ಹೂವು ನೀಲಿ, ನಾನು ಮಾಲಿ..!

ಹೆಸ್ರು ರಂಜಿತ್ ಅಡಿಗ. ಬೇರೂರು ಕುಂದಾಪುರ. ಸದ್ಯಕ್ಕೆ ಬೆಂಗಳೂರು ನಿವಾಸಿ. ಬದುಕು, ಕೆಲಸ ನನ್ನನ್ನು ಕುಂದಾಪುರದಿಂದ ಹಿಡಿದು ಸಿಂಗಾಪೂರದವರೆಗೆ ಓಡಿಸಿದೆ.
ಚಿಕ್ಕ ವಯಸ್ಸಿಂದ ಓದುವ, ಬರೆಯುವ ಗೀಳು. ಶಾಲೆಯ ಗೋಡೆಯ ಮೇಲೆ, ತೋಡಿನ ಮೇಲೆ ಬಿಡುವ ಕಾಗದದ ದೋಣಿ, ಕುಡುಮಿ ವಿಧ್ಯಾರ್ಥಿಯ ಬೆನ್ನಿಗಂಟಿದ ಚೀಟಿ ಮೇಲೆ, ಕ್ಯಾಂಟೀನಿನ ಬೆಂಚುಗಳ ಮೇಲೆ, ಗಾಯ ಮಾಡಿಕೊಂಡ ಗೆಳೆಯನ ಕೈಯ ಪ್ಲಾಸ್ಟೆರ್ ಆಫ್ ಪ್ಯಾರಿಸ್, ಟೀಚರತ್ತ ನುಗ್ಗಿದ ಹಾಳೆಯ ಕ್ಷಿಪಣಿ, ಮೊಬೈಲ್ ಎಸ್ಸೆಮ್ಮೆಸ್ಸು, ತರಂಗ, ಸುಧಾ, ಕನ್ನಡಪ್ರಭ, ವಿಜಯ ಕರ್ನಾಟಕ, ವಿಕ್ರಾಂತ ಕರ್ನಾಟಕ, ಮಂಗಳ, ಆರ್ಕುಟ್.. ಹೀಗೆ ಎಲ್ಲಾ ಕಡೆ ಸಾಹಿತ್ಯ ರಾರಾಜಿಸಿದ ನಂತರ, ಈ ಬ್ಲಾಗು ಒಂದು ಬಿಟ್ಟಿದ್ದಕ್ಕೆ ಬಹಳ ಖೇದವಾಗಿತ್ತು. ನವಿಲುಗರಿ ಬ್ರಾಂಡಿನ ಸೋಮನ (ದಯವಿಟ್ಟು ಅವನನ್ನೂ ಕ್ಷಮಿಸಿ ಬಿಡಿ!) ನೆರವಿನಿಂದ “ನೀಲಿಹೂವು” ಎಂಬ ಬ್ಲಾಗು ತೆರೆದು ಆ ಆಸೆಯನ್ನೂ ಪೂರೈಸಿದ್ದೇನೆ.
ಸಿನೆಮಾ, ಅಡುಗೆ, ಪರಿಸರ, ಸಾಹಿತ್ಯ  ಅಂದರೆ ಭಾರಿ ಪ್ರೀತಿ. ಜಯಂತ್ ಕಾಯ್ಕಿಣಿ, ಯಂಡಮೂರಿ, ಬೇಂದ್ರೆ, ಜೋಗಿ, ಕೆ.ಟಿ.ಗಟ್ಟಿ ಯವರ ಬರಹಗಳು ಹೆಚ್ಚು ಇಷ್ಟ. ನಾಗತಿಹಳ್ಳಿ ಚಂದ್ರಶೇಖರ್ , ಸುನಂದಾ ಪ್ರಕಾಶ ಕಡಮೆ ಸಣ್ಣಕತೆಗಳೂ ಖುಷಿಕೊಡುತ್ತದೆ. ಅಪರೂಪಕ್ಕೆ ಪತ್ರಿಕೆಗಳಲ್ಲಿ ಬರೆವ ರಮೇಶ್ ಕೆದಿಲಾಯ ರ ಬರವಣಿಗೆಯೂ ಆಪ್ತ ಅನ್ನಿಸುತ್ತದೆ.
ಈ ಬ್ಲಾಗು ನನ್ನ ಒಳಗೆ ಕುದಿವ ಭಾವಗಳಿಗೆ, ಬರಯಲೇ ಬೇಕೆಂಬ ತುಡಿತಕ್ಕೆ ಶಮನ ನೀಡುತ್ತಿದೆ.
(ಈ ಬ್ಲಾಗಿನಲ್ಲಿರುವ ಎಲ್ಲಾ ಫೋಟೋಗಳೂ ಸ್ವಂತದ್ದಲ್ಲ, ಗೂಗಲ್ ನಿಂದ ಎತ್ತಿಕೊಂಡಿದ್ದು, ಆ ಎಲ್ಲಾ ಫೋಟೋಗ್ರಾಫರುಗಳಿಗೆ, ಪೈಂಟರುಗಳಿಗೆ ನನ್ನ ನಮ್ರ ಥ್ಯಾಂಕ್ಸ್. )
ಟಿಪ್ಪಣಿಗಳು
  1. ramesha ಹೇಳುತ್ತಾರೆ:

