ಕವಿತೆಯ ಕಂಪು..!

Posted: ಏಪ್ರಿಲ್ 2, 2010 in ಕವಿತೆ

ಜಗದ ತುಂಬಾ
ಹಣದ
ಹೆಣದ ವಾಸನೆ
ಮತ್ತು ಸುತ್ತಮುತ್ತೆಲ್ಲಾ ಮನಸು ಅರೆಬೆಂದು
ಸುಟ್ಟಂಥದ್ದು,
ಕನಸಿನ ದೋಸೆಹಿಟ್ಟು ಕೆಟ್ಟಂಥದ್ದು

  nature-wood-road

ಬಾ ಗೆಳೆಯಾ ಇಲ್ಲೇ ಸುತ್ತಾಡಿ ಬರೋಣ
ಸಲುಪ ದೂರದಲೆ ಕವಿಗಳ ಮನೆಯಿದೆ
ಆಗಷ್ಟೇ ಕಣ್ತೆರೆದ ಕವಿತೆಯ ಘಮ
ಉಣ್ಣಲು ಸಿಕ್ಕೀತು,
ಮತ್ತು ಅದರ ಕಂಪು
ಹಬ್ಬೀತು ನಮ್ಮೊಳಗೂ
ಆದೀತು ನಮ್ಮ ಜೀವ ತಂಪು.

ಟಿಪ್ಪಣಿಗಳು
  1. shivu.k ಹೇಳುತ್ತಾರೆ:

    ರಂಜಿತ್ ಸರ್,

    ಸದ್ಯದ ಪರಿಸ್ಥಿತಿಯಲ್ಲಿ ಕವನದ ಘಮ ನಮಗೆಲ್ಲಾ ಬೇಕೇಬೇಕು ಅಲ್ವಾ…

  2. ಅನಾಮಿಕ ಹೇಳುತ್ತಾರೆ:

    ಹಾಗಂತಲೇ ನಿಮ್ಮ ಮನೆಗೆ ಹೋದರೆ ಸಿಕ್ಕಿದ ಉತ್ತರ : ಕವಿಗಳು ಊರಲ್ಲಿಲ್ಲ ! 😦

  3. P Kalyan ಹೇಳುತ್ತಾರೆ:

    ಎಷ್ಟೋ ಸಮಸ್ಯೆಗಳಿಗೆ ಮೂಲ ಕಾರಣ ಸಾಹಿತ್ಯದಲ್ಲಿ ಆಸಕ್ತಿ ಇಲ್ಲದಿರುವುದು. ಕವಿತೆಯೂ ಚೆನ್ನಾಗಿದೆ, ಚಿತ್ರವೂ ಚೆನ್ನಾಗಿದೆ.

  4. ಪ್ರದೀಪ್ ಹೇಳುತ್ತಾರೆ:

    ತುಂಬಾ ಚೆನ್ನಾಗಿದೆ ರಂಜಿತ್ ಅವರೆ…. 🙂

  5. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

    ಸೊಗಸಾದ ಕವನ ರಂಜಿತ್… ನಮಗೂ ಹೇಳಿಕೊಡ್ರಿ ಕವನ ಬರೆಯುವ ಕಲೆಯನ್ನು 🙂

  6. ರಂಜಿತ್ ಹೇಳುತ್ತಾರೆ:

    ಶಿವು ಸರ್,

    ಹಣ ಹಿಡಿಯಲು ಬದುಕನ್ನೇ “ಛೂ!” ಬಿಟ್ಟವರು ನಾವೆಲ್ಲಾ! ಹೀಗಿರುವಾಗ ನಿಜವಾದ ಕವಿತೆ ಮನಸ್ಸಿಗೆ ತಂಪು ನೀಡುತ್ತದೆ. ನಿದ್ದೆ ಎಳೆವ ರಾತ್ರಿ ಪ್ರಯಾಣದ, ಊದ್ದ ಹೆದ್ದಾರಿಯ ಮಧ್ಯೆ ಸಿಕ್ಕ ಪುಟ್ಟ ಇರಾನಿ ಹೋಟೆಲ್ಲಿನಂತೆ ಅಲ್ಲವೇ ಈ ಕವಿತೆಗಳೆಂದರೆ?!

