಡವಿಕೊಳ್ಳುತ್ತಿದೆ”. ಪಾರಿಜಾತ ಗಿಡದ ಮೇಲಿನ ಇಬ್ಬನಿ ಇನ್ನೂ ಜಾರದೇ ಜಂಭ ಬೀರುತ್ತಿದೆ. ಇಬ್ಬನಿ ಜಾರದೇ ತನ್ನ ಹೂವಿನ ಮೊಗ್ಗೊಡೆಸುವುದಿಲ್ಲ ಎಂಬ ಗಿಡದ ಹಠ ಇನ್ನೂ ಜಾರಿಯಲ್ಲಿದೆ. ತೋಟದ ಕರವೀರ, ತುಳಸಿಯಂತೆ ತನಗೂ ಕಟ್ಟೆ ಕಟ್ಟಿಲ್ಲ ಅಂತೆಲ್ಲಾ ಸಿಟ್ಟಿನಿಂದ ಎಂದೂ ಹೂವ ಬಿಡದೇ ಇದ್ದುದಿಲ್ಲ. ಗಿಡದ ಗೂಡಿನಲಿ ಆಗಲೇ ಬೆಳಗಾಗಿದೆ. ಮರಿ ಎದ್ದುದ್ದಕ್ಕೆ ಹಕ್ಕಿ ಬೇಗ ಬೇಗ ಗೂಡಿನಿಂದ ಹೊರಟಿದೆ; ಮರಿಯ ಕೂಗು ತಾರಕಕ್ಕೇರುವ ಮುನ್ನ ಕಾಳೊಂದನು ಅದರ ಗಂಟಲಲ್ಲಿ ಇಳಿಸಬೇಕಿದೆ. ಸ್ವಲ್ಪವೇ ದೂರದಲ್ಲಿ ಎನ್ನೆಚ್ ೧೭ ರ ವಾಹನಗಳು ಚಲಿಸುವ ಸದ್ದು ಕತ್ತಲೆಯ ಮೌನಕ್ಕೆ ಹಿನ್ನೆಲೆ ಸಂಗೀತ ಒದಗಿಸುತ್ತದೆ. ಒಮ್ಮೊಮ್ಮೆ ಹಾಗೆ ಕೇಳದೇ ಹೋದರೆ ಮನಸ್ಸಿಗೆ ಬೆಳಗ್ಗೆಂದು ಒಪ್ಪಿಕೊಳ್ಳುವುದೇ ಕಷ್ಟ.

ಒಲೆಗೆ ಇದ್ದ ಕಟ್ಟಿಗೆಗಳನ್ನು ಕೊಂಚ ಕೊಂಚವೇ ಹಾಕಿ ಈಗ ಅಮ್ಮ ಬಿಸಿನೀರು ಕಾಯಿಸುತ್ತಿದ್ದಾಳೆ. ಅವಳ ಅರ್ಧ ತೆರೆದ  ಕಣ್ಣು ಒಲೆಯ ಬೆಂಕಿ ಬೆಳಕಲ್ಲಿ ಮತ್ತಷ್ಟು ಹೊಳೆಯುತ್ತಿದೆ. ಹಿಂದಿನ ದಿನದ ಒಲೆಯ ಬಿಸಿಗೆ ಬೆಚ್ಚಗೆ ಮಲಗಿದ್ದ ಬೆಕ್ಕು, ಅಮ್ಮ ಏಳಿಸಿದ್ದಕ್ಕೆ ಮತ್ತು ತನ್ನ ನಿದಿರೆ ಭಂಗವಾಗಿದ್ದಕ್ಕೆ ಸಿಟ್ಟಿನಿಂದ ನೋಡುತ್ತಿದೆ. ಅಮ್ಮ ಮಧ್ಯೆ ಮಧ್ಯೆ ಅಡುಗೆ ಮನೆಗೆ ಬಂದು ಅಲ್ಲಿನ ತಯಾರಿಯನ್ನೂ ನೋಡಿಕೊಳ್ಳುತ್ತಿದ್ದಾಳೆ. ಅಡುಗೆ ಮನೆಗೆ ಹೋಗುವ ದಾರಿಯಲೇ ಒಂದು ಹಾಲ್. ಅಲ್ಲಿ ಒಬ್ಬರ ಪಕ್ಕ ಇನ್ನೊಬ್ಬರಂತೆ ನಾನು, ನನ್ನಣ್ಣ ಬಿದ್ದುಕೊಂಡಿದ್ದೇವೆ. ಫ್ಯಾನಿನ ಸದ್ದಿಗೂ, ಗೊರಕೆಗೂ ಸ್ಪರ್ಧೆ ನಡೆಯುತ್ತಿರುತ್ತದೆ. ದೊಡ್ಡ ಗೊರಕೆ ಸದ್ದು ಕೇಳಿ ಅಮ್ಮನಿಗೆ ಅಪ್ಪನ ನೆನಪಾಗಿ ಪುಟ್ಟ ಕಣ್ಣು ಮಂಜಾಗುತ್ತದೆ. ಅಣ್ಣನಿಗಿನ್ನೂ ಮಧ್ಯರಾತ್ರಿ. ಆತನದು ಸೂರ್ಯವಂಶ. ಸೂರ್ಯ ಹುಟ್ಟಿ ಬಹಳ ಹೊತ್ತಿನ ನಂತರವಷ್ಟೇ ಅವನ ಬೆಳಗು. ದಿನವೂ ಮಲಗುವಾಗಲೇ ಅಪರಾತ್ರಿ.  ಎಚ್ಚರಿರುವ ಅಮ್ಮ ದಿನವೂ ಹನ್ನೆರೆಡು-ಒಂದಾಗುತ್ತಲೇ ಒತ್ತಾಯ ಮಾಡಿ ಅವನ ಅಕೌಂಟ್ಸ್ ಬರವಣಿಗೆಯನು ನಿಲ್ಲಿಸುತ್ತಾಳೆ. ಗಾಢವಾದ ನಿದ್ರೆಯಲ್ಲಿರುವ ಅವನ ಬಿಳೀ ಬನೀನಿನಲಿ ಪುಟ್ಟ ತೂತೊಂದು ನಕ್ಷತ್ರದಂತೆ ಕಾಣುತ್ತಿದೆ, ಅದ ನೋಡಿದ ಅಮ್ಮ ತನ್ನಷ್ಟಕ್ಕೆ ತಾನೇ ಮುಗುಳ್ನಗುತ್ತಾಳೆ. ಆ ನಗು ಅರಳುವಾಗ ಮುಂಚೆ ಮೂಡಿದ್ದ ಬಿಂದು, ಕಣ್ಣಿನ ಹಿತ್ತಲುಬಾಗಿಲಿಂದ ಓಡಿಹೋಗುತ್ತದೆ.

funlok_com_01

ನಾನು ಕೆಲವೊಮ್ಮೆ ಐದಕ್ಕೆಲ್ಲಾ ಎದ್ದಿದ್ದರೂ ಸುಮ್ಮನೆ ಏನೋ ಆಲೋಚಿಸುತ್ತಾ, ಮೌನವಾಗಿ ಮಲಗಿಕೊಂಡೇ ಇರುವುದನ್ನು ಅಮ್ಮ ಗಮನಿಸಿದ್ದಾಳೆ. ಅದಕ್ಕೇ ಅಡುಗೆಮನೆಗೆ ಹೋಗುವಾಗಲೆಲ್ಲ ಒಮ್ಮೆ ನನ್ನ ಕಣ್ಣಬಳಿ ಬಂದು ಎಚ್ಚರಿದ್ದಾನೇನೋ ಅಂತ ಇಣುಕುತ್ತಾಳೆ. ನಾನು ನಾಟಕವಾಡುತ್ತಿದ್ದೆನೇನೊ ಅನ್ನಿಸಿ ಕೈಯ್ಯಲ್ಲಿನ ಹನಿಯನ್ನು ಚಿಮುಕಿ ಪರೀಕ್ಷಿಸುತ್ತಾಳೆ. ಮೆದುವಾಗಿ ಕೆನ್ನೆಬಡಿದು ನೋಡುತ್ತಾಳೆ. ಆಕೆಯ ಮಮತೆಯ, ಬೆಚ್ಚಗಿನ ಕೈಯ್ಯ ಸ್ಪರ್ಶ, ಒಂದು ಜೀವಂತಿಕೆಯ ಅಲೆಯೊಂದನು ದೇಹವಿಡೀ ಪಸರಿಸುತ್ತದೆ. ಅಡುಗೆಮನೆಯಲಿ ಹಬೆಯಾಡುವ ಒಂದು ಲೋಟ ಕಾಫಿ ರೆಡಿಯಾಗಿರುತ್ತದೆ ಆಗಲೇ. ನಾನೆದ್ದ ಕೂಡಲೇ ಕಾಫಿ ಕುಡಿಯುತ್ತಾ ಸ್ವಲ್ಪ ಹರಟೆ ಹೊಡೆಯಬೇಕೆಂಬುದವಳಾಸೆ.

ಮನೆಬೆಕ್ಕು ತನ್ನ ಮೊದಲ ಸುತ್ತಿನ ಊಟಕ್ಕಾಗಿ ಅಮ್ಮನನ್ನು ಪೀಡಿಸುತ್ತಿದೆ. ತುರಿದ ಕಾಯಿ, ಹಾಲು ಬಿಸ್ಕಿಟ್ಟು ಹಾಕುವವರೆಗೂ ಹಾಗೆಲ್ಲ ಸುಮ್ಮನೇ ಇರುವುದಿಲ್ಲವದು. ಅಮ್ಮ ಕಾಯಿ ತುರಿಯುವಾಗ ಮಾತ್ರ ಧ್ಯಾನಸ್ಥ ಮುನಿಯಂತೆ ಎದುರೇ ಕುಳಿತಿರುತ್ತದೆ. ಅದಕ್ಕೆ ಹಾಕದೇ ಇದ್ದರೆ ನಮ್ಮ ಹೊಟ್ಟೆಕೆಟ್ಟೀತು ಎಂಬ ಭಾವ ಉಕ್ಕಿಸುವಂತೆ ಅದು ತಿಂಡಿಯೆಡೆಗೆ ನೋಡುವ ರೀತಿ ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತದೆ. ನಮ್ಮ ಸೈಕಾಲಜಿಯೆಲ್ಲಾ ಅರಗಿಸಿಕೊಂಡುಬಿಟ್ಟಿತೇ ಈ ಪುಟ್ಟ ಮುದ್ದು ಪ್ರಾಣಿ !?

ಎದ್ದಿದ್ದರೂ ನನ್ನ ಮೌನ ತಪಸ್ಸಿಗೆ ಭಂಗ ಬರಬಾರದೆಂಬಾಸೆಯಿಂದ ಮಲಗಿದ್ದಂತೆ ನಾಟಕವಾಡುತ್ತೇನೆ. ಹನಿ ಚಿಮುಕಿಸುವಿಕೆಗೆಲ್ಲಾ ಅಲುಗದಂತೆ ನಿದ್ರಿಸುವ ನಾಟಕ ಅಭ್ಯಾಸವಾಗಿದೆ. ಅತ್ತ ಅಡುಗೆ ಮನೆಯ ಕಿಟಕಿಯಿಂದ ಸೂರ್ಯ ಕಾಣತೊಡಗುತ್ತಲೇ, ಮೌನವೂ ಕೊಂಚ ಭಾರವೆನ್ನಿಸಿ ಎದ್ದು ಹಗುರಾಗುತ್ತೇನೆ. ಆಗಲೇ ಘನೀಭವಿಸಿದ್ದ ಭಾವವೊಂದನ್ನು ಪುಟ್ಟದಾಗಿ ಮೊಬೈಲಿನಲ್ಲಿ ಇಳಿಸುತ್ತೇನೆ. ನಂತರ ಎಲ್ಲರಿಗೂ ಎಸ್ಸೆಮ್ಮೆಸ್ಸಿನ ಮೂಲಕ ಕಳಿಸುವಾಗ ಆಗುತ್ತಿರುವ ಸದ್ದಿಗೆ ತಣ್ಣಗಾಗಿದ್ದ ಕಾಫಿಯನು ಮತ್ತೆ ಬಿಸಿಮಾಡುತ್ತಾಳೆ ಅಮ್ಮ. ಮುಖತೊಳೆದು ಬರುತ್ತಲೇ  ಕಾಫಿಯೊಂದಿಗೆ ಬಿಸಿಬಿಸಿ ಹರಟೆ ಶುರು. ಬೆಕ್ಕು ಈಗ ನನ್ನ ಕಾಲು ಸುತ್ತುವರಿಯುತ್ತದೆ. ಗೊತ್ತಿದೆ ಅದಕ್ಕೆ, ತನಗೆ ಎರಡನೇ ಸುತ್ತಿನ ಊಟ ಸಿಗಲಿದೆ ಎಂಬುದು.

“ಅಲ್ಲಿ ಊಟ ಹ್ಯಾಗೆ? ತರಕಾರಿ ಸಿಗ್ತದಾ? ಏನೂ ಸಿಗದಿದ್ರೆ ಅವಲಕ್ಕಿ-ಮೊಸರು ಸೇರಿಸ್ಕೊಂಡು ತಿನ್ಬಾರ್ದಾ? ” ಹೀಗೆ ಪ್ರಾರಂಭ ಅಮ್ಮನ ಪ್ರಶ್ನಾವಳಿ; ಮುದ್ದು ಸುಪ್ರಭಾತ!  ಅಲ್ಲಿನೆಲ್ಲಾ ವಿವರಗಳನ್ನು ಪದರು ಪದರಾಗಿ ವಿವರಿಸುತ್ತಿರುವಾಗ ಸೂರ್ಯ ಹೊಟ್ಟೆಕಿಚ್ಚಿನಿಂದಲೋ, ತನ್ನ ಕಾರ್ಯವೇ ಅದೇ ಎಂಬಂತೆ ಉರಿಯುತ್ತಾ ಮೆತ್ತಗೆ ಮೂಡಿಬರುತ್ತಿರುತ್ತಾನೆ.

ಒಂದು ಸುಂದರ ಸಸಿಯಂತ ದಿನದ, ಹೂವಿನಂತ ಬೆಳಿಗ್ಗೆ ಹೀಗೆ ಮೊಗ್ಗೊಡೆಯುತ್ತದೆ; ನನ್ನೊಳಗೂ ಕೂಡ!

Categories: ಲೇಖನ

ಬುದ್ಧಿವಂತಿಕೆ ಅಂದರೆ..!