    Hello

    Really impressed by your writings.

    Awaiting for your response….mesha.chin@gmail.com

    Regards
    Ramesha

  2. ರಂಜಿತ್ ಹೇಳುತ್ತಾರೆ:

    ರಮೇಶ,

    ನಿಮ್ಮ ಮೆಚ್ಚುಗೆಯ ಮಾತುಗಳೇ ನಮಗೆ ಬರೆಯಲು ಹುಮ್ಮಸ್ಸು ನೀಡುವುದು.

    ಮೈಲ್ ಮಾಡಿರುವೆ.

    ಪ್ರೀತಿಯಿರಲಿ.

  3. Sunil ಹೇಳುತ್ತಾರೆ:

    Tumba tumba santhosha…nimma baraha nijakoo chenda ranjith.
    please keep going…
    Preetiyinda,
    Sunil.

  4. ರಂಜಿತ್ ಹೇಳುತ್ತಾರೆ:

    ಸುನಿಲ್,

    ನಿಮ್ಮ ಮೆಚ್ಚುಗೆಯಿಂದ ಬಹಳ ಖುಷಿಯಾಯಿತು.

    ಬರೆಯುತ್ತಿರುತ್ತೇನೆ, ನೀವೂ ಬರುತ್ತಿರಿ.

    ಪ್ರೀತಿಯಿರಲಿ,

    -ರಂಜಿತ್.

  5. ವಿಜಯರಾಜ್ ಕನ್ನಂತ ಹೇಳುತ್ತಾರೆ:

    nimma one line stories na thumbaa miss maadkotaa iddare bahaLa jana Odugaru… avarellara paravaagi nanna binnavattaLe…
    bega Ondu saalina kathegala series barali

  6. ರಂಜಿತ್ ಹೇಳುತ್ತಾರೆ:

    ವಿಜಯರಾಜ್ ಜಿ,

    ನೀವು ಕೇಳಿದ್ಮೇಲೆ ಇಲ್ಲ ಅನ್ನೋಕ್ಕಾಗುತ್ಯೇ? ಖಂಡಿತಾ ಇನ್ನು ಸ್ವಲ್ಪ ದಿನದಲ್ಲೇ ಹಾಕ್ತೀನಿ. ಬರೆದದ್ದನ್ನು ನನ್ನೊಳಗಿನ ವಿಮರ್ಶಕ “ಹಾಕಯ್ಯ.. ಪರ್ವಾಗಿಲ್ಲ ಅನ್ನೋ ಹಂಗೆ ಬರ್ದಿದ್ದೀಯಾ” ಅಂದ ಕೂಡ್ಲೇ ಹಾಕುವೆ.
    ನಿಮ್ಮ ನಲ್ಮೆಯ ಮಾತುಗಳಿಗೆ ಥ್ಯಾಂಕ್ಸ್.

  7. Anantha ಹೇಳುತ್ತಾರೆ:

    ಹಾಗೇ ಹೂ ತೋಟದಲ್ಲೊಂದು ಸುತ್ತು ಹೊಡೆಯುವಾಗ ಕಣ್ಣಿಗೆ ಬಿದ್ದಿದ್ದು ಈ ನೀಲಿ ಹೂವು. ಎಲ್ಲೆಲ್ಲೂ ಕಾಣ ಸಿಗುವ ಕೆಂಪು, ಹಳದಿ, ಬಿಳಿ ಹೂಗಳಿಗಿಂತ ಇದು ಖಂಡಿತ ಭಿನ್ನ..

