ಮುಗಿಲೊಡೆವ ಸದ್ದು
ಕೆರೆಯಲ್ಲಿಂದು ಹನಿಯ
ರಂಗಪ್ರವೇಶ
ಭರತನಾಟ್ಯಾಭ್ಯಾಸ
ಕೆಸುವಿನೆಯಲ್ಲಿ ಒಂಚೂರು
ಜಾರುಬಂಡಿಯಾಟ
ಹೆಸರಿಲ್ಲದ್ಯಾವುದೋ
ಹೂವಿಗೆ ಹೊಳೆವ
ಮೂಗುತಿಯಾಗುವ
ಸಂಭವ.
ಭುವಿಯಲಿ ಜಾತ್ರೆ
ಮುಗಿದನಂತರ
ಸಾಗರದೆಡೆಗಿನ
ರಮ್ಯಯಾತ್ರೆಗೆ
ಅವಸರವಾದರೂ
ಮುದ್ದು ಕೈಯ ಕಾಗದದ ದೋಣಿಗೆ
ವೈಯ್ಯಾರ ಒದಗಿಸುವ ಸಡಗರ
ಕೂತು ನೋಡುವ ಜೀವದ
ಕಣ್ಣ ಮೂಲಕ
ಹೃದಯದೊಳಗೆ
ಕವಿತೆಯ ಬೀಜ ಮೊಳಕೆ.
ಪುಳಕ
ನೆನಪು ಇರುವ ತನಕ
ಮನದೊಳಗಿನ ಕನಕ.
Nice one Ranjit.