August 15, 2009 ರಂಜಿತ್ 6 comments
ಬುದ್ಧಿವಂತಿಕೆ ಅಂದರೆ..!
ಬೀದಿಯಲ್ಲಿ ಹುಡುಗರೆಲ್ಲಾ ಸೇರಿ ಕ್ರಿಕೆಟ್ ಆಡುತ್ತ ಇದ್ದರು. ತೆಂಡುಲ್ಕರನ್ನು ಆವಾಹಿಸಿಕೊಂಡಿದ್ದ ಪುಟ್ಟ, ಬ್ಯಾಟನ್ನು ಶಕ್ತಿಯೆಲ್ಲಾ ಹಾಕಿ ಬೀಸಿ ಹೊಡೆದ. ಚೆಂಡು ತೇಲುತ್ತ ಎರಡನೆಯ ಫ್ಲೋರ್ ನಲ್ಲಿದ್ದ ಪುಟ್ಟನ ಮನೆಯ ಕಿಟಕಿಯೊಳಗೆ ನುಸುಳಿ ಟೀಪಾಯಿ ಮೇಲಿದ್ದ ಫ್ಲವರ್ ವಾಜ್ ಗೆ ಮುತ್ತಿಟ್ಟಿತು. ಅದರ ಗುಂಗಿಗೇನೊ ಎಂಬಂತೆ ವಾಜ್ ಒಂದು ಸುತ್ತು ಹೊಡೆದು ನೆಲಕೆ ಬಿದ್ದು ಒಡೆದು ಹೋಯಿತು.
ಪುಟ್ಟನಿಗೆ ಚಿಂತೆಗಿಟ್ಟುಕೊಂಡಿತು. ಗೊತ್ತಾದರೆ ಅಮ್ಮ ಬೆನ್ನಿಗೆ ಬರೆ ಬರಿಸಿಯಾಳು. ಆಟವನ್ನು ಅಲ್ಲಿಗೇ ರದ್ದುಗೊಳಿಸಿ ಅಡುಗೆ ಮನೆಯಲ್ಲಿದ್ದ ಅಮ್ಮನ ಬಳಿಗೆ ಬಂದ.
ಕೊನೆ : ೧
“ಅಮ್ಮ…ಅಮ್ಮ.. ಅದೂ..ಅದು…”
“ಏನೋ ಅದು? ಏನ್ಮಾಡಿದ್ದೀಯಾ?”
“ಅದೂ..ಅದೂ.. ಕ್ರಿಕೆಟ್ ಆಡ್ತಿದ್ನಾ…ಬಾಲ್ ತಾಗಿ… ನಮ್ಮನೆ ಫ್ಲವರ್ ವಾಜ್ ಒಡೆದುಹೋಯ್ತು..!”
“ಅಯ್ಯೋ… ಎಂಥ ಕೆಲ್ಸ ಮಾಡ್ಬಿಟ್ಯೋ..ಅದೆಷ್ಟ್ ದುಬಾರಿ ಗೊತ್ತಾ?… ಇರು ನಿಂಗೆ ಮಾಡಿಸ್ತೀನಿ..” ಎನ್ನುತ್ತಾ ಕೋಲು ತೆಗೆದುಕೊಳ್ಳಲು ಹೋದಳು..
ಕೊನೆ : ೨
“ಅಮ್ಮ… ಅದೂ.. ಅದೂ..”
“ಏನೋ ಅದು? ಏನ್ಮಾಡಿದ್ದೀಯಾ?”
“ಅದೂ… ಇವತ್ತು ಕ್ರಿಕೆಟ್ ಆಡ್ತಿದ್ನಾ…ಬಾಲ್ ತಾಗಿ.. ನಮ್ಮನೆ ಗ್ಲಾಸಿನ ಟೀಪಾಯಿ ಇದೆಯಲ್ಲಾ…”
” ಅಯ್ಯೋ ಪಾಪಿ!… ಆ ಟೀಪಾಯಿ ಒಡೆದು ಹಾಕಿದ್ಯೇನೋ?!”
“ಇಲ್ಲಮ್ಮಾ.. ಅದರ್ ಮೇಲಿತ್ತಲ್ಲಾ.. ಫ್ಲವರ್ ವಾಜ್ ಅದು ಒಡೆದುಹೋಯ್ತು!”
“ಅಬ್ಬ…ಬದುಕಿದೆ.. ನಾನೆಲ್ಲೋ ಟೀಪಾಯಿ ಮುರಿದ್ಯೆನೋ ಅಂತ ಹೆದರಿದೆ!” ಅನ್ನುತ್ತಾ ಅಡುಗೆ ಮಾಡತೊಡಗಿದಳು.ಬುದ್ಧಿವಂತಿಕೆ ಅಂದರೆ..!
ಬೀದಿಯಲ್ಲಿ ಹುಡುಗರೆಲ್ಲಾ ಸೇರಿ ಕ್ರಿಕೆಟ್ ಆಡುತ್ತ ಇದ್ದರು. ತೆಂಡುಲ್ಕರನ್ನು ಆವಾಹಿಸಿಕೊಂಡಿದ್ದ ಪುಟ್ಟ, ಬ್ಯಾಟನ್ನು ಶಕ್ತಿಯೆಲ್ಲಾ ಹಾಕಿ ಬೀಸಿ ಹೊಡೆದ. ಚೆಂಡು ತೇಲುತ್ತ ಎರಡನೆಯ ಫ್ಲೋರ್ ನಲ್ಲಿದ್ದ ಪುಟ್ಟನ ಮನೆಯ ಕಿಟಕಿಯೊಳಗೆ ನುಸುಳಿ ಟೀಪಾಯಿ ಮೇಲಿದ್ದ ಫ್ಲವರ್ ವಾಜ್ ಗೆ ಮುತ್ತಿಟ್ಟಿತು. ಅದರ ಗುಂಗಿಗೇನೊ ಎಂಬಂತೆ ವಾಜ್ ಒಂದು ಸುತ್ತು ಹೊಡೆದು ನೆಲಕೆ ಬಿದ್ದು ಒಡೆದು ಹೋಯಿತು.
ಪುಟ್ಟನಿಗೆ ಚಿಂತೆಗಿಟ್ಟುಕೊಂಡಿತು. ಗೊತ್ತಾದರೆ ಅಮ್ಮ ಬೆನ್ನಿಗೆ ಬರೆ ಬರಿಸಿಯಾಳು. ಆಟವನ್ನು ಅಲ್ಲಿಗೇ ರದ್ದುಗೊಳಿಸಿ ಅಡುಗೆ ಮನೆಯಲ್ಲಿದ್ದ ಅಮ್ಮನ ಬಳಿಗೆ ಬಂದ.
ಕೊನೆ : ೧
“ಅಮ್ಮ…ಅಮ್ಮ.. ಅದೂ..ಅದು…”
“ಏನೋ ಅದು? ಏನ್ಮಾಡಿದ್ದೀಯಾ?”
“ಅದೂ..ಅದೂ.. ಕ್ರಿಕೆಟ್ ಆಡ್ತಿದ್ನಾ…ಬಾಲ್ ತಾಗಿ… ನಮ್ಮನೆ ಫ್ಲವರ್ ವಾಜ್ ಒಡೆದುಹೋಯ್ತು..!”
“ಅಯ್ಯೋ… ಎಂಥ ಕೆಲ್ಸ ಮಾಡ್ಬಿಟ್ಯೋ..ಅದೆಷ್ಟ್ ದುಬಾರಿ ಗೊತ್ತಾ?… ಇರು ನಿಂಗೆ ಮಾಡಿಸ್ತೀನಿ..” ಎನ್ನುತ್ತಾ ಕೋಲು ತೆಗೆದುಕೊಳ್ಳಲು ಹೋದಳು..
ಕೊನೆ : ೨
“ಅಮ್ಮ… ಅದೂ.. ಅದೂ..”
“ಏನೋ ಅದು? ಏನ್ಮಾಡಿದ್ದೀಯಾ?”
“ಅದೂ… ಇವತ್ತು ಕ್ರಿಕೆಟ್ ಆಡ್ತಿದ್ನಾ…ಬಾಲ್ ತಾಗಿ.. ನಮ್ಮನೆ ಗ್ಲಾಸಿನ ಟೀಪಾಯಿ ಇದೆಯಲ್ಲಾ…”
” ಅಯ್ಯೋ ಪಾಪಿ!… ಆ ಟೀಪಾಯಿ ಒಡೆದು ಹಾಕಿದ್ಯೇನೋ?!”
“ಇಲ್ಲಮ್ಮಾ.. ಅದರ್ ಮೇಲಿತ್ತಲ್ಲಾ.. ಫ್ಲವರ್ ವಾಜ್ ಅದು ಒಡೆದುಹೋಯ್ತು!”
“ಅಬ್ಬ…ಬದುಕಿದೆ.. ನಾನೆಲ್ಲೋ ಟೀಪಾಯಿ ಮುರಿದ್ಯೆನೋ ಅಂತ ಹೆದರಿದೆ!” ಅನ್ನುತ್ತಾ ಅಡುಗೆ ಮಾಡತೊಡಗಿದಳು.
ಬೀದಿಯಲ್ಲಿ ಹುಡುಗರೆಲ್ಲಾ ಸೇರಿ ಕ್ರಿಕೆಟ್ ಆಡುತ್ತ ಇದ್ದರು. ತೆಂಡುಲ್ಕರನ್ನು ಆವಾಹಿಸಿಕೊಂಡಿದ್ದ ಪುಟ್ಟ, ಬ್ಯಾಟನ್ನು ಶಕ್ತಿಯೆಲ್ಲಾ ಹಾಕಿ ಬೀಸಿ ಹೊಡೆದ. ಚೆಂಡು ತೇಲುತ್ತ ಎರಡನೆಯ ಫ್ಲೋರ್ ನಲ್ಲಿದ್ದ ಪುಟ್ಟನ ಮನೆಯ ಕಿಟಕಿಯೊಳಗೆ ನುಸುಳಿ ಟೀಪಾಯಿ ಮೇಲಿದ್ದ ಫ್ಲವರ್ ವಾಜ್ ಗೆ ಮುತ್ತಿಟ್ಟಿತು. ಅದರ ಗುಂಗಿಗೇನೊ ಎಂಬಂತೆ ವಾಜ್ ಒಂದು ಸುತ್ತು ಹೊಡೆದು ನೆಲಕೆ ಬಿದ್ದು ಒಡೆದು ಹೋಯಿತು.
ಪುಟ್ಟನಿಗೆ ಚಿಂತೆಗಿಟ್ಟುಕೊಂಡಿತು. ಗೊತ್ತಾದರೆ ಅಮ್ಮ ಬೆನ್ನಿಗೆ ಬರೆ ಬರಿಸಿಯಾಳು. ಆಟವನ್ನು ಅಲ್ಲಿಗೇ ರದ್ದುಗೊಳಿಸಿ ಅಡುಗೆ ಮನೆಯಲ್ಲಿದ್ದ ಅಮ್ಮನ ಬಳಿಗೆ ಬಂದ.
ಕೊನೆ : ೧
“ಅಮ್ಮ…ಅಮ್ಮ.. ಅದೂ..ಅದು…”
“ಏನೋ ಅದು? ಏನ್ಮಾಡಿದ್ದೀಯಾ?”
“ಅದೂ..ಅದೂ.. ಕ್ರಿಕೆಟ್ ಆಡ್ತಿದ್ನಾ…ಬಾಲ್ ತಾಗಿ… ನಮ್ಮನೆ ಫ್ಲವರ್ ವಾಜ್ ಒಡೆದುಹೋಯ್ತು..!”
“ಅಯ್ಯೋ… ಎಂಥ ಕೆಲ್ಸ ಮಾಡ್ಬಿಟ್ಯೋ..ಅದೆಷ್ಟ್ ದುಬಾರಿ ಗೊತ್ತಾ?… ಇರು ನಿಂಗೆ ಮಾಡಿಸ್ತೀನಿ..” ಎನ್ನುತ್ತಾ ಕೋಲು ತೆಗೆದುಕೊಳ್ಳಲು ಹೋದಳು..
ಕೊನೆ : ೨
“ಅಮ್ಮ… ಅದೂ.. ಅದೂ..”
“ಏನೋ ಅದು? ಏನ್ಮಾಡಿದ್ದೀಯಾ?”
“ಅದೂ… ಇವತ್ತು ಕ್ರಿಕೆಟ್ ಆಡ್ತಿದ್ನಾ…ಬಾಲ್ ತಾಗಿ.. ನಮ್ಮನೆ ಗ್ಲಾಸಿನ ಟೀಪಾಯಿ ಇದೆಯಲ್ಲಾ…”
” ಅಯ್ಯೋ ಪಾಪಿ!… ಆ ಟೀಪಾಯಿ ಒಡೆದು ಹಾಕಿದ್ಯೇನೋ?!”
“ಇಲ್ಲಮ್ಮಾ.. ಅದರ್ ಮೇಲಿತ್ತಲ್ಲಾ.. ಫ್ಲವರ್ ವಾಜ್ ಅದು ಒಡೆದುಹೋಯ್ತು!”
“ಅಬ್ಬ…ಬದುಕಿದೆ.. ನಾನೆಲ್ಲೋ ಟೀಪಾಯಿ ಮುರಿದ್ಯೆನೋ ಅಂತ ಹೆದರಿದೆ!” ಅನ್ನುತ್ತಾ ಅಡುಗೆ ಮಾಡತೊಡಗಿದಳು.
(ಸಂಗ್ರಹಿತ ಬರಹ)
Categories: ಹಾಸ್ಯ

ನಾನು ನಾನಾಗದೇ..!

Id_ego_superego

ನಾನು ನಾನಾಗದೇ

ಇದ್ದಾಗಲೇ ಚೆನ್ನಿತ್ತು ಎಲ್ಲ.

ನನ್ನಿಂದ ಮೂಡಿದ್ದಕ್ಕೆಲ್ಲ ಸ್ವತಂತ್ರ ರೆಕ್ಕೆಗಳಿದ್ದವು

ನನ್ನ ಹಂಗಿರಲಿಲ್ಲ.

ಅದೇಕೋ ನೀವೆಲ್ಲಾ ಒತ್ತಾಯ ಮಾಡಿ

ನೀನ್ಯಾರು ನೀನ್ಯಾರೆಂದು ಕೇಳಿದಿರಿ.

ಹಾಗೆ ನಾನು ನಾನಾಗಬೇಕಾಯ್ತು

Id_Ego_Super_ego_by_spiritofdarkness

ಈಗ ನಾನೇನು ಮಾಡಿದರೂ

ಅದಕ್ಕೆ ನನ್ನದೇ ವಾಸನೆ ಅಂಟಿಸುವಿರಿ

ನನ್ನ ಛಾಪಿಲ್ಲವೆಂದು ಅವನ್ನು ಹಂಗಿಸುವಿರಿ

ಸಮಾಜ ನನಗಿತ್ತ ರೋಗಗಳನ್ನು

ಪಾಪ ಅವೂ ಹೊತ್ತು ತಿರುಗುತವೆ

ಈಗಲಾದರೂ

ನಾನು ನಾನಾಗದೇ ಹುಟ್ಟಬೇಕಿದೆ

ಮತ್ತೆ ಅದೆಲ್ಲೋ..

ಕೊನೆಯಾಸೆ!