  8. ರಂಜಿತ್ ಹೇಳುತ್ತಾರೆ:

    ಅನಂತ ಅವರೇ,

    ನೀಲಿಹೂವಿನ ಭಿನ್ನತೆ ನಿಮಗಿಷ್ಟ ಆಗಿದ್ದು ಸಂತಸ ತಂದಿತು. ಹೀಗೆಯೆ ಬರುತ್ತಿರಿ ಸಮಯವಾದಾಗ.
    ಧನ್ಯವಾದಗಳು.

  9. usha ಹೇಳುತ್ತಾರೆ:

    itteechege ishtondu impress maaduvantaha barahagalu kannige biddiralillaa….ree nim FAN aagbittideeni kanree..!!

  10. ರಂಜಿತ್ ಹೇಳುತ್ತಾರೆ:

    ಉಷಾ ಮೇಡಮ್,

    ನಿಮ್ಮ ಅನಿಸಿಕೆಗೆ ಧನ್ಯವಾದಗಳು. ನನ್ನದೇನಿಲ್ಲ, ನಿಮ್ಮಂತವರ ಪ್ರೋತ್ಸಾಹವೇ ಬರೆಸುತ್ತಿರುವುದು. ಮುಂದೆ ಇನ್ನೂ ಚೆನ್ನಾಗಿ ಬರೆಯಲು ಪ್ರಯತ್ನಿಸುವೆ. ಬರುತ್ತಿರಿ.

  11. Karthik S Udupa ಹೇಳುತ್ತಾರೆ:

    ರಂಜಿತ್ ಕಾಲೇಜ್ನಲ್ಲಿ ನಿಮ್ಮ ಕೆಲ ಕವನಗಳನ್ನ ಓದಿದಾಗ ಇಸ್ಟವಾಗಿತ್ತು. ಆಮೇಲೆ ಎಲ್ಲೋ ಮರೆತೇ ಹೋಗಿದ್ರಿ. ಹಾಗೇ ಬ್ರೌಸ್ ಮಾಡುವಾಗ ನೀಲಿ ಹೂ ಸಿಕ್ಕಿತು, ವ್ಹಾ ನಿಜವಾಗ್ಲೂ amazing. ಅದರಲ್ಲೂ ಕವನಗಳಂತೂ ಸೂಪರ್. ಇಷ್ಟು ದಿನ ನಿಮ್ಮ ಬ್ಲಾಗ್ನ ನೋಡ್ದೆ ತುಂಬಾ ಮಿಸ್ ಮಾಡ್ಕೊಂಡೆ ಅನಿಸ್ತಿದೆ. ಒಂದೇ ಸಮನೆ ಕೊತ್ಕಂಡು ಓದ್ತಿದೀನಿ, ಹೀಗೆ ಬರೀತಿರಿ.

  12. deeshma ಹೇಳುತ್ತಾರೆ:

    nice write ups, hige sumne kutide neeli hoovu siktu.kushiyaytu

  13. Dayananda M R ಹೇಳುತ್ತಾರೆ:

    Dear Ranjith,

    You are an awesome writer…
    your writings makes to feel very private by touching the inner feelings. You says many things which someone wanted to express but they don’t have skills. Keep writing sir. All the best. 🙂

  14. Mani Ranjan ಹೇಳುತ್ತಾರೆ:

    nice one Sir.

  15. ರಂಜಿತ್ ಹೇಳುತ್ತಾರೆ:

    ದೀಷ್ಮಾ, ಮಾಣಿರಂಜನ್

    ನಿಮ್ಮ ಅನಿಸಿಕೆಗಳಿಗೆ ಥ್ಯಾಂಕ್ಸು.