  7. ರಂಜಿತ್ ಹೇಳುತ್ತಾರೆ:

    ಅನಾನಿಮಸ್ಸು,

    ನಿಮ್ಮ ಹೆಸರೂ ಇದ್ದಿದ್ದರೆ ಚೆಂದವಿತ್ತು, ನಿಮ್ಮ ಕಾಮೆಂಟು ಇಷ್ಟವಾಯ್ತು..!

  8. ರಂಜಿತ್ ಹೇಳುತ್ತಾರೆ:

    ಕಲ್ಯಾಣ್,

    ಸಾಹಿತ್ಯ ಬದುಕನ್ನು, ಇನ್ನೊಂದು ಜೀವವನ್ನು ಅರ್ಥೈಸುವುದಕ್ಕೆ ಪ್ರೀತಿಸುವುದಕ್ಕೆ ಖಂಡಿತವಾಗಿ ನೆರವಾಗುತ್ತದೆ ಅಂತ ನನ್ನ ಧೃಡ ನಂಬುಗೆ.

    ಅಂದ ಹಾಗೆ ಚಿತ್ರ ನನ್ನದಲ್ಲ. ಕವಿತೆ ಹೊಂದಿಕೆಯಾಗುತ್ತದೆ ಎಂಬ ಕಾರಣದಿಂದ ಗೂಗಲ್ ನಿಂದ ಆರಿಸಿಕೊಂಡಿದ್ದು.

  9. ರಂಜಿತ್ ಹೇಳುತ್ತಾರೆ:

    ಪ್ರದೀಪ್,

    ನಿಮ್ಮ ಅನಿಸಿಕೆಗೆ, ನೀಲಿಹೂವಿನ ಮೇಲಿನ ಪ್ರೀತಿಗೆ ಥ್ಯಾಂಕ್ಸ್.

    ಶರತ್,

    ಥ್ಯಾಂಕ್ಸ್. ಬಹಳಷ್ಟು ಹಿರಿಯ ಬರಹಗಾರರಿಗೆ ನನ್ನ ಕವಿತೆಗಳು ರುಚಿಸುವುದಿಲ್ಲ. ಬಹುಶಃ ಸುಲಭವಾಗಿ ಅರ್ಥವಾಗುತ್ತದೆ ಎಂಬ ಕಾರಣಕ್ಕೇ ಇರಬೇಕು..:)

    ಹೇಗೆ ಬರೆಯುತ್ತೇನೆ ಅಂತ ನನಗೇ ಅರ್ಥವಾದ ದಿನ, ನನ್ನ ಕವಿತೆಗಳು ಜಡವಾಗಲು ಪ್ರಾರಂಭವಾಗುತ್ತದೆ..:)

  10. ದಿವ್ಯಾ ಮಲ್ಯ ಹೇಳುತ್ತಾರೆ:

    ಆಹಾ ಕವಿತೆಯ ಕಂಪು ಇಲ್ಲೆಲ್ಲಾ ಹರಡಿತು 🙂

  11. Dr.Gurumurthy Hegde, Sweden ಹೇಳುತ್ತಾರೆ:

    ಕವಿತೆಯ ಘಮ ಘಮ ಎಲ್ಲೆಡೆ ಪಸರಿಸಲಿ
    ಸುಂದರ ಕವಿತೆ

  12. ನೂತನ ಹೇಳುತ್ತಾರೆ:

    ಆ ಅನಾನಿಮಸ್ಸು ನಾನೇ ಮರಾಯ.. ಯಾಕೋ ಹೆಸರು ಹಾಕಿದ್ದು ಬರಲೇ ಇಲ್ಲ 😦

ನಿಮ್ಮ ಟಿಪ್ಪಣಿ ಬರೆಯಿರಿ