ಸರಳುಗಳಾಚೆ
ಮಗನಿಗಾಗಿ ಒಯ್ಯುತಿರುವ
ಬುತ್ತಿಯ ಬಿಸಿ ಕರಗೀತೆಂದು ಸೆರಗಲ್ಲಿ ಮುಚ್ಚಿ
ಬೇಗ ಬೇಗ ಹೆಜ್ಜೆ ಹಾಕುತಿರುವ ಅವ್ವನನ್ನು
ಅವರು ನೋಡದಿರಲಿ.
ಮಿಂಚಿನಂತೆ ಸಾಗುವ ವಾಹನಗಳಿಂದ
ಕಲಸಿಹೋಗಿರುವ ರಸ್ತೆಯ ಒಂದು ಬದಿಯಲ್ಲಿ
ದಾಟಲಾಗದ ಅಸಾಹಯಕತೆಯಿಂದ ನಿಂತ ವೃದ್ಧನ
ಕೈಯ್ಯ ನೀಲಿನರ ಹಿಡಿದು ರಸ್ತೆ ದಾಟಿಸಿದ ಯುವಕನ ಕಣ್ಣ ಹಿಗ್ಗಿಗೆ
ನಾಚಿದ ಆಗಸದ ನೀಲಿ ಕಿಟಕಿಯೊಳಗೆ ಇಳಿಯದಿರಲಿ
ಕ್ರೂರ ಮೃಗಗಳಲೂ ಉಕ್ಕುವ ತನ್ನ ಕುಡಿಯೆಡೆಗಿನ ಅಕ್ಕರೆಯನ್ನು
ಪಶ್ಚಾತ್ತಾಪದ ಉತ್ತಮ ಪರಿಣಾಮದ ಪ್ರವಚನಗಳನ್ನು
ಹಾಗೆಲ್ಲ ಅಪ್ಪಿತಪ್ಪಿಯೂ ಅವರೆದುರು ಉಸುರದಿರಿ
ಬದುಕುವುದೇ ಕೊನೆಯಾಸೆ ಎಂಬುದನ್ನು
ಎದೆಯಲ್ಲಿಟ್ಟುಕೊಂಡೇ ಗಲ್ಲಿಗೇರಲು ಬರುವವರ
ಕಣ್ಣಲ್ಲಿ ಕಣ್ಣಿಟ್ಟು ಯಾವ ಜೈಲರನೂ ನೋಡಲಾರ.ಸರಳುಗಳಾಚೆ
ಮಗನಿಗಾಗಿ ಒಯ್ಯುತಿರುವ
ಬುತ್ತಿಯ ಬಿಸಿ ಕರಗೀತೆಂದು ಸೆರಗಲ್ಲಿ ಮುಚ್ಚಿ
ಬೇಗ ಬೇಗ ಹೆಜ್ಜೆ ಹಾಕುತಿರುವ ಅವ್ವನನ್ನು
ಅವರು ನೋಡದಿರಲಿ.
ಮಿಂಚಿನಂತೆ ಸಾಗುವ ವಾಹನಗಳಿಂದ
ಕಲಸಿಹೋಗಿರುವ ರಸ್ತೆಯ ಒಂದು ಬದಿಯಲ್ಲಿ
ದಾಟಲಾಗದ ಅಸಾಹಯಕತೆಯಿಂದ ನಿಂತ ವೃದ್ಧನ
ಕೈಯ್ಯ ನೀಲಿನರ ಹಿಡಿದು ರಸ್ತೆ ದಾಟಿಸಿದ ಯುವಕನ ಕಣ್ಣ ಹಿಗ್ಗಿಗೆ
ನಾಚಿದ ಆಗಸದ ನೀಲಿ ಕಿಟಕಿಯೊಳಗೆ ಇಳಿಯದಿರಲಿ
ಕ್ರೂರ ಮೃಗಗಳಲೂ ಉಕ್ಕುವ ತನ್ನ ಕುಡಿಯೆಡೆಗಿನ ಅಕ್ಕರೆಯನ್ನು
ಪಶ್ಚಾತ್ತಾಪದ ಉತ್ತಮ ಪರಿಣಾಮದ ಪ್ರವಚನಗಳನ್ನು
ಹಾಗೆಲ್ಲ ಅಪ್ಪಿತಪ್ಪಿಯೂ ಅವರೆದುರು ಉಸುರದಿರಿ
ಬದುಕುವುದೇ ಕೊನೆಯಾಸೆ ಎಂಬುದನ್ನು
ಎದೆಯಲ್ಲಿಟ್ಟುಕೊಂಡೇ ಗಲ್ಲಿಗೇರಲು ಬರುವವರ
ಕಣ್ಣಲ್ಲಿ ಕಣ್ಣಿಟ್ಟು ಯಾವ ಜೈಲರನೂ ನೋಡಲಾರ.
ಸರಳುಗಳಾಚೆ
ಮಗನಿಗಾಗಿ ಒಯ್ಯುತಿರುವ
ಬುತ್ತಿಯ ಬಿಸಿ ಕರಗೀತೆಂದು ಸೆರಗಲ್ಲಿ ಮುಚ್ಚಿ
ಬೇಗ ಬೇಗ ಹೆಜ್ಜೆ ಹಾಕುತಿರುವ ಅವ್ವನನ್ನು
ಅವರು ನೋಡದಿರಲಿ.
ಮಿಂಚಿನಂತೆ ಸಾಗುವ ವಾಹನಗಳಿಂದ
ಕಲಸಿಹೋಗಿರುವ ರಸ್ತೆಯ ಒಂದು ಬದಿಯಲ್ಲಿ
ದಾಟಲಾಗದ ಅಸಾಹಯಕತೆಯಿಂದ ನಿಂತ ವೃದ್ಧನ
ಕೈಯ್ಯ ನೀಲಿನರ ಹಿಡಿದು ರಸ್ತೆ ದಾಟಿಸಿದ ಯುವಕನ ಕಣ್ಣ ಹಿಗ್ಗಿಗೆ
ನಾಚಿದ ಆಗಸದ ನೀಲಿ ಕಿಟಕಿಯೊಳಗೆ ಇಳಿಯದಿರಲಿ
ಕ್ರೂರ ಮೃಗಗಳಲೂ ಉಕ್ಕುವ ತನ್ನ ಕುಡಿಯೆಡೆಗಿನ ಅಕ್ಕರೆಯನ್ನು
ಪಶ್ಚಾತ್ತಾಪದ ಉತ್ತಮ ಪರಿಣಾಮದ ಪ್ರವಚನಗಳನ್ನು
ಹಾಗೆಲ್ಲ ಅಪ್ಪಿತಪ್ಪಿಯೂ ಅವರೆದುರು ಉಸುರದಿರಿ
Hang till death
ಏಕೆಂದರೆ ಬದುಕುವುದೇ ಕೊನೆಯಾಸೆ ಎಂಬುದನ್ನು
ಎದೆಯಲ್ಲಿಟ್ಟುಕೊಂಡೇ ಗಲ್ಲಿಗೇರಲು ಬರುವವರ
ಕಣ್ಣಲ್ಲಿ ಕಣ್ಣಿಟ್ಟು ಯಾವ ಜೈಲರನೂ ನೋಡಲಾರ.

ಒಂದಿಷ್ಟು ಹನಿಗಳು!

೧. ಚಂದಿರ
ಆಕಾಶದಲ್ಲಿ ಅರಳಿದ
ರಾತ್ರಿರಾಣಿ,
ಮಲ್ಲಿಗೆಗಳ ಕಾಯುವ
ತೋಟದ ಮಾಲಿ.
********
೨. ಉಕ್ಕುವ ಕಡಲು
ತುಂಬು ಬೆಳ್ದಿಂಗಳ ದಿನ
ಚಂದಿರನು ತನ್ನ ಕಲೆಗಳಿರುವ
ಮೊಗವನ್ನು ಕಡಲ ಕನ್ನಡಿಯಲ್ಲಿ
ನೋಡಿಕೊಂಡು
ಕೀಳರಿಮೆಗೊಳ್ಳಬಾರದೆಂಬ
ಕಾರಣದಿಂದಲೇ
ಅಲೆಗಳೇಳುತ್ತಿವೆ,
*******
೩. ಕಾರ್ಮೋಡ
ಅವಳು ತೊರೆದು
ಹೋಗುವಾಗ
ಸುಟ್ಟ ಹೃದಯವೊಂದು
ಆವಿಯಾಗಿ ಕಣ್ಣತುಂಬ
ಮೂಡಿದ್ದು.
*******
೪. ಮಳೆ
ಅವಳ ಜತೆ ಆಗಸದಲ್ಲಿ
ತೇಲುವ ಮೋಡಗಳ ಮೇಲೆ
ವಿಹಾರಿಸಿದ ಕನಸು ಕಂಡಿದ್ದ
ಅವನ ಪಾಲಿಗೆ
ಮಳೆಯೆಂದರೆ ಕೇವಲ
ಅವಳ ಹೆಜ್ಜೆಯ ತಂಪು!
*******
೫. ಭಗ್ನಪ್ರೇಮಿ
ಮರಣದಂಡನೆ ವಿಧಿಸಿರುವ
ಖೈದಿಗೆ ಇನ್ನೂ ತನ್ನ ತಪ್ಪನ್ನು,
ಶಿಕ್ಷೆಗೆ ಕಾರಣವನ್ನು
ತಿಳಿಸಲಾಗಿಲ್ಲ.
*******೧. ಚಂದಿರ
ಆಕಾಶದಲ್ಲಿ ಅರಳಿದ
ರಾತ್ರಿರಾಣಿ,
ಮಲ್ಲಿಗೆಗಳ ಕಾಯುವ
ತೋಟದ ಮಾಲಿ.
********
೨. ಉಕ್ಕುವ ಕಡಲು
ತುಂಬು ಬೆಳ್ದಿಂಗಳ ದಿನ
ಚಂದಿರನು ತನ್ನ ಕಲೆಗಳಿರುವ
ಮೊಗವನ್ನು ಕಡಲ ಕನ್ನಡಿಯಲ್ಲಿ
ನೋಡಿಕೊಂಡು
ಕೀಳರಿಮೆಗೊಳ್ಳಬಾರದೆಂಬ
ಕಾರಣದಿಂದಲೇ
ಅಲೆಗಳೇಳುತ್ತಿವೆ,
*******
೩. ಕಾರ್ಮೋಡ
ಅವಳು ತೊರೆದು
ಹೋಗುವಾಗ
ಸುಟ್ಟ ಹೃದಯವೊಂದು
ಆವಿಯಾಗಿ ಕಣ್ಣತುಂಬ
ಮೂಡಿದ್ದು.
*******
೪. ಮಳೆ
ಅವಳ ಜತೆ ಆಗಸದಲ್ಲಿ
ತೇಲುವ ಮೋಡಗಳ ಮೇಲೆ
ವಿಹಾರಿಸಿದ ಕನಸು ಕಂಡಿದ್ದ
ಅವನ ಪಾಲಿಗೆ
ಮಳೆಯೆಂದರೆ ಕೇವಲ
ಅವಳ ಹೆಜ್ಜೆಯ ತಂಪು!
*******
೫. ಭಗ್ನಪ್ರೇಮಿ
ಮರಣದಂಡನೆ ವಿಧಿಸಿರುವ
ಖೈದಿಗೆ ಇನ್ನೂ ತನ್ನ ತಪ್ಪನ್ನು,
ಶಿಕ್ಷೆಗೆ ಕಾರಣವನ್ನು
ತಿಳಿಸಲಾಗಿಲ್ಲ.
*******
೧. ಚಂದಿರ
ಆಕಾಶದಲ್ಲಿ ಅರಳಿದ
ರಾತ್ರಿರಾಣಿ,
ಮಲ್ಲಿಗೆಗಳ ಕಾಯುವ
ತೋಟದ ಮಾಲಿ.
********
೨. ಉಕ್ಕುವ ಕಡಲು
ತುಂಬು ಬೆಳ್ದಿಂಗಳ ದಿನ
ಚಂದಿರನು ತನ್ನ ಕಲೆಗಳಿರುವ
ಮೊಗವನ್ನು ಕಡಲ ಕನ್ನಡಿಯಲ್ಲಿ
ನೋಡಿಕೊಂಡು
ಕೀಳರಿಮೆಗೊಳ್ಳಬಾರದೆಂಬ
ಕಾರಣದಿಂದಲೇ
ಅಲೆಗಳೇಳುತ್ತಿವೆ,
*******
೩. ಕಾರ್ಮೋಡ
ಅವಳು ತೊರೆದು
ಹೋಗುವಾಗ
ಸುಟ್ಟ ಹೃದಯವೊಂದು
ಆವಿಯಾಗಿ ಕಣ್ಣತುಂಬ
ಮೂಡಿದ್ದು.
*******
೪. ಮಳೆ
ಅವಳ ಜತೆ ಆಗಸದಲ್ಲಿ
ತೇಲುವ ಮೋಡಗಳ ಮೇಲೆ
ವಿಹಾರಿಸಿದ ಕನಸು ಕಂಡಿದ್ದ
ಅವನ ಪಾಲಿಗೆ
ಮಳೆಯೆಂದರೆ ಕೇವಲ
ಅವಳ ಹೆಜ್ಜೆಯ ತಂಪು!
*******
೫. ಭಗ್ನಪ್ರೇಮಿ
ಮರಣದಂಡನೆ ವಿಧಿಸಿರುವ
ಖೈದಿಗೆ ಇನ್ನೂ ತನ್ನ ತಪ್ಪನ್ನು,
ಶಿಕ್ಷೆಗೆ ಕಾರಣವನ್ನು
ತಿಳಿಸಲಾಗಿಲ್ಲ.
*******
೬. ಚಳಿ
ಸದಾ ಆಫೀಸು ಆಫೀಸು ಅನ್ನುತ್ತಾ
ಕೆಲಸಕಾರ್ಯದಲ್ಲೇ ಕಾಲಕಳೆಯುವ
ಅವನಿಗೆ ಅವಳ ಮಹತ್ತ್ವ ತಿಳಿಸಲು
ಮತ್ತು ಆಕೆಯ ನೆನಪಾಗಿಸಲು
ದೇವರು ಹೂಡಿದ ತಂತ್ರ.
Categories: ಹನಿಗಳು...