  16. ರಂಜಿತ್ ಹೇಳುತ್ತಾರೆ:

    ದಯಾನಂದ,

    ನಿಮ್ಮ ಕಾಮೆಂಟು ಕಂಡು ಬಹಳ ಖುಷಿ ಆಯಿತು.ನನಗೆ ಸಿಗುತ್ತಿರುವ ಪ್ರತಿಕ್ರಿಯೆಗಳನ್ನು ಕಂಡು ಕೊಂಚ ಬೇಸರಾಗಿತ್ತು. ಲೇಖನ ಬರೆದರೂ ಬ್ಲಾಗಿಗೆ ಹಾಕುವುದು ಬೇಡ ಅನ್ನುವ ಆಲೋಚನೆ ಮೂಡಿತ್ತು. ನಿಮ್ಮ ಈ ಅನಿಸಿಕೆ ಮತ್ತು ಹತ್ತಿರದ ಕೆಲ ಗೆಳೆಯರ ಮಾತುಗಳು ಮತ್ತೆ ಸ್ವಲ್ಪ ಸ್ಪೂರ್ತಿ ಮೂಡಿಸಿವೆ.

    ನಿಜವಾಗ್ಯೂ ನಿಮ್ಮ ಅನಿಸಿಕೆಗಳು ಮಹತ್ತ್ವವಾದ್ದು. ಧನ್ಯವಾದಗಳು.

  17. ರಂಜಿತ್ ಹೇಳುತ್ತಾರೆ:

    ಕಾರ್ತಿಕ್,

    ಕಾಲೇಜು ಸಮಯದಿಂದಲೇ ನನ್ನ ಹಿಂದೆ ಬಿದ್ದಿದೀರಿ ಎಂದಾಯ್ತು!:)
    ಆಗ ಬರೆಯುತ್ತಿದ್ದಾಗ ಬರಹದ ಘಮ ಬೇರೆಯಾಗಿರುತ್ತಿತ್ತು.. ಈಗ ಕೊಂಚ ಬೇರೆ ಅಂತ ಅನ್ನಿಸ್ತಿದೆಯೇ?
    ಆನಿಸಿದ್ದರೆ ಅದು ಬದುಕಿನ ಮಹಿಮೆ..:)

    ಥ್ಯಾಂಕ್ಸ್.

  18. ರಾಘವೇಂದ್ರ ಹೆಗಡೆ ಹೇಳುತ್ತಾರೆ:

    ಬರೆಯುವ ಹಂಬಲವ,ತುಡಿತವ ಪೋಷಿಸಿ,ಪೂಣಿಸಿ ದೂರದ ಸಿಂಗಾಪುರದಿಂದ

    ಕನ್ನಡದ ಕಂಪ ಹರಡುವ ನೀಲಿ ಹೂವ ಮಾಲಿ ರಂಜಿತ್ ಅಡಿಗರಿಗೆ

    ನಮಸ್ಕಾರಗಳು.ನಾನು ಬ್ಲಾಗು ಆರಂಭಿಸಿದ ಹೊಸತರಲ್ಲಿ, ಬ್ಲಾಗು ಲೋಕಕ್ಕೆ

    ನನಗೆ ಸ್ವಾಗತವ ಕೋರಿ moral support ನೀಡಿದ ನಿಮಗೆ ನಾ

    ಚಿರಋಣಿ.

    ನಿಮ್ಮ ಬರವಣಿಗೆಯ ಶೈಲಿ ಬಹಳ ಇಷ್ಟ.

    ಇನ್ನೂ ಹೆಚ್ಚೆಚ್ಚು ಬರಹಗಳು ನಿಮ್ಮಿಂದ ಜಗದ ಮೂಲೆಮೂಲೆಗೂ ತಲುಪಲಿ..

    ಬಿಡುವಿದ್ದಾಗ ಒಮ್ಮೆ ನನ್ನ ರಾಗನೌಕೆಗೆ ಭೇಟಿ ಕೊಡಿ.
    (http://raganouke.wordpress.com)

    ಇಂತಿ ತಮ್ಮ ಅಭಿಮಾನಿ

    — ರಾಘವೇಂದ್ರ ಹೆಗಡೆ (‘ರಾಗನೌಕೆ’ಯಿಂದ )

  19. ಆಸು ಹೆಗ್ಡೆ ಹೇಳುತ್ತಾರೆ:

    ಉತ್ತಮ ಬರವಣಿಗೆಗಳು.
    ಹೀಗೆಯೇ ಮುಂದುವರಿಯಲಿ.
    -ಆಸು ಹೆಗ್ಡೆ

  20. harishkumar.c ಹೇಳುತ್ತಾರೆ:

    Nimma Blogannu Regularagi ododu nanna weakness barahagalige hosadada rupa kottiruva nimma parichaykke nanu hatorediddene nanna haturakke ondu full stop kottu nannannu dhanyanagisu shiva harish8feb@gmail.com Idu nanna E-vilasa .