ಸಕ್-ಹತ್ತು ಸಾಲುಗಳು!-೨

ಒಂದು ಸಾಲಿನ ಕಥೆಗಳು!
೧. ರಾಜನ ವೇಷಧಾರಿಗೆ ಇಂದು ಮೇಕಪ್ ಕಳಚಲು ಭಯವಾಗಿರುತಿರುವುದಕ್ಕೆ ಕಾರಣ, ಮೇಕಪ್ ಕಳಚಿದ ಬಳಿಕ ಸೇವಕ ಪಾತ್ರಧಾರಿಗೆ ಸಾವಿರ ರೂಪಾಯಿ ಸಾಲ ವಾಪಸ್ಸು ಮಾಡದಿದ್ದರೆ ಮನೆವರೆಗೂ ಬರುತ್ತೇನೆಂದು ಹೆದರಿಸಿದ್ದಾನೆ.
೨. ಗಂಟೆಕಾಲ ಅತ್ತು ಚಾಕಲೇಟು ಕೊಳ್ಳಲಿಕ್ಕಾಗಿ ತಂದೆಯನು ಪೀಡಿಸಿ ಈಸಿಕೊಂಡ ರೂಪಾಯಿಯೊಂದು ಚಿಣ್ಣನ ಮೆದು ಕೈಯ ನಯ ಬೆರಳುಗಳಿಂದ ತೂರಿ ಜಾರಿ ಅದೋ, ರಸ್ತೆಯಂಚಿನ ಮೋರಿಯ ಚಿಕ್ಕ ತೂತೊಳಗೆ ಹೋಗಿ ಬಿದ್ದಿದೆ.
೩. ಕದ್ದ ಮಾಲನ್ನೆಲ್ಲಾ ಒಟ್ಟಾಗಿರಿಸಿ ಮಡಿಯುಟ್ಟುಕೊಂಡ ಕಳ್ಳರು ಕೋಳಿಗೆ ಸೌಟಿನ ತೀರ್ಥದಲ್ಲಿ ತುಳಸಿ ಜೊತೆಗೆ ಅದರ ಮೇಲೆ ಬಿಟ್ಟು ’ಕೃಷ್ಣಾರ್ಪಣಮಸ್ತು’ ಅಂದರು!
೪. ಅಂದಿನ ಪ್ರವಚನದಲ್ಲಿ ಗುರುಗಳು ’ತಮ್ಮ ತಂದೆ-ತಾಯಿಯನ್ನು ಅವರ ಮುಪ್ಪಿನ ಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳದ, ಕಷ್ಟ ಕೊಡುವ ಮಕ್ಕಳು ನೂರು ವರ್ಷ ಬಾಳಲಿ’ ಎಂದಾಗ ಆಶ್ಚರ್ಯಚಕಿತರಾದ ಭಕ್ತಾದಿಗಳು, ನಂತರ ’ ಮುಪ್ಪಿನ ಸಮಯದ ಸಮಸ್ಯೆಗಳು ಅವರಿಗೇ ಹೆಚ್ಚು ಕಾಲ ಕಾಡಲಿ!’ ಎಂದಾಗ ಚಪ್ಪಾಳೆ ತಟ್ಟಿದರು!
೫. ತನಗಾಗಿ ಲಕ್ಷಾಂತರ ರೂಪಾಯಿಯ ರಿಂಗ್ ಗಳನ್ನು ಗಿಫ್ಟ್ ಮಾಡಿದ್ದ, ತನ್ನನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸ್ತೀನಿ ಅನ್ನುವ ಶ್ರೀಮಂತರ ಮನೆ ಹುಡುಗ ಇವತ್ತಿನ ತನ್ನ ಬರ್ತ್ ಡೇ ಗೆ ಗಿಫ್ಟ್ ಆಗಿ ಕೇವಲ ಐನೂರು ರೂಪಾಯಿಯ ವಾಚ್ ತಂದಿದ್ದಕ್ಕೆ ಬೇಸರಿಸಿಕೊಂಡಿದ್ದ ಹುಡುಗಿಗೆ, ಅವನು ಆದ್ರನಾಗಿ ’ನಾನು ಮೊದಲ ಬಾರಿ ಸ್ವಂತ ದುಡಿದು ಗಳಿಸಿದ ಹಣದಿಂದ ತಂದಿದ್ದು’ ಎಂದಾಗ ಅವಳು ತುಂಬಿದ ಕಂಗಳಿಂದ ಅವನಿಗೆ ಮುತ್ತಿಟ್ಟಳು!
೬. ನಡುದಾರಿಯಲ್ಲಿ ಬಿದ್ದಿದ್ದ ಗುರುತು ಪರಿಚಯವಿಲ್ಲದ ವೃದ್ಧರೊಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದ ಯುವಕನನ್ನು ’ಆಪರೇಷನ್ ಆಗಬೇಕಿದೆ; ಈ ಪೇಷೆಂಟ್ ನಿಮಗೇನಾಗಬೇಕು’ ಎಂದು ನರ್ಸ್ ಕೇಳಿದಾಗ ತಡವರಿಸಿ..’ತಂದೆ’ ಎಂದ ಕ್ಷಣ ಮಾನವೀಯತೆಯನ್ನು ಹೊತ್ತ ತಂಗಾಳಿ ಅಲ್ಲಿನ ಸಮಸ್ತ ಹೃದಯಗಳಿಗೂ ಪಸರಿಸುತ್ತಿತ್ತು.
೭. ’ಯಾವುದೇ ಜೀವಿಯನ್ನು ಕೊಲ್ಲುವುದು ಮಹಾಪಾಪ; ಪ್ರತಿಯೊಂದು ಆತ್ಮದಲ್ಲೂ ದೇವರು ನೆಲೆಸಿದ್ದಾನೆ’ ಎಂದು ಸ್ವಲ್ಪ ಹೊತ್ತಿನ ಬಳಿಕ ’ಈಗ ಎಲ್ಲರೂ ಕಣ್ಮುಚ್ಚಿ ಒಂದು ನಿಮಿಷ ಭಗವಂತನನ್ನು ನೆನೆಯಿರಿ’ ಎಂದ ಸ್ವಾಮೀಜಿಗಳು ಎಲ್ಲರೂ ಕಣ್ಮುಚ್ಚಿದಾಗ ಆಗಿನಿಂದಲೂ ತಮಗೆ ತೊಂದರೆ ಕೊಡುತ್ತಿದ್ದ ಸೊಳ್ಳೆಯನ್ನು ಕೊಂದದ್ದನ್ನು ಕಣ್ಮುಚ್ಚಿದ ನಾಟಕ ಆಡುತಿದ್ದ ಪುಟ್ಟ ತನ್ನ ಅರೆಕಂಗಳಿಂದ ನೋಡುತ್ತಿದ್ದ..!
೮. ಹೆಣ್ಣಿನ ಮನಸ್ಸನ್ನು ಅತೀ ಚಿಕ್ಕದಾಗಿ ವರ್ಣಿಸಬೇಕಾದ ಸ್ಪರ್ಧೆಯಲ್ಲಿ ಸರ್ವಾನುಮತದಿಂದ ಜಂಟಿಯಾಗಿ ಗೆದ್ದ ಎರಡು ಸ್ಪರ್ಧಿ ಬರೆದಿದ್ದು ಅನುಕ್ರಮವಾಗಿ  ”!” ಮತ್ತು “?” ಎಂದು!
೯. ಆದರ್ಶ ದಂಪತಿಗಳು ಸ್ಪರ್ಧೆಯಲ್ಲಿ ಗೆದ್ದ ಹಣದಲ್ಲಿ ಬಂಗಾರ ಮಾಡಿಸೋಣವೆಂದು ಅವಳೂ, ಪಲ್ಸಾರ್ ಬೈಕ್ ಖರೀದಿಸೋಣವೆಂದು ಅವನೂ ಜಗಳಾಡಿಕೊಂಡರು.
೧೦. ಭಟ್ಟರ ಮಗು ಆರೋಗ್ಯವಂತವಾಗಲು ಮೀನಿನೆಣ್ಣೆಯಿಂದ ಮಾಡಿದ ಮಾತ್ರೆಯನ್ನು ನುಂಗಲೇಬೇಕೆಂದು ಡಾಕ್ಟರು ಹೇಳಿದ್ದರು.ಒಂದು ಸಾಲಿನ ಕಥೆಗಳು!
೧. ರಾಜನ ವೇಷಧಾರಿಗೆ ಇಂದು ಮೇಕಪ್ ಕಳಚಲು ಭಯವಾಗಿರುತಿರುವುದಕ್ಕೆ ಕಾರಣ, ಮೇಕಪ್ ಕಳಚಿದ ಬಳಿಕ ಸೇವಕ ಪಾತ್ರಧಾರಿಗೆ ಸಾವಿರ ರೂಪಾಯಿ ಸಾಲ ವಾಪಸ್ಸು ಮಾಡದಿದ್ದರೆ ಮನೆವರೆಗೂ ಬರುತ್ತೇನೆಂದು ಹೆದರಿಸಿದ್ದಾನೆ.
೨. ಗಂಟೆಕಾಲ ಅತ್ತು ಚಾಕಲೇಟು ಕೊಳ್ಳಲಿಕ್ಕಾಗಿ ತಂದೆಯನು ಪೀಡಿಸಿ ಈಸಿಕೊಂಡ ರೂಪಾಯಿಯೊಂದು ಚಿಣ್ಣನ ಮೆದು ಕೈಯ ನಯ ಬೆರಳುಗಳಿಂದ ತೂರಿ ಜಾರಿ ಅದೋ, ರಸ್ತೆಯಂಚಿನ ಮೋರಿಯ ಚಿಕ್ಕ ತೂತೊಳಗೆ ಹೋಗಿ ಬಿದ್ದಿದೆ.
೩. ಕದ್ದ ಮಾಲನ್ನೆಲ್ಲಾ ಒಟ್ಟಾಗಿರಿಸಿ ಮಡಿಯುಟ್ಟುಕೊಂಡ ಕಳ್ಳರು ಕೋಳಿಗೆ ಸೌಟಿನ ತೀರ್ಥದಲ್ಲಿ ತುಳಸಿ ಜೊತೆಗೆ ಅದರ ಮೇಲೆ ಬಿಟ್ಟು ’ಕೃಷ್ಣಾರ್ಪಣಮಸ್ತು’ ಅಂದರು!
೪. ಅಂದಿನ ಪ್ರವಚನದಲ್ಲಿ ಗುರುಗಳು ’ತಮ್ಮ ತಂದೆ-ತಾಯಿಯನ್ನು ಅವರ ಮುಪ್ಪಿನ ಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳದ, ಕಷ್ಟ ಕೊಡುವ ಮಕ್ಕಳು ನೂರು ವರ್ಷ ಬಾಳಲಿ’ ಎಂದಾಗ ಆಶ್ಚರ್ಯಚಕಿತರಾದ ಭಕ್ತಾದಿಗಳು, ನಂತರ ’ ಮುಪ್ಪಿನ ಸಮಯದ ಸಮಸ್ಯೆಗಳು ಅವರಿಗೇ ಹೆಚ್ಚು ಕಾಲ ಕಾಡಲಿ!’ ಎಂದಾಗ ಚಪ್ಪಾಳೆ ತಟ್ಟಿದರು!
೫. ತನಗಾಗಿ ಲಕ್ಷಾಂತರ ರೂಪಾಯಿಯ ರಿಂಗ್ ಗಳನ್ನು ಗಿಫ್ಟ್ ಮಾಡಿದ್ದ, ತನ್ನನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸ್ತೀನಿ ಅನ್ನುವ ಶ್ರೀಮಂತರ ಮನೆ ಹುಡುಗ ಇವತ್ತಿನ ತನ್ನ ಬರ್ತ್ ಡೇ ಗೆ ಗಿಫ್ಟ್ ಆಗಿ ಕೇವಲ ಐನೂರು ರೂಪಾಯಿಯ ವಾಚ್ ತಂದಿದ್ದಕ್ಕೆ ಬೇಸರಿಸಿಕೊಂಡಿದ್ದ ಹುಡುಗಿಗೆ, ಅವನು ಆದ್ರನಾಗಿ ’ನಾನು ಮೊದಲ ಬಾರಿ ಸ್ವಂತ ದುಡಿದು ಗಳಿಸಿದ ಹಣದಿಂದ ತಂದಿದ್ದು’ ಎಂದಾಗ ಅವಳು ತುಂಬಿದ ಕಂಗಳಿಂದ ಅವನಿಗೆ ಮುತ್ತಿಟ್ಟಳು!
೬. ನಡುದಾರಿಯಲ್ಲಿ ಬಿದ್ದಿದ್ದ ಗುರುತು ಪರಿಚಯವಿಲ್ಲದ ವೃದ್ಧರೊಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದ ಯುವಕನನ್ನು ’ಆಪರೇಷನ್ ಆಗಬೇಕಿದೆ; ಈ ಪೇಷೆಂಟ್ ನಿಮಗೇನಾಗಬೇಕು’ ಎಂದು ನರ್ಸ್ ಕೇಳಿದಾಗ ತಡವರಿಸಿ..’ತಂದೆ’ ಎಂದ ಕ್ಷಣ ಮಾನವೀಯತೆಯನ್ನು ಹೊತ್ತ ತಂಗಾಳಿ ಅಲ್ಲಿನ ಸಮಸ್ತ ಹೃದಯಗಳಿಗೂ ಪಸರಿಸುತ್ತಿತ್ತು.
೭. ’ಯಾವುದೇ ಜೀವಿಯನ್ನು ಕೊಲ್ಲುವುದು ಮಹಾಪಾಪ; ಪ್ರತಿಯೊಂದು ಆತ್ಮದಲ್ಲೂ ದೇವರು ನೆಲೆಸಿದ್ದಾನೆ’ ಎಂದು ಸ್ವಲ್ಪ ಹೊತ್ತಿನ ಬಳಿಕ ’ಈಗ ಎಲ್ಲರೂ ಕಣ್ಮುಚ್ಚಿ ಒಂದು ನಿಮಿಷ ಭಗವಂತನನ್ನು ನೆನೆಯಿರಿ’ ಎಂದ ಸ್ವಾಮೀಜಿಗಳು ಎಲ್ಲರೂ ಕಣ್ಮುಚ್ಚಿದಾಗ ಆಗಿನಿಂದಲೂ ತಮಗೆ ತೊಂದರೆ ಕೊಡುತ್ತಿದ್ದ ಸೊಳ್ಳೆಯನ್ನು ಕೊಂದದ್ದನ್ನು ಕಣ್ಮುಚ್ಚಿದ ನಾಟಕ ಆಡುತಿದ್ದ ಪುಟ್ಟ ತನ್ನ ಅರೆಕಂಗಳಿಂದ ನೋಡುತ್ತಿದ್ದ..!
೮. ಹೆಣ್ಣಿನ ಮನಸ್ಸನ್ನು ಅತೀ ಚಿಕ್ಕದಾಗಿ ವರ್ಣಿಸಬೇಕಾದ ಸ್ಪರ್ಧೆಯಲ್ಲಿ ಸರ್ವಾನುಮತದಿಂದ ಜಂಟಿಯಾಗಿ ಗೆದ್ದ ಎರಡು ಸ್ಪರ್ಧಿ ಬರೆದಿದ್ದು ಅನುಕ್ರಮವಾಗಿ  ”!” ಮತ್ತು “?” ಎಂದು!
೯. ಆದರ್ಶ ದಂಪತಿಗಳು ಸ್ಪರ್ಧೆಯಲ್ಲಿ ಗೆದ್ದ ಹಣದಲ್ಲಿ ಬಂಗಾರ ಮಾಡಿಸೋಣವೆಂದು ಅವಳೂ, ಪಲ್ಸಾರ್ ಬೈಕ್ ಖರೀದಿಸೋಣವೆಂದು ಅವನೂ ಜಗಳಾಡಿಕೊಂಡರು.
೧೦. ಭಟ್ಟರ ಮಗು ಆರೋಗ್ಯವಂತವಾಗಲು ಮೀನಿನೆಣ್ಣೆಯಿಂದ ಮಾಡಿದ ಮಾತ್ರೆಯನ್ನು ನುಂಗಲೇಬೇಕೆಂದು ಡಾಕ್ಟರು ಹೇಳಿದ್ದರು.
೧. ರಾಜನ ವೇಷಧಾರಿಗೆ ಇಂದು ಮೇಕಪ್ ಕಳಚಲು ಭಯವಾಗಿರುತಿರುವುದಕ್ಕೆ ಕಾರಣ, ಮೇಕಪ್ ಕಳಚಿದ ಬಳಿಕ ಸೇವಕ ಪಾತ್ರಧಾರಿಗೆ ಸಾವಿರ ರೂಪಾಯಿ ಸಾಲ ವಾಪಸ್ಸು ಮಾಡದಿದ್ದರೆ ಮನೆವರೆಗೂ ಬರುತ್ತೇನೆಂದು ಹೆದರಿಸಿದ್ದಾನೆ.
೨. ಗಂಟೆಕಾಲ ಅತ್ತು ಚಾಕಲೇಟು ಕೊಳ್ಳಲಿಕ್ಕಾಗಿ ತಂದೆಯನು ಪೀಡಿಸಿ ಈಸಿಕೊಂಡ ರೂಪಾಯಿಯೊಂದು ಚಿಣ್ಣನ ಮೆದು ಕೈಯ ನಯ ಬೆರಳುಗಳಿಂದ ತೂರಿ ಜಾರಿ ಅದೋ, ರಸ್ತೆಯಂಚಿನ ಮೋರಿಯ ಚಿಕ್ಕ ತೂತೊಳಗೆ ಹೋಗಿ ಬಿದ್ದಿದೆ.
೩. ಕದ್ದ ಮಾಲನ್ನೆಲ್ಲಾ ಒಟ್ಟಾಗಿರಿಸಿ ಮಡಿಯುಟ್ಟುಕೊಂಡ ಕಳ್ಳರು, ಕೋಳಿಗೆ ಸೌಟಿನ ತೀರ್ಥದಲ್ಲಿ ತುಳಸಿ ಜೊತೆಗೆ ಅದರ ಮೇಲೆ ಬಿಟ್ಟು ’ಕೃಷ್ಣಾರ್ಪಣಮಸ್ತು’ ಅಂದರು!
೪. ಅಂದಿನ ಪ್ರವಚನದಲ್ಲಿ ಗುರುಗಳು ’ತಮ್ಮ ತಂದೆ-ತಾಯಿಯನ್ನು ಅವರ ಮುಪ್ಪಿನ ಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳದ, ಕಷ್ಟ ಕೊಡುವ ಮಕ್ಕಳು ನೂರು ವರ್ಷ ಬಾಳಲಿ’ ಎಂದಾಗ ಆಶ್ಚರ್ಯಚಕಿತರಾದ ಭಕ್ತಾದಿಗಳು, ನಂತರ ’ ಮುಪ್ಪಿನ ಸಮಯದ ಸಮಸ್ಯೆಗಳು ಅವರಿಗೇ ಹೆಚ್ಚು ಕಾಲ ಕಾಡಲಿ!’ ಎಂದಾಗ ಚಪ್ಪಾಳೆ ತಟ್ಟಿದರು!
೫. ತನಗಾಗಿ ಲಕ್ಷಾಂತರ ರೂಪಾಯಿಯ ರಿಂಗ್ ಗಳನ್ನು ಗಿಫ್ಟ್ ಮಾಡಿದ್ದ, ತನ್ನನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸ್ತೀನಿ ಅನ್ನುವ ಶ್ರೀಮಂತರ ಮನೆ ಹುಡುಗ ಇವತ್ತಿನ ತನ್ನ ಬರ್ತ್ ಡೇ ಗೆ ಗಿಫ್ಟ್ ಆಗಿ ಕೇವಲ ಐನೂರು ರೂಪಾಯಿಯ ವಾಚ್ ತಂದಿದ್ದಕ್ಕೆ ಬೇಸರಿಸಿಕೊಂಡಿದ್ದ ಹುಡುಗಿಗೆ, ಅವನು ಆದ್ರನಾಗಿ ’ನಾನು ಮೊದಲ ಬಾರಿ ಸ್ವಂತ ದುಡಿದು ಗಳಿಸಿದ ಹಣದಿಂದ ತಂದಿದ್ದು’ ಎಂದಾಗ ಅವಳು ತುಂಬಿದ ಕಂಗಳಿಂದ ಅವನಿಗೆ ಮುತ್ತಿಟ್ಟಳು!
೬. ನಡುದಾರಿಯಲ್ಲಿ ಬಿದ್ದಿದ್ದ ಗುರುತು ಪರಿಚಯವಿಲ್ಲದ ವೃದ್ಧರೊಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದ ಯುವಕನನ್ನು ’ಆಪರೇಷನ್ ಆಗಬೇಕಿದೆ; ಈ ಪೇಷೆಂಟ್ ನಿಮಗೇನಾಗಬೇಕು’ ಎಂದು ನರ್ಸ್ ಕೇಳಿದಾಗ ತಡವರಿಸಿ..’ತಂದೆ’ ಎಂದ ಕ್ಷಣ ಮಾನವೀಯತೆಯನ್ನು ಹೊತ್ತ ತಂಗಾಳಿ ಅಲ್ಲಿನ ಸಮಸ್ತ ಹೃದಯಗಳಿಗೂ ಪಸರಿಸುತ್ತಿತ್ತು.
grabbing_arm
೭. ’ಯಾವುದೇ ಜೀವಿಯನ್ನು ಕೊಲ್ಲುವುದು ಮಹಾಪಾಪ; ಪ್ರತಿಯೊಂದು ಆತ್ಮದಲ್ಲೂ ದೇವರು ನೆಲೆಸಿದ್ದಾನೆ’ ಎಂದು ಸ್ವಲ್ಪ ಹೊತ್ತಿನ ಬಳಿಕ ’ಈಗ ಎಲ್ಲರೂ ಕಣ್ಮುಚ್ಚಿ ಒಂದು ನಿಮಿಷ ಭಗವಂತನನ್ನು ನೆನೆಯಿರಿ’ ಎಂದ ಸ್ವಾಮೀಜಿಗಳು ಎಲ್ಲರೂ ಕಣ್ಮುಚ್ಚಿದಾಗ ಆಗಿನಿಂದಲೂ ತಮಗೆ ತೊಂದರೆ ಕೊಡುತ್ತಿದ್ದ ಸೊಳ್ಳೆಯನ್ನು ಕೊಂದದ್ದನ್ನು ಕಣ್ಮುಚ್ಚಿದ ನಾಟಕ ಆಡುತಿದ್ದ ಪುಟ್ಟ ತನ್ನ ಅರೆಕಂಗಳಿಂದ ನೋಡುತ್ತಿದ್ದ..!
೮. ಹೆಣ್ಣಿನ ಮನಸ್ಸನ್ನು ಅತೀ ಚಿಕ್ಕದಾಗಿ ವರ್ಣಿಸಬೇಕಾದ ಸ್ಪರ್ಧೆಯಲ್ಲಿ ಸರ್ವಾನುಮತದಿಂದ ಜಂಟಿಯಾಗಿ ಗೆದ್ದ ಎರಡು ಸ್ಪರ್ಧಿ ಬರೆದಿದ್ದು ಅನುಕ್ರಮವಾಗಿ  ”!” ಮತ್ತು “?” ಎಂದು!
೯. ಆದರ್ಶ ದಂಪತಿಗಳು ಸ್ಪರ್ಧೆಯಲ್ಲಿ ಗೆದ್ದ ಹಣದಲ್ಲಿ ಬಂಗಾರ ಮಾಡಿಸೋಣವೆಂದು ಅವಳೂ, ಪಲ್ಸಾರ್ ಬೈಕ್ ಖರೀದಿಸೋಣವೆಂದು ಅವನೂ ಜಗಳಾಡಿಕೊಂಡರು.
೧೦. ಭಟ್ಟರ ಮಗು ಆರೋಗ್ಯವಂತವಾಗಲು ಮೀನಿನೆಣ್ಣೆಯಿಂದ ಮಾಡಿದ ಮಾತ್ರೆಯನ್ನು ನುಂಗಲೇಬೇಕೆಂದು ಡಾಕ್ಟರು ಹೇಳಿದ್ದರು.

ಕವಿರಾಜರ ಸಾಹಿತ್ಯದಿಂದಾಗಿ ಕಪಾಳಮೋಕ್ಷ!

ಅವನಿಗೆ ಸಾರಿ ಸಾರಿ ಹೇಳಿದ್ದೆ. ಪ್ರೇಯಸಿ ಪಕ್ಕದಲ್ಲಿದ್ದಾಗ ಅಥವ ಆಕೆಗಾಗಿ ಹಾಡುವಾಗ ಯಾವುದಾದರೂ ರೋಮ್ಯಾಂಟಿಕ್ ಹಿಂದಿ ಸಾಂಗನ್ನು ಹಾಡು; ಇಲ್ಲವೇ ಚಂದದ ಭಾವಗೀತೆ ಯನ್ನು ಬಳಸು. ಭಾವಗೀತೆ ಒಗ್ಗದಿದ್ದರೆ ರಾಜ್ ಕುಮಾರ್ ಅದ್ಭುತವಾಗಿ ಹಾಡಿರುವ ನೂರಾರು ಗಾನಗಳಿವೆ. ಆದರೆ ಯಾವುದೇ ಕಾರಣಕ್ಕೂ, ಅಪ್ಪಿ-ತಪ್ಪಿ ಕೂಡ ಹೊಸ ಕನ್ನಡ ಚಿತ್ರಗೀತೆ ಮಾತ್ರ ಬೇಡ.

ಕೇಳಲಿಲ್ಲ. ಎಪ್ಫೆಮ್ ಪ್ರಭಾವವೋ, ಯೂಟು ಮಹಿಮೆಯೋ ಅಥವಾ ಪ್ರೇಯಸಿಯ ಮೊಗದಿಂದಾಗಿಯೋ ಅವನಿಗೆ ನೆನಪಾದದ್ದು, ಆ ಸಮಯದಲ್ಲಿ ಗುನುಗಿದ್ದು ಅಚ್ಚಕನ್ನಡದ ಹೊಸ ಚಿತ್ರವೊಂದರ ಗೀತೆ. ಅದೂ ಪ್ರತಿಭಾನ್ವಿತ ಯುವ ಗೀತರಚನಕಾರ ಕವಿರಾಜರ ಹಾಡು. “ಪರಿಚಯ” ಸಿನೆಮಾದ ಗೀತೆ.
ನಲ್ಲೆಯ ಮೊಗ ನೋಡಿದೊಡೆ ಅತ್ತ-ಇತ್ತ ನೋಡದೇ, ಸುತ್ತ-ಮುತ್ತಲಿನ ಪರಿವಿಲ್ಲದೇ, ಅರ್ಥ-ಗಿರ್ಥ ಕೂಡ ಅರಿವಿಲ್ಲದವನಂತೆ ಹಾಡತೊಡಗಿದ. ರೋಮ್ಯಾಂಟಿಕ್ ಹಾಡೆಂದರೆ ಗೆಳೆಯ ಸಾಕ್ಷಾತ್ ಉಪೇಂದ್ರ; ಹುಬ್ಬು ಮತ್ತು ಕೈ ಮೇಲೆ ಹೋಗೋದು ಬಿಟ್ಟರೆ ಬೇರೇನೂ ಎಕ್ಸ್ ಪ್ರೆಷನ್ಸ್ ಇಲ್ಲ!
ಮೊದಲ ಸಾಲು “ನಡೆದಾಡುವಾ ಕಾಮನಬಿಲ್ಲು…!”  ಅಂತ ಗೆಳೆಯ ಅಂದ ಕೂಡಲೇ ಪ್ರೇಯಸಿ ಮೈ ತುಂಬ ಉಬ್ಬಿ ಪೂರಿ.
“ಉಸಿರಾಡುವಾ ಗೊಂಬೆಯು ಇವಳು!” ಎಂದೊಡನೆ ಅದೇಕೋ ಆಕೆ ಉಸಿರಾಡುವುದು ಅವನಿಗೆ ಗೊತ್ತಾಗುವಂತೆ ಮಾಡಿ ತೋರಿಸಿದಳು.
“ಸಿಗಲಾರಳು ಹೋಲಿಕೆಗಿವಳೂ…!”
ಅರೆ! ಹಾಗಾದರೆ ಮೊದಲೆರಡು ಸಾಲು ಹೋಲಿಕೆಯಲ್ಲವೇ ಅಂತ ಅವನ ಕಾಲರ್ ಹಿಡಿದು ಕೇಳೋಕೆ ಅವಳೇನು ಕನ್ನಡ ಟೀಚರ್ರೇ? ಏನೊ ಇದೂ ಹೊಗಳಿಕೆ ಇರಬೇಕು ಅಂದುಕೊಂಡು ವೈಯಾರಿಸಿಕೊಂಡು ಮುಂದಿನ ಹೊಗಳಿಕೆಗೆ ಉಬ್ಬಲು ಅಣಿಯಾದಳು.
“…..ಏನೆಂದರೂ ಸುಂದರ ಸುಳ್ಳು!”
ಆಗ ಬಿತ್ತು ನೋಡಿ ಅವನಿಗೆ ಕೆನ್ನೆಗೆ! ಇದುವರೆಗೂ ಹೊಗಳಿದ್ದೆಲ್ಲಾ ಒಂದು ಸುಂದರ ಸುಳ್ಳು ಅಂತ ತನ್ನೆದುರೇ ಅಷ್ಟು ಧೈರ್ಯವಾಗಿ ಹೇಳುವುದಕ್ಕೆ ಅವನಿಗೆಷ್ಟು ಧಿಮಾಕು. ಅಷ್ಟು ಸಿಂಪಲ್ ವಿಷಯ ಅರ್ಥವಾಗುವುದಕ್ಕೆ ಅವಳೇನು ಕನ್ನಡ ಟೀಚರ್ರೇ ಆಗಿರಬೇಕೆ?
ನಿಜ (ಸುಂದರ ನಿಜವಲ್ಲ!) ಕಣ್ರೀ. ಕೆನ್ನೆ ಮೇಲೆ ಅವಳ ಕೈಯ ಐದೂ ಬೆಟ್ಟಿನಚ್ಚು. ಹೊಸ ಚಿತ್ರದ ಡ್ಯೂಯೆಟ್ ಹಾಡಲು ಹೊರಟಿದ್ದ ಗೆಳೆಯ ಆಗಿದ್ದ ಪೆಚ್ಚು!

Parichaya

ಅವನಿಗೆ ಸಾರಿ ಸಾರಿ ಹೇಳಿದ್ದೆ. ಪ್ರೇಯಸಿ ಪಕ್ಕದಲ್ಲಿದ್ದಾಗ ಅಥವ ಆಕೆಗಾಗಿ ಹಾಡುವಾಗ ಯಾವುದಾದರೂ ರೋಮ್ಯಾಂಟಿಕ್ ಹಿಂದಿ ಸಾಂಗನ್ನು ಹಾಡು; ಇಲ್ಲವೇ ಚಂದದ ಭಾವಗೀತೆ ಯನ್ನು ಬಳಸು. ಭಾವಗೀತೆ ಒಗ್ಗದಿದ್ದರೆ ರಾಜ್ ಕುಮಾರ್ ಅದ್ಭುತವಾಗಿ ಹಾಡಿರುವ ನೂರಾರು ಗಾನಗಳಿವೆ. ಆದರೆ ಯಾವುದೇ ಕಾರಣಕ್ಕೂ, ಅಪ್ಪಿ-ತಪ್ಪಿ ಕೂಡ ಹೊಸ ಕನ್ನಡ ಚಿತ್ರಗೀತೆ ಮಾತ್ರ ಬೇಡ.

ಕೇಳಲಿಲ್ಲ. ಎಪ್ಫೆಮ್ ಪ್ರಭಾವವೋ, ಯೂಟು ಮಹಿಮೆಯೋ ಅಥವಾ ಪ್ರೇಯಸಿಯ ಮೊಗದಿಂದಾಗಿಯೋ ಅವನಿಗೆ ನೆನಪಾದದ್ದು, ಆ ಸಮಯದಲ್ಲಿ ಗುನುಗಿದ್ದು ಅಚ್ಚಕನ್ನಡದ ಹೊಸ ಚಿತ್ರವೊಂದರ ಗೀತೆ. ಅದೂ ಪ್ರತಿಭಾನ್ವಿತ ಯುವ ಗೀತರಚನಕಾರ ಕವಿರಾಜರ ಹಾಡು. “ಪರಿಚಯ” ಸಿನೆಮಾದ ಗೀತೆ.

ನಲ್ಲೆಯ ಮೊಗ ನೋಡಿದೊಡೆ ಅತ್ತ-ಇತ್ತ ನೋಡದೇ, ಸುತ್ತ-ಮುತ್ತಲಿನ ಪರಿವಿಲ್ಲದೇ, ಅರ್ಥ-ಗಿರ್ಥ ಕೂಡ ಅರಿವಿಲ್ಲದವನಂತೆ ಹಾಡತೊಡಗಿದ. ರೋಮ್ಯಾಂಟಿಕ್ ಹಾಡೆಂದರೆ ಗೆಳೆಯ ಸಾಕ್ಷಾತ್ ಉಪೇಂದ್ರ; ಹುಬ್ಬು ಮತ್ತು ಕೈ ಮೇಲೆ ಹೋಗೋದು ಬಿಟ್ಟರೆ ಬೇರೇನೂ ಎಕ್ಸ್ ಪ್ರೆಷನ್ಸ್ ಇಲ್ಲ!

ಮೊದಲ ಸಾಲು “ನಡೆದಾಡುವಾ ಕಾಮನಬಿಲ್ಲು…!”  ಅಂತ ಗೆಳೆಯ ಅಂದ ಕೂಡಲೇ ಪ್ರೇಯಸಿ ಮೈ ತುಂಬ ಉಬ್ಬಿ ಪೂರಿ.

“ಉಸಿರಾಡುವಾ ಗೊಂಬೆಯು ಇವಳು!” ಎಂದೊಡನೆ ಅದೇಕೋ ಆಕೆ ಉಸಿರಾಡುವುದು ಅವನಿಗೆ ಗೊತ್ತಾಗುವಂತೆ ಮಾಡಿ ತೋರಿಸಿದಳು.

“ಸಿಗಲಾರಳು ಹೋಲಿಕೆಗಿವಳೂ…!”

ಅರೆ! ಹಾಗಾದರೆ ಮೊದಲೆರಡು ಸಾಲು ಹೋಲಿಕೆಯಲ್ಲವೇ ಅಂತ ಅವನ ಕಾಲರ್ ಹಿಡಿದು ಕೇಳೋಕೆ ಅವಳೇನು ಕನ್ನಡ ಟೀಚರ್ರೇ? ಏನೊ ಇದೂ ಹೊಗಳಿಕೆ ಇರಬೇಕು ಅಂದುಕೊಂಡು ವೈಯಾರಿಸಿಕೊಂಡು ಮುಂದಿನ ಹೊಗಳಿಕೆಗೆ ಉಬ್ಬಲು ಅಣಿಯಾದಳು.

“…..ಏನೆಂದರೂ ಸುಂದರ ಸುಳ್ಳು!”

ಆಗ ಬಿತ್ತು ನೋಡಿ ಅವನಿಗೆ ಕೆನ್ನೆಗೆ! ಇದುವರೆಗೂ ಹೊಗಳಿದ್ದೆಲ್ಲಾ ಒಂದು ಸುಂದರ ಸುಳ್ಳು ಅಂತ ತನ್ನೆದುರೇ ಅಷ್ಟು ಧೈರ್ಯವಾಗಿ ಹೇಳುವುದಕ್ಕೆ ಅವನಿಗೆಷ್ಟು ಧಿಮಾಕು. ಅಷ್ಟು ಸಿಂಪಲ್ ವಿಷಯ ಅರ್ಥವಾಗುವುದಕ್ಕೆ ಅವಳೇನು ಕನ್ನಡ ಟೀಚರ್ರೇ ಆಗಿರಬೇಕೆ?

ನಿಜ (ಸುಂದರ ನಿಜವಲ್ಲ!) ಕಣ್ರೀ. ಕೆನ್ನೆ ಮೇಲೆ ಅವಳ ಕೈಯ ಐದೂ ಬೆಟ್ಟಿನಚ್ಚು. ಹೊಸ ಚಿತ್ರದ ಡ್ಯೂಯೆಟ್ ಹಾಡಲು ಹೊರಟಿದ್ದ ಗೆಳೆಯ ಆಗಿದ್ದ ಪೆಚ್ಚು!

Categories: ಹಾಸ್ಯ

ಪತ್ರಿಕೆಗಳ ಸೌಜನ್ಯ ಮತ್ತು ಪ್ರಭೆ ಕಳೆದುಕೊಳ್ಳುತಿರುವ ಕನ್ನಡಪ್ರಭ!

“ನೀವು ಬರೆದ ಕಥೆ ನಮ್ಮ ಪತ್ರಿಕೆಯ ಪ್ರಕಟಣೆಗೆ ಅನರ್ಹವಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ.
ವಂದನೆಗಳೊಂದಿಗೆ,
ಸಂಪಾದಕ.”
ನೀವೊಂದು ಬರಹ ಕಳುಹಿಸಿದರೆ ಅದು ಪತ್ರಿಕೆಯಲ್ಲಿ ಅಚ್ಚಾಗುವ ಮಟ್ಟದಲ್ಲಿಲ್ಲದಿದ್ದರೆ ಪತ್ರಿಕೆಯಿಂದ ಈ ರೀತಿಯಾದ ಓಲೆ ಬರುವುದು ಸಾಮಾನ್ಯವಿತ್ತು. ಪ್ರಕಟಣೆಗೆ ಅರ್ಹವಾಗಿದ್ದರೂ ಕಾಲಕ್ರಮೇಣ ಪ್ರಕಟಿಸುತ್ತೇವೆ ಎಂದು ಮೊದಲೇ ತಿಳಿಸುತ್ತಿದ್ದಿದ್ದರು. ನನ್ನ ಚಿಕ್ಕ ವಯಸ್ಸಿನಲ್ಲಿ ಹೊಸದಿಗಂತ ದೈನಿಕಕ್ಕೆ ಕಳಿಸಿದ ಲೇಖನಗಳು ಅನರ್ಹವಾದಾಗ ಸಂಪಾದಕರು ಕಳುಹಿಸಿದ ಕಾರ್ಡ್ ಈಗಲೂ ನನ್ನ ಫೈಲಿನಲ್ಲಿ ಬೆಚ್ಚಗಿವೆ. ಮೊದಲ ಲೇಖನ ಪ್ರಕಟವಾಗಿ ಸಂಭಾವನೆಯಾಗಿ ಬಂದ ಎಪ್ಪತ್ತೈದು ರೂಪಾಯಿ ಸಂಭಾವನೆ ಅಪ್ಪನಿಗಿತ್ತ ಕ್ಷಣಗಳು ಮನದ ಮೂಲೆಯಲ್ಲಿ ಇನ್ನೂ ಹಸಿರಾಗಿವೆ.
ಕಾಲ ಬದಲಾದಾಗ (ಪೋಸ್ಟ್ ಕಾರ್ಡ್ ಬೆಲೆ ಹೆಚ್ಚಾದಾಗ?) ನಿಮ್ಮ ಬರಹದ ಸ್ವೀಕೃತಿ-ಅಸ್ವೀಕೃತಿ ಬಗ್ಗೆ ಮಾಹಿತಿ ಬೇಕಿದ್ದರೆ ಸ್ವವಿಳಾಸ ಬರೆದಿರುವ ಕಾರ್ಡ್ ನ್ನು ಇರಿಸತಕ್ಕದ್ದು ಎಂಬ ನಿಯಮ ಬರಹಗಳನ್ನು ಕೋರುವ ಕಾಲಮ್ ನಲ್ಲೇ ಸೂಚಿಸುತ್ತಿದ್ದರು. ಬರಹವೇ ವಾಪಸ್ ಬೇಕಿದ್ದರೆ ಸಾಕಷ್ಟು ಸ್ಟಾಂಪ್ ಹಚ್ಚಿದ ಪೋಸ್ಟಲ್ ಕವರ್ ನ್ನೂ ಇರಿಸಬೇಕು ಅಂತಲೂ ಇರುತ್ತಿತ್ತು.
ಈಗ ಕಾಲ ಮತ್ತೆ ಬದಲಾಗಿದೆ. ವಸುಧೇಂದ್ರ ರಂತವರಿಗೆ ಸ್ಪರ್ಧೆಗಾಗಿ ಕಥಾಗುಚ್ಚ ಕಳಿಸಿದರೆ ಪ್ರತಿ ತಲುಪಿದ್ದಕ್ಕೆ ಸೌಜನ್ಯಯುತವಾದ ಉತ್ತರ ಬರುತ್ತದೆ. ಅಂಥ ಕೆಲ ಉದಾಹರಣೆ ಬಿಟ್ಟರೆ ಹಲವು ಜವಾಬ್ದಾರಿಯುತ ಸಂಪಾದಕರಿಗೆ ಪ್ರತಿಕ್ರಿಯಿಸಲು ಪುರುಸೊತ್ತಿಲ್ಲ. ಮುದ್ರಣ ಮಾಧ್ಯಮ ಪತ್ರಿಕೆಯ ರೀತಿ-ನೀತಿ ಹೇಗೆ ಬದಲಾವಣೆಯಾಗಿದೆಯೋ ಅರಿವಿಲ್ಲವಾಗಲೀ ಹೆಚ್ಚುತಿರುವ ಇ-ಮ್ಯಾಗಜೈನ್ ಗಳ ಸಂಪಾದಕರುಗಳಿಗೆ ಇ-ಮೇಲ್ ( ಪತ್ರ ಕಳಿಸ್ತೀರಾ?  ಅದೆಲ್ಲಾ ಹಳೆಯ ಕಾಲ ಸ್ವಾಮಿ!) ಕಳುಹಿಸಿದರೆ ಉತ್ತರಿಸುವಷ್ಟೂ ವ್ಯವಧಾನವಿಲ್ಲ. ಅನರ್ಹವಾದ ಬರಹಗಳು ಹಾಳಾಗಲಿ, ಪ್ರಕಟಪಡಿಸಿದ್ದನ್ನೂ ತಿಳಿಸುವ ಗೋಜಿಗೆ ಹೋಗಲಾರರು. ಮುದ್ರಣ ಮಾಧ್ಯಮ ದ ಪತ್ರಿಕೆಗಳೂ ಬ್ಲಾಗ್ ಲೇಖನಗಳನ್ನು ಎತ್ತಿಕೊಳ್ಳುವಾಗ ಲೇಖಕನನ್ನು ಕೇಳುವ ಪರಿಪಾಠ ಇಟ್ಟುಕೊಂಡಿಲ್ಲ. ಇತ್ತ ಬ್ಲಾಗುಗಳಿಗೆ ಬಂದು ಚೆನ್ನಾಗಿರುವ ಬರಹಕ್ಕೆ ಕಾಮೆಂಟಿಸೋಣವೆಂದರೆ ಕೆಲ ಬ್ಲಾಗಿನಲ್ಲಿ ಸೌಜನ್ಯಕ್ಕಾದರೂ ಪ್ರತಿಕ್ರಿಯೆ ಕೊಡುವ ರಿವಾಜು ಇಲ್ಲ. ಮಜವೆಂದರೆ ಕೆಲವು ಬ್ಲಾಗುಗಳಲ್ಲಂತೂ ಕಾಮೆಂಟಿಸಿದ ಎಲ್ಲರಿಗೂ ಉತ್ತರಿಸಿ ನನ್ನ ಕಾಮೆಂಟನ್ನು ಮಾತ್ರ ನಿರ್ಲಕ್ಷಿಸಿದ ಉದಾಹರಣೆಗಳೂ ಇದೆ!
ನನ್ನ ಹದಿನೇಳನೆಯ ವಯಸ್ಸಿನಲ್ಲಿ, ಪ್ರಪಂಚ ಜ್ಞಾನವಿರದ ಹರೆಯದಲ್ಲಿ ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾದ ಕಥೆಯೊಂದನ್ನು ಮೆಚ್ಚಿ ಬಂದ ಹದಿನೈದು ಪತ್ರಗಳಿಗೂ ಉತ್ತರ ನೀಡಲೇಬೇಕೆಂದು ನನ್ನಿಂದ ಬರೆಸಿ ನನ್ನ ಕೈಯಿಂದಲೇ ಪೋಸ್ಟ್ ಮಾಡಿಸಿದ್ದ ಅಪ್ಪ, ಈಗ ಇಂಥ ಸಮಯದಲ್ಲಿ ತುಂಬ ನೆನಪಾಗುತ್ತಾನೆ..
************
ವಿಮರ್ಶಕಿ ಬ್ಲಾಗಿನಲ್ಲಿ ಆಗಲೇ ಎರಡು ಬಾರಿ ಕನ್ನಡಪ್ರಭದ ತಪ್ಪುಗಳನ್ನು ಬರೆದಿದ್ದಾಗಿದೆ. ಈಗ ಮತ್ತೆ ಬರೆಯಬೇಕಾಗಿದೆ.
ವಿಂಬಲ್ಡನ್ ಟೆನಿಸ್ ನಲ್ಲಿ ಸೆಂಟರ್ ಕೋರ್ಟ್ ನಲ್ಲಿ ಆಡುವ ಅವಕಾಶ ಸುಂದರಿಯರಿಗೆ ಮಾತ್ರ ನೀಡಲಾಗುತ್ತದೆ ಎಂಬ ಸುದ್ಧಿ ವಿಜಯ ಕರ್ನಾಟಕದಲ್ಲಿ  ವಿಂಬಲ್ಡನ್ ಟೂರ್ನಮೆಂಟ್ ನಡೆಯುವ ಸಂದರ್ಭದಲ್ಲಿಯೇ ಅಂದರೆ ೦೨-೦೭-೦೯ ರಂದು “ಮುಖಕ್ಕೆ ಮಣೆ!” ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟವಾಗಿತ್ತು.
ಅದನ್ನು ಕನ್ನಡಪ್ರಭ ತನ್ನ ಕ್ರೀಡಾಪ್ರಭದಲ್ಲಿ ೧೪-೦೭-೦೯ ರಲ್ಲಿ “ಸುಂದರಿಯರಿಗೆ ಮಾತ್ರ ಸೆಂಟರ್ ಕೋರ್ಟ್ ಆಟ” ಅನ್ನುವ ಶೀರ್ಷಿಕೆಯಡಿ ಬಂದಿದೆ. ಸುದ್ಧಿಯಲ್ಲಿ ಬರೆಯುತ್ತ ಆಲ್ ಇಂಗ್ಲಂಡ್ ಕ್ಲಬ್ ನ ವಕ್ತಾರರೊಬ್ಬರು ರಹಸ್ಯ ಬಯಲು ಮಾಡಿದ್ದಾರೆ ಅಂತಲೂ ಇದೆ. ಈ ರಹಸ್ಯ ನಮಗೆ ತಿಳಿಸಲು ಹನ್ನೆರಡು ದಿನ ಬೇಕಾಗುತ್ತಾ ಕನ್ನಡಪ್ರಭ ಸಂಪಾದಕರೇ?
ಐದು-ಹತ್ತು ವರ್ಷದ ಮೊದಲು, ಗೆಳೆಯರ ಬಳಗದವರೆಲ್ಲರಿಗೂ ತಿಳಿದಿದ್ದ ವಿಷಯವೊಂದನ್ನು ಬೇರೊಬ್ಬ ಸ್ಪೆಷಲ್ ನ್ಯೂಸ್ ಎಂಬಂತೆ ಹೇಳಲು ಬಂದಿದ್ದರೆ ರೇಗಿಸುತ್ತಾ “ನೋಡ್ರಪ್ಪ ತಂದ ಉದಯವಾಣಿ ನ್ಯೂಸು” ಅನ್ನುತ್ತಾ, ಸದಾ ಒಂದೆರಡು ದಿನ ತಡವಾಗಿ ಸುದ್ಧಿ ತರುತ್ತಿದ್ದ ಉದಯವಾಣಿ ಪತ್ರಿಕೆಯನ್ನು  ಉದಾಹರಣೆಯಾಗಿ ಬಳಸಿಕೊಳ್ಳುತ್ತಿದ್ದೆವು. ಆದರೆ ಉದಯವಾಣಿಯಲ್ಲಿ ಪರಿಸ್ಥಿತಿ ಬಹಳಷ್ಟು ಸುಧಾರಿಸಿದೆ. ಈಗೆಲ್ಲಾ ಉದಯವಾಣಿ ಉದಾಹರಣೆ ಕೊಟ್ಟು ಹೇಳುವಂತಿಲ್ಲ.
ಕನ್ನಡಪ್ರಭ ಆ ಸ್ಥಳದಲ್ಲಿ ವಿರಾಜಮಾನವಾಗುವ ಸೂಚನೆಯಿದೆ!
***************
“ನೀವು ಬರೆದ ಕಥೆ ನಮ್ಮ ಪತ್ರಿಕೆಯ ಪ್ರಕಟಣೆಗೆ ಅನರ್ಹವಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ.
ವಂದನೆಗಳೊಂದಿಗೆ,
ಸಂಪಾದಕ.”
ನೀವೊಂದು ಬರಹ ಕಳುಹಿಸಿದರೆ ಅದು ಪತ್ರಿಕೆಯಲ್ಲಿ ಅಚ್ಚಾಗುವ ಮಟ್ಟದಲ್ಲಿಲ್ಲದಿದ್ದರೆ ಪತ್ರಿಕೆಯಿಂದ ಈ ರೀತಿಯಾದ ಓಲೆ ಬರುವುದು ಸಾಮಾನ್ಯವಿತ್ತು. ಪ್ರಕಟಣೆಗೆ ಅರ್ಹವಾಗಿದ್ದರೂ ಕಾಲಕ್ರಮೇಣ ಪ್ರಕಟಿಸುತ್ತೇವೆ ಎಂದು ಮೊದಲೇ ತಿಳಿಸುತ್ತಿದ್ದಿದ್ದರು. ನನ್ನ ಚಿಕ್ಕ ವಯಸ್ಸಿನಲ್ಲಿ ಹೊಸದಿಗಂತ ದೈನಿಕಕ್ಕೆ ಕಳಿಸಿದ ಲೇಖನಗಳು ಅನರ್ಹವಾದಾಗ ಸಂಪಾದಕರು ಕಳುಹಿಸಿದ ಕಾರ್ಡ್ ಈಗಲೂ ನನ್ನ ಫೈಲಿನಲ್ಲಿ ಬೆಚ್ಚಗಿವೆ. ಮೊದಲ ಲೇಖನ ಪ್ರಕಟವಾಗಿ ಸಂಭಾವನೆಯಾಗಿ ಬಂದ ಎಪ್ಪತ್ತೈದು ರೂಪಾಯಿ ಸಂಭಾವನೆ ಅಪ್ಪನಿಗಿತ್ತ ಕ್ಷಣಗಳು ಮನದ ಮೂಲೆಯಲ್ಲಿ ಇನ್ನೂ ಹಸಿರಾಗಿವೆ.
ಕಾಲ ಬದಲಾದಾಗ (ಪೋಸ್ಟ್ ಕಾರ್ಡ್ ಬೆಲೆ ಹೆಚ್ಚಾದಾಗ?) ನಿಮ್ಮ ಬರಹದ ಸ್ವೀಕೃತಿ-ಅಸ್ವೀಕೃತಿ ಬಗ್ಗೆ ಮಾಹಿತಿ ಬೇಕಿದ್ದರೆ ಸ್ವವಿಳಾಸ ಬರೆದಿರುವ ಕಾರ್ಡ್ ನ್ನು ಇರಿಸತಕ್ಕದ್ದು ಎಂಬ ನಿಯಮ ಬರಹಗಳನ್ನು ಕೋರುವ ಕಾಲಮ್ ನಲ್ಲೇ ಸೂಚಿಸುತ್ತಿದ್ದರು. ಬರಹವೇ ವಾಪಸ್ ಬೇಕಿದ್ದರೆ ಸಾಕಷ್ಟು ಸ್ಟಾಂಪ್ ಹಚ್ಚಿದ ಪೋಸ್ಟಲ್ ಕವರ್ ನ್ನೂ ಇರಿಸಬೇಕು ಅಂತಲೂ ಇರುತ್ತಿತ್ತು.
ಈಗ ಕಾಲ ಮತ್ತೆ ಬದಲಾಗಿದೆ. ವಸುಧೇಂದ್ರ ರಂತವರಿಗೆ ಸ್ಪರ್ಧೆಗಾಗಿ ಕಥಾಗುಚ್ಚ ಕಳಿಸಿದರೆ ಪ್ರತಿ ತಲುಪಿದ್ದಕ್ಕೆ ಸೌಜನ್ಯಯುತವಾದ ಉತ್ತರ ಬರುತ್ತದೆ. ಅಂಥ ಕೆಲ ಉದಾಹರಣೆ ಬಿಟ್ಟರೆ ಹಲವು ಜವಾಬ್ದಾರಿಯುತ ಸಂಪಾದಕರಿಗೆ ಪ್ರತಿಕ್ರಿಯಿಸಲು ಪುರುಸೊತ್ತಿಲ್ಲ. ಮುದ್ರಣ ಮಾಧ್ಯಮ ಪತ್ರಿಕೆಯ ರೀತಿ-ನೀತಿ ಹೇಗೆ ಬದಲಾವಣೆಯಾಗಿದೆಯೋ ಅರಿವಿಲ್ಲವಾಗಲೀ ಹೆಚ್ಚುತಿರುವ ಇ-ಮ್ಯಾಗಜೈನ್ ಗಳ ಸಂಪಾದಕರುಗಳಿಗೆ ಇ-ಮೇಲ್ ( ಪತ್ರ ಕಳಿಸ್ತೀರಾ?  ಅದೆಲ್ಲಾ ಹಳೆಯ ಕಾಲ ಸ್ವಾಮಿ!) ಕಳುಹಿಸಿದರೆ ಉತ್ತರಿಸುವಷ್ಟೂ ವ್ಯವಧಾನವಿಲ್ಲ. ಅನರ್ಹವಾದ ಬರಹಗಳು ಹಾಳಾಗಲಿ, ಪ್ರಕಟಪಡಿಸಿದ್ದನ್ನೂ ತಿಳಿಸುವ ಗೋಜಿಗೆ ಹೋಗಲಾರರು. ಮುದ್ರಣ ಮಾಧ್ಯಮ ದ ಪತ್ರಿಕೆಗಳೂ ಬ್ಲಾಗ್ ಲೇಖನಗಳನ್ನು ಎತ್ತಿಕೊಳ್ಳುವಾಗ ಲೇಖಕನನ್ನು ಕೇಳುವ ಪರಿಪಾಠ ಇಟ್ಟುಕೊಂಡಿಲ್ಲ. ಇತ್ತ ಬ್ಲಾಗುಗಳಿಗೆ ಬಂದು ಚೆನ್ನಾಗಿರುವ ಬರಹಕ್ಕೆ ಕಾಮೆಂಟಿಸೋಣವೆಂದರೆ ಕೆಲ ಬ್ಲಾಗಿನಲ್ಲಿ ಸೌಜನ್ಯಕ್ಕಾದರೂ ಪ್ರತಿಕ್ರಿಯೆ ಕೊಡುವ ರಿವಾಜು ಇಲ್ಲ. ಮಜವೆಂದರೆ ಕೆಲವು ಬ್ಲಾಗುಗಳಲ್ಲಂತೂ ಕಾಮೆಂಟಿಸಿದ ಎಲ್ಲರಿಗೂ ಉತ್ತರಿಸಿ ನನ್ನ ಕಾಮೆಂಟನ್ನು ಮಾತ್ರ ನಿರ್ಲಕ್ಷಿಸಿದ ಉದಾಹರಣೆಗಳೂ ಇದೆ!
ನನ್ನ ಹದಿನೇಳನೆಯ ವಯಸ್ಸಿನಲ್ಲಿ, ಪ್ರಪಂಚ ಜ್ಞಾನವಿರದ ಹರೆಯದಲ್ಲಿ ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾದ ಕಥೆಯೊಂದನ್ನು ಮೆಚ್ಚಿ ಬಂದ ಹದಿನೈದು ಪತ್ರಗಳಿಗೂ ಉತ್ತರ ನೀಡಲೇಬೇಕೆಂದು ನನ್ನಿಂದ ಬರೆಸಿ ನನ್ನ ಕೈಯಿಂದಲೇ ಪೋಸ್ಟ್ ಮಾಡಿಸಿದ್ದ ಅಪ್ಪ, ಈಗ ಇಂಥ ಸಮಯದಲ್ಲಿ ತುಂಬ ನೆನಪಾಗುತ್ತಾನೆ..
************
ವಿಮರ್ಶಕಿ ಬ್ಲಾಗಿನಲ್ಲಿ ಆಗಲೇ ಎರಡು ಬಾರಿ ಕನ್ನಡಪ್ರಭದ ತಪ್ಪುಗಳನ್ನು ಬರೆದಿದ್ದಾಗಿದೆ. ಈಗ ಮತ್ತೆ ಬರೆಯಬೇಕಾಗಿದೆ.
ವಿಂಬಲ್ಡನ್ ಟೆನಿಸ್ ನಲ್ಲಿ ಸೆಂಟರ್ ಕೋರ್ಟ್ ನಲ್ಲಿ ಆಡುವ ಅವಕಾಶ ಸುಂದರಿಯರಿಗೆ ಮಾತ್ರ ನೀಡಲಾಗುತ್ತದೆ ಎಂಬ ಸುದ್ಧಿ ವಿಜಯ ಕರ್ನಾಟಕದಲ್ಲಿ  ವಿಂಬಲ್ಡನ್ ಟೂರ್ನಮೆಂಟ್ ನಡೆಯುವ ಸಂದರ್ಭದಲ್ಲಿಯೇ ಅಂದರೆ ೦೨-೦೭-೦೯ ರಂದು “ಮುಖಕ್ಕೆ ಮಣೆ!” ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟವಾಗಿತ್ತು.
ಅದನ್ನು ಕನ್ನಡಪ್ರಭ ತನ್ನ ಕ್ರೀಡಾಪ್ರಭದಲ್ಲಿ ೧೪-೦೭-೦೯ ರಲ್ಲಿ “ಸುಂದರಿಯರಿಗೆ ಮಾತ್ರ ಸೆಂಟರ್ ಕೋರ್ಟ್ ಆಟ” ಅನ್ನುವ ಶೀರ್ಷಿಕೆಯಡಿ ಬಂದಿದೆ. ಸುದ್ಧಿಯಲ್ಲಿ ಬರೆಯುತ್ತ ಆಲ್ ಇಂಗ್ಲಂಡ್ ಕ್ಲಬ್ ನ ವಕ್ತಾರರೊಬ್ಬರು ರಹಸ್ಯ ಬಯಲು ಮಾಡಿದ್ದಾರೆ ಅಂತಲೂ ಇದೆ. ಈ ರಹಸ್ಯ ನಮಗೆ ತಿಳಿಸಲು ಹನ್ನೆರಡು ದಿನ ಬೇಕಾಗುತ್ತಾ ಕನ್ನಡಪ್ರಭ ಸಂಪಾದಕರೇ?
ಐದು-ಹತ್ತು ವರ್ಷದ ಮೊದಲು, ಗೆಳೆಯರ ಬಳಗದವರೆಲ್ಲರಿಗೂ ತಿಳಿದಿದ್ದ ವಿಷಯವೊಂದನ್ನು ಬೇರೊಬ್ಬ ಸ್ಪೆಷಲ್ ನ್ಯೂಸ್ ಎಂಬಂತೆ ಹೇಳಲು ಬಂದಿದ್ದರೆ ರೇಗಿಸುತ್ತಾ “ನೋಡ್ರಪ್ಪ ತಂದ ಉದಯವಾಣಿ ನ್ಯೂಸು” ಅನ್ನುತ್ತಾ, ಸದಾ ಒಂದೆರಡು ದಿನ ತಡವಾಗಿ ಸುದ್ಧಿ ತರುತ್ತಿದ್ದ ಉದಯವಾಣಿ ಪತ್ರಿಕೆಯನ್ನು  ಉದಾಹರಣೆಯಾಗಿ ಬಳಸಿಕೊಳ್ಳುತ್ತಿದ್ದೆವು. ಆದರೆ ಉದಯವಾಣಿಯಲ್ಲಿ ಪರಿಸ್ಥಿತಿ ಬಹಳಷ್ಟು ಸುಧಾರಿಸಿದೆ. ಈಗೆಲ್ಲಾ ಉದಯವಾಣಿ ಉದಾಹರಣೆ ಕೊಟ್ಟು ಹೇಳುವಂತಿಲ್ಲ.
ಕನ್ನಡಪ್ರಭ ಆ ಸ್ಥಳದಲ್ಲಿ ವಿರಾಜಮಾನವಾಗುವ ಸೂಚನೆಯಿದೆ!
***************

ಬದುಕು, ಪ್ರೀತಿ, ದೇವರು ಮತ್ತು ನಿನ್ನ ಮೇಲೆ ಬರೆಯುತ್ತಿರುವ ಕೊನೆಯ ಅಕ್ಷರಗಳಿವು!

ಅವತ್ತು ನೀ ಹಾಗೆ ಬೆನ್ನು ತೋರಿ ಹೊರಡುವಾಗ ನಿನ್ನ ಕಣ್ಣು ನೋಡಬೇಕೆನ್ನಿಸಿತ್ತು ಕಣೇ. ಪ್ರೀತಿಯಿಂದ ತುಳುಕುತಿದ್ದ ಕಣ್ಣ ಭಾವವನ್ನಷ್ಟೇ ಸವಿದು ಅಭ್ಯಾಸವಾಗಿಬಿಟ್ಟಿತ್ತಲ್ಲ; ಮೋಸದ ಕಹಿಯೂ ಅರಿವಾಗಬೇಕಿತ್ತು. ಮೊದಲು ನನ್ನ ಕಂಡೊಡನೆ ತಾರೆಯಂತೆ ಜಗಮಗಿಸುತ್ತಿದ್ದ ಕಣ್ಣುಗಳಲ್ಲಿ ಈ ಬಗೆಯ ನಿರ್ಲಕ್ಷ್ಯ, ’ನಿನ್ನ ಬದುಕು ನಿನಗೆ; ಎಲ್ಲೋ ಹೇಗೋ ಬದುಕಿಕೊಂಡು ಸಾಯಿ’ ಅನ್ನುವಂಥ ದ್ವೇಷ ಹೇಗೆ ಧಗಧಗಿಸುತ್ತದೆ ಎಂದಾದರೂ ಕಾಣಬೇಕಿತ್ತು.

ಅದರಿಂದಲಾದರೂ ನಿನ್ನ ಮೇಲೊಂದಿಷ್ಟು ಸಿಟ್ಟು ಹುಟ್ಟಿ ನಿನ್ನ ಮರೆಯಲು ಸುಲಭವಾಗುತಿತ್ತಲ್ಲವೇ? ಈ ಪರಿ ರಾತ್ರಿಗಳನ್ನು, ನೆನಪುಗಳು ಸುಡುವ ಅವಕಾಶ ಇಲ್ಲವಾಗುತಿತ್ತಲ್ಲವೇನೆ ಗೆಳತೀ?

ಹಾಗೆ ಅಷ್ಟು ನಿರ್ದುಷ್ಟವಾಗಿ ಹೋಗುವಾಗ, ವಿಲವಿಲ ಒದ್ದಾಡುವ ಹೃದಯವನ್ನು ನೇವರಿಸುವಂತಹ ಪುಟ್ಟನೋಟವೊಂದನ್ನು ಇತ್ತು ಹೋಗಿದ್ದರೆ ಜನುಮದ ಕ್ಷಣಗಳನ್ನೆಲ್ಲಾ ಅದರ ತೆಕ್ಕೆಯಲ್ಲಿ ಹಾಕಿ ಖುಷಿಯಿಂದ ಕಳೆದುಬಿಡುತ್ತಿದ್ದೆ. ’ನಿನ್ನದೇನೂ ತಪ್ಪಿಲ್ಲ; ಏನೋ ಸಮಸ್ಯೆಯಿಂದಾಗಿ ಹೊರಟಿದ್ದೀ, ಬದುಕಿನ ಯಾವುದೋ ಒಂದು ಸುಂದರ ತಿರುವಿನಲ್ಲಿ ನನಗಾಗಿ ಕಾಯುತಿರುತ್ತೀ’ ಎಂಬ ಭ್ರಮೆಯನ್ನು ಸತ್ಯವೆಂದೇ ಮನಸ್ಸಿಗೆ ನಂಬಿಸುತ್ತಾ ಅಂತಿಮವಾಗಿ ಸಾವಿನ ತಿರುವು ಬರುವವರೆಗೂ ಕಾಲ ಕಳೆಯುತ್ತಿದ್ದೆ. ನಮ್ಮ ಯುಗಗಳು ದೇವರಿಗೆ ಕ್ಷಣಗಳಂತೆ. ಅಂತಹ ಸಾವಿರ ಕ್ಷಣಗಳನ್ನು ಯುಗಗಳಂತಾದರೂ ಗರ್ಭಗುಡಿಯೊಳಗಿನ ಮೂರ್ತಿಯಂತೆ ಬಾಳಿ ಕಳೆದುಬಿಡುತ್ತಿದ್ದೆ.

ಹಾಗಾಗಲಿಲ್ಲ.

ನೀ ತೊರೆದ ಘಳಿಗೆಯಲ್ಲಿ ನಿಶ್ಯಬ್ದವೂ ಸಂತೈಸಲಿಲ್ಲ; ತಂಗಾಳಿಯೂ ಸಾಂತ್ವನ ಹೇಳಲಿಲ್ಲ. ಮೌನವಾಗಿ ನಿಂತ ನನ್ನ ಹಿಂದೆ ಅದೇ ಯುಗಗಳಂತಹ ಕ್ಷಣಗಳ ಕ್ಯೂ. ನೆನಪಿನ ಜೋಳಿಗೆ ಹೊತ್ತ ಫಕೀರನೆದುರು ಹಸಿದು ನಿಂತ ಬಕಾಸುರನಂತೆ ಕ್ಷಣಗಳು.

ಹಾಗೆ ಹೊರಟುಹೋಗಲು ಕಾರಣವಾದರೂ ಏನಿತ್ತು? ಕೇಳೋಣ ಅಂದುಕೊಂಡಿದ್ದೆ.

ಕೇಳಿಯೇ ಬಿಟ್ಟಿದ್ದರೆ ಮತ್ತೊಂದು ಅನಾಹುತವಾಗುತಿತ್ತು. ಮೊದಲಿಂದಲೂ ಆಸೆಪಟ್ಟದ್ದನ್ನು ಪಡೆದೇ ಅಭ್ಯಾಸ. ಅಮ್ಮನ ಖಾಲಿ ಕೈಗೆ ವಾಚು ಉಡುಗೊರೆ ಮಾಡಬೇಕೆಂದು ಯಾವಾಗನ್ನಿಸಿತ್ತೋ ಅದೇ ದಿನ ಮನೆಮನೆಗೆ ಪೇಪರ್ ಹಾಕಿ ಹಾಲಿನ ಪ್ಯಾಕೆಟ್ಟೆಸೆದು ತಿಂಗಳು ಮುಗಿಯುವುದರೊಳಗೆ ಟೈಟನ್ ವಾಚು ತಂದುಕೊಟ್ಟಿರಲಿಲ್ಲವೇ?

ಕುಡುಮಿ ವಿಧ್ಯಾರ್ಥಿಯೊಬ್ಬನಿಗಿಂತ ಜಾಸ್ತಿ ಮಾರ್ಕ್ಸು ಪಡೆಯಲೇಬೇಕೆಂದು ಯಾವಾಗನ್ನಿಸಿತ್ತೋ ಆಗೆಲ್ಲಾ ನಿದಿರಿಸುವುದೇ ಕಾಲಹರಣ ಅನ್ನಿಸತೊಡಗಿತ್ತಲ್ಲವ? ಮುಂದಿನ ಪರೀಕ್ಷೆಯಲ್ಲಿಯೇ ಹೆಚ್ಚು ಅಂಕ ಗಳಿಸಿ ತೋರಿಸಿರಲಿಲ್ಲವೇ?

ಹಾಗೆಯೇ (ನೀನೆಲ್ಲಾದರೂ ನನ್ನ ದುಃಖ ಕಡಿಮೆಯಾಗುತ್ತದೆಂದು ಊಹಿಸಿ ಸುಳ್ಳಿಗಾದರೂ) ತೊರೆಯಲು ಏನೋ ಒಂದು ಕಾರಣ ಹೇಳಿದ್ದರೆ ಅದನ್ನು ಜಯಿಸಲು ನನಗೆಷ್ಟು ಸಮಯ ಬೇಕಾಗುತಿತ್ತು ಹೇಳು? ಅದಕ್ಕೇ ಕಾರಣ ಕೇಳುತ್ತಿದ್ದ ಮನದ ಕತ್ತನ್ನು ಹಿಸುಕಿ ಮೌನವಾಗಿಸಿದೆ.

Abstract_Painting

ಇನ್ನು ಮುಂದೇನೂ ಇಲ್ಲ. ಕನಸು, ವಾಸ್ತವಗಳು ಸುತ್ತಲಿಂದಲೂ ಅಟ್ಯಾಕ್ ಮಾಡಿದಾಗ ಆಯುಧ ಕಳಕೊಂಡ ಸೈನಿಕ. ಮನಸ್ಸು, ಸಾಗರದ ನಡುಮಧ್ಯೆ ದಿಕ್ಸೂಚಿ ಬೀಳಿಸಿಕೊಂಡ ನಾವಿಕ. ತೂರಾಡುವ ಹಡಗಿಲ್ಲದೇ ಅಲೆಗಳಿಗೂ ಮಜವಿಲ್ಲ. ತೂಗಾಡಿಸುವ ಗಾಳಿಯಿಲ್ಲದೇ ಹೂಗಳಿಗೂ ಖುಷಿಯಿಲ್ಲ. ಸತ್ತವನಂತಿರುವವನಿಗೆ ಬಡಿದು ಪ್ರಯೋಜನವೇನು ಎಂಬಂತೆ ಬೇರೆ ದುಃಖಗಳೆಲ್ಲ ಇನ್ಯಾರನ್ನೋ ಹುಡುಕಿಕೊಂಡು ಹೊರಟಿದೆ. ಜೀವ ಬಸಿದು ಪದಗಳಾಗುತಿರಲು ಬರೆಯಲೂ ಕೈ ನಡುಗುತಿದೆ ; ಬಹುಶಃ ನಿನ್ನ ಮೇಲೆ, ಬದುಕಿನ ಮೇಲೆ, ಪ್ರೀತಿಯ ಮೇಲೆ ಮತ್ತು ದೇವರ ಮೇಲೆ ಬರೆಯುತ್ತಿರುವ ಕೊನೆಯ ಅಕ್ಷರಗಳಿವು.

ಓದಿ, ಲೊಚಗುಟ್ಟಿಯೋ, ಕನಿಕರಿಸಿಯೋ, ಧಿಕ್ಕರಿಸಿಯೋ, ನೇವರಿಸಿಯೋ, ಹರಿದು ಹಾಕಿಯೋ, ಫ್ರೇಮ್ ಹಾಕಿಸಿಯೋ, ಮದುವೆ ಅಲ್ಬಮ್ಮಿನ ಫೋಟೋ ಹಿಂದುಗಡೆ ಯಾರಿಗೂ ಕಾಣದಂತಿರಿಸಿಯೋ, ಚಿಂದಿ ಮಾಡಿ ಕಸದ ಬುಟ್ಟಿಗೆಸೆದೋ….

ಸಾರ್ಥಕವಾಗಿಸು.

ನನ್ನಮ್ಮನಿಗೆ ತಿಳಿಸದಿರಲಿ..!

ಏಕೋ ವಿಜ್ಞಾನಿಗಳ ಮೇಲೆ ನಂಬಿಕೆಯೇ ಹೊರಟುಹೋಗಿದೆ. ಅವರೂ ಈ ಹವಾಮಾನ ವರದಿ ಹೇಳುವವರ ಥರ ಆಗಿ ಹೋಗಿದ್ದಾರೇನೋ ಅನ್ನಿಸುತ್ತಿದೆ. ಬಹುಶಃ ಈ ಅನಿಸಿಕೆ ಹುಟ್ಟಿದ್ದು, ಚಿಕ್ಕಂದಿನಲ್ಲಿ ಟೀಚರಿನ ಭಯದಿಂದ ಕಷ್ಟಪಟ್ಟು ಕಂಠಪಾಠ ಮಾಡಿದ್ದ ಒಂಭತ್ತು ಗ್ರಹಗಳಲ್ಲಿ ಪ್ಲೂಟೋ ವನ್ನು ಗ್ರಹವಲ್ಲ ಅಂತ ಖಗೋಳ ಶಾಸ್ತಜ್ಞರು ಘೋಷಿಸಿದ್ದಕ್ಕೇ ಇರಬೇಕು. ಆ ವಯಸ್ಸಿನಲ್ಲೇ ಇಂಥ ಘೋಷಣೆ ನಡೆದಿದ್ದಿದರೆ ನಮ್ಮ ಟೀಚರನ್ನೇ ಅಲ್ಲಗಳೆಯಲು ಅವರಿಗೆಷ್ಟು ಧಾರ್ಷ್ಟ್ಯ ಅಂದುಕೊಳ್ಳುತ್ತಿದ್ದೆವಲ್ಲವಾ?! ಈಗಲೂ ಯಾರಾದರೂ ಒಟ್ಟೂ ಎಷ್ಟು ಗ್ರಹವಿದೆ ಎಂಬ ಪ್ರಶ್ನೆ ಕೇಳಿದರೆ ಮೊದಲ ಉತ್ತರ ಒಂಭತ್ತು ಎಂದೇ ಆಗಿರುತ್ತದೆ. ಹಾಗೆ ಹೇಳಿದ ಮೇಲೆ ಕಳೆದ ವರ್ಷ ಖಗೋಳ ಶಾಸ್ತಜ್ಞರ ಹೇಳಿಕೆ ನೆನಪಾಗಿ ಮತ್ತೆ ಕರೆಕ್ಷನ್ ಮಾಡಿಕೊಳ್ಳಲು ಒಂದಿಷ್ಟು ಸಮಯ ಆಗಿಹೋಗಿರುತ್ತದೆ. ಇದಿಷ್ಟೂ ವರ್ಷ ಗ್ರಹವಾಗಿದ್ದ ಪ್ಲೂಟೋ ಜಾತಕದಲ್ಲಿ ರಾಹು-ಕೇತು ತಮ್ಮ ಮನೆ(ಗ್ರಹ) ಬದಲಿಸಿದ್ದೇ ಕಾರಣವಾಗಿ ಗ್ರಹ ಸ್ಥಾನದಿಂದ ಉದುರಿಹೋಯಿತೇನೋ? ನಿಜವಾಗಿಯೂ ಈ ಗ್ರಹಗಳ ಬಗ್ಗೆ, ಖಗೋಳಶಾಸ್ತ್ರದ ವಿಷಯಗಳು ನನಗೂ ಆಳವಾಗಿ ಗೊತ್ತಿದ್ದರೆ ಕಷ್ಟಪಟ್ಟಾದರೂ ಪ್ಲೂಟೋವನ್ನು ಒಂದು ಗ್ರಹವಾಗಿ ಉಳಿಸಿಕೊಳ್ಳುತ್ತಿದ್ದೆನಲ್ಲವೇ?

ವಿಜ್ಞಾನದಲ್ಲಿ ಇದೇ ನಿಜ ಎಂದು ಯಾರೂ ಎದೆ ತಟ್ಟಿ ಹೇಳಲಾರರು. ಇರುವ ಸತ್ಯಗಳೆಲ್ಲ ಈ ಕ್ಷಣದ ಮಟ್ಟಿಗಷ್ಟೇ. ಇವತ್ತಿರುವ ಎಲ್ಲ ನಿಜಗಳನ್ನು ಮುಂದೆ ಯಾವುದೋ ಒಂದು ಫೈನ್ ಡೇ ಮತ್ತೊಬ್ಬ ವಿಜ್ಞಾನಿ ಹೊಸದೊಂದು ವಾದ ಮಂಡಿಸಿ ನೀವು ಓದಿದ್ದೆಲ್ಲಾ ತಪ್ಪು, ತಿಳಿದುಕೊಂಡಿರುವುದೆಲ್ಲಾ ಅಸತ್ಯ ಎಂದು ತಲೆಕೆಳಗಾಗಿಸಬಲ್ಲ. (ಇದು ನನಗೆ ಮೊದಲೇ ಗೊತ್ತಿದ್ದಿದ್ದರೆ ವಿಜ್ಞಾನದಲ್ಲಿ ಕಡಿಮೆ ಅಂಕ ಬಂದಾಗ ಅದಕ್ಕೆ ಇದೇ ವಾದವನ್ನು ನನ್ನ ಕಾರಣವಾಗಿ ಮಂಡಿಸಬಹುದಿತ್ತು!) ಜಗತ್ತು ಮತ್ತೆ ತನ್ನ ಪಠ್ಯಪುಸ್ತಕಗಳನ್ನು ಬದಲಿಸುತ್ತದೆ. ಆ ವಿಜ್ಞಾನಿಯನ್ನು ಪಕ್ಕಕ್ಕೆ ಕೂರಿಸಿ ಹೊಸ ವಾದ ಮಂಡಿಸಿದವನಿಗೆ ಪಟ್ಟ ಒಪ್ಪಿಸಲಾಗುತ್ತದೆ. ಈ ಹೊಸ ವಿಜ್ಞಾನಿ ಅದೇ ಪಟ್ಟದಲ್ಲಿ ವಿರಾಜಮಾನನಾಗುತ್ತಾನೆ ; ಮುಂದೊಂದು ದಿನ ಹೊಸ ವಾದ ಸೃಷ್ಟಿಯಾಗುವವರೆಗೂ! ಈ ತಲೆಕೆಳಗಾಗಿಸುವಿಕೆ ವಿಜ್ಞಾನಕ್ಕೆ ಹೊಸತೇನಲ್ಲ. ಬಹಳ ಹಿಂದಿನಿಂದಲೂ ನಡೆದುಕೊಂಡುಬಂದಿರುವಂತದ್ದೇ!

ಅಪನಂಬಿಕೆಗಳಿಗೆ ಇದೊಂದೇ ಕಾರಣವಲ್ಲ. ಕಳೆದ ವರ್ಷದ ದಿನಪತ್ರಿಕೆಗಳನ್ನು ಹಿಡಿದು ನೋಟ್ ಮಾಡುತ್ತ ಕುಳಿತರೆ ಕೆಲ ವಿಜ್ಞಾನಿಗಳ ಸಾಕಷ್ಟು ವೈರುದ್ಧ್ಯ ಹೇಳಿಕೆಗಳು ಕಾಣಸಿಗುತ್ತದೆ. ಇದೇ ವಿಷಯವಾಗಿ ಜೋಗಿ ಒಂದು ಲೇಖನದಲ್ಲಿ ಈ ರೀತಿ ಬರೆಯುತ್ತಾರೆ, ” ಆಗಾಗ ಈ ವಿಜ್ಞಾನಿಗಳ ಸಾಧನೆ ವರದಿಯಾಗುತ್ತಲೇ ಇರುತ್ತದೆ. ಹಾಲೆಂಡಿನ ವಿಜ್ಞಾನಿಗಳು ಚಹಾ ಕುಡಿದರೆ ಹೃದಯರೋಗ ಅನ್ನುತ್ತಾರೆ. ನೆದರ್ಲ್ಯಾಂಡಿನ ಮಂದಿ ಚಹಾ ಕುಡಿದರೆ ಹೃದಯರೋಗ ವಾಸಿ ಅನ್ನುತ್ತಾರೆ. ಪ್ರತಿಯೊಬ್ಬರೂ ಇಪ್ಪತ್ತೋ ಮೂವತ್ತೋ ಮಂದಿಯನ್ನು ಕಲೆಹಾಕಿ ಅವರ ಮೇಲೆ ನಿರಂತರ ಪ್ರಯೋಗಗಳನ್ನು ಮಾಡುತ್ತ ತಮ್ಮ ಸಂಬಳಗಳನ್ನೂ ಸ್ಥಾನಗಳನ್ನು ಉಳಿಸಿಕೊಳ್ಳುತ್ತಾ ಮಹಾರಾಜನ ಆಸ್ಥಾನದಲ್ಲಿನ ರಾಜ ಪುರೋಹಿತರ ಹಾಗೆ ಮಾನವ ಜನಾಂಗಕ್ಕೆ ವಕ್ಕರಿಸಿಕೊಂಡಿರುತ್ತಾರೆ.” ಜೋಗಿ ಮಾತು ಅಕ್ಷರಶಃ ನಿಜವೆನ್ನಿಸುತ್ತದೆ,

ಇತ್ತೀಚೆಗೆ ಒಂದು ಇ-ಮೈಲ್ ಎಲ್ಲರಲ್ಲಿ ಸುತ್ತಾಡುತ್ತಿದೆ. ಜುಲೈ ತಿಂಗಳಲ್ಲಿ ಸೂರ್ಯಗ್ರಹಣವಿರುವುದರಿಂದ ಒಂದು ದೊಡ್ಡ ಅಪಾಯ ಕಾದಿದೆ ಅನ್ನುವರ್ಥದಲ್ಲಿ ಸುಳಿದಾಡುತಿದೆ. ಜಪಾನಿನ ಪಕ್ಕದ ಸಮುದ್ರದಲ್ಲಿ ಧೂಮಕೇತು ಬಿದ್ದು ಆಗುವ ಸುನಾಮಿಗೆ ಜಗತ್ತಿನ ಕಡಿಮೆ ಸಮುದ್ರಮಟ್ಟದಲ್ಲಿರುವ ಜಾಗವೆಲ್ಲಾ ಅಪಾಯಕ್ಕೆ ಸಿಲುಕುತ್ತದಂತೆ. ಇದು ನಾಸಾ ವಿಜ್ಞಾನಿಗಳ ಹೇಳಿಕೆ ಅಂತಲೂ ನಂಬಿಸುತ್ತಿದೆ. ಸಧ್ಯಕ್ಕೆ ನಾನು ಕೆಲಸ ಮಾಡುತಿರುವ ಮಾಲ್ಡೀವ್ಸ್ ದೇಶ ಸಮುದ್ರ ಮಟ್ಟಕ್ಕಿಂತ ಕೇವಲ ೮ ಫೀಟ್ ಮೇಲಿದೆ. ಅಲ್ಲಿ ತಿಳಿಸಿರುವ ಅಪಾಯಪಟ್ಟಿಯಲ್ಲಿರುವ ದೇಶಗಳಲ್ಲಿ ಮಾಲ್ಡೀವ್ಸ್ ಕೂಡ ಇದೆ. ಆ ಇ-ಮೈಲಿನ ಪ್ರಕಾರ ಇನ್ನು ಹೆಚ್ಚು ದಿನಗಳಿಲ್ಲ. ಜುಲೈ ೨೨ ಕ್ಕೆ ಇದೆಲ್ಲ ಆಗಲಿದೆ ಅನ್ನುತ್ತಿದೆ. ಈ ಸುದ್ಧಿ ನಿಜವಾದದ್ದಾ? ಗೊತ್ತಿಲ್ಲ.

ಒಂದು ವೇಳೆ ನಿಜವೇ ಆದರೆ ಘಟ್ಟದ ಮೇಲಿರುವ ನೀವೆಲ್ಲರೂ ವಿಜ್ಞಾನಿಗಳಿಗೆ ( ಅಥವ ಆ ಇ-ಮೈಲ್ ಸೃಷ್ಟಿಕರ್ತನಿಗೆ) ಅಭಿನಂದನೆಗಳನ್ನು ತಿಳಿಸಿಬಿಡಿ. ನಿಜವಲ್ಲವಾದರೆ ಉಳಿದಿದ್ದಕ್ಕೆ ಹೇಗಿದ್ದರೂ ನನಗೆ ನೀಡುವಿರಲ್ಲ?!

ಮಿಲ್ಕೀವೇ ನಲ್ಲಿ, ಈ ಜಗತ್ತಿನ, ಏಷ್ಯಾ ಖಂಡದಲ್ಲಿನ, ಭಾರತವೆಂಬೋ ರಾಷ್ಟ್ರದ, ಕರ್ನಾಟಕ ರಾಜ್ಯದ, ಉಡುಪಿ ಜಿಲ್ಲೆಯಲ್ಲಿನ ಕುಂದಾಪುರವೆಂಬ ಪುಟ್ಟ ಊರಿನ ವ್ಯಾಸರಾಜ ಮಠದ ಪಕ್ಕದ ಪುಟ್ಟ ಬಾಡಿಗೆ ಮನೆಯಲ್ಲಿ ನನ್ನಮ್ಮ ವಾಸಿಸಿದ್ದಾರೆ. ದಯವಿಟ್ಟು ಯಾರೂ ಅವಳ ಕಿವಿಗೆ ಈ ಇ-ಮೈಲ್ ನ ಸುದ್ಧಿ, ಮತ್ತು ಮಾಲ್ಡೀವ್ಸ್ ಕೇವಲ ಎಂಟೇ ಅಡಿ ಸಮುದ್ರ ಮಟ್ಟಕ್ಕಿಂತ ಮೇಲಿರುವುದನು ತಿಳಿಸದಿರಲಿ!

Categories: ಲೇಖನ