  21. ರಂಜಿತ್ ಹೇಳುತ್ತಾರೆ:

    ರಾಘವೇಂದ್ರ ಹೆಗಡೆ,

    ಇರೋ ಊರು ಸಿಂಗಾಪೂರು ಆದರೇನು?
    ಒಳಬೇರು ಕುಂದಾಪೂರೇ ಅಲ್ಲವೇ?!

    ನಿಮ್ಮ ಅನಿಸಿಕೆಗೆ ಧನ್ಯವಾದಗಳು, ಕೊರೀದೇ ಬರೀತಿರ್ತೀನಿ, ಮರೀದೇ ಬರುತ್ತಿರಿ..:)

  22. ರಂಜಿತ್ ಹೇಳುತ್ತಾರೆ:

    @ಅಸು ಹೆಗ್ಡೆ,

    ಧನ್ಯವಾದಗಳು ಸರ್.

    @ಹರೀಶ್,

    ನನ್ನ ಬ್ಲಾಗು ಪೂರ್ತಿಯಾಗಿ ಓದಿಯಾದ ಮೇಲಾದರೂ ನಿಮ್ಮ “ಹಾತುರ” ಆತುರವಾಗಲಿ ಎಂದು ಹಾರೈಸುತ್ತೇನೆ…:)
    ನಿಮಗೆ ಈಗಲೇ ಮೈಲು ಮಾಡಿ ಧನ್ಯನಾಗುತ್ತೇನೆ ಶಿವಾ..

    ಥ್ಯಾಂಕ್ಸ್.

  23. d.s.ramaswamy ಹೇಳುತ್ತಾರೆ:

    really impressed by your blog, n your style of writing.good going. congrats

  24. Ranjana ಹೇಳುತ್ತಾರೆ:

    nanna tharane innu kelavu barahagara mitraru singapruradalliddare endu tilidu santoshavayitu ranjit avare.

  25. ರಂಜಿತ್ ಹೇಳುತ್ತಾರೆ:

    ಡಿ. ಎಸ್. ರಾಮಸ್ವಾಮಿಯವರೇ,

    ನಿಮ್ಮಂಥವರು ನನ್ನ ಬ್ಲಾಗಿಗೆ ಬರುವುದು ನನಗೆ ಹೆಮ್ಮೆ. ನಿಮ್ಮ ಕಾಮೆಂಟು ನೋಡಿ ನನ್ನ ಕಾಲು ಭೂಮಿ ಮೇಲಿಲ್ಲ!

    @ರಂಜನಾ,

    ನಿಮ್ಮ ಥರ ಅನ್ನಬೇಡಿ,

    ನೀವು ಹಾಗಂದರೆ ಅದು ನನಗೆ ದೊಡ್ಡಮಾತುಗಳು
    ನಾನಂತೂ ಬರಹಲೋಕದ ತುಂಬುಬೆಳಕಿನಲಿ ಚಿಕ್ಕ ಮಿಣುಕು ಹುಳು!

  26. harshad ಹೇಳುತ್ತಾರೆ:

    baraha thmba chennagide

  27. manjudew ಹೇಳುತ್ತಾರೆ:

    ನವಿರಾದ ಬರಹಗಳು …
    ಭಾವನೆಗಳ ಬಸಿವ ಪದಗಳು…
    ಕನಸುಗಳಲ್ಲಿ ತೇಲಿಸುವ ಬರಹಗಳು…

  28. veekay ಹೇಳುತ್ತಾರೆ:

    Hi Ranjith,
    ee blogu gigu hanthavella odhak adav anth nang gotthagidda itthithlgiri..
    manne manne papernyag nim Neelihoovina bagge bardiddu odhidhmyale..
    hanga sumna kunthag ondh sala try madun anth try maadide..
    idonthara nanga chata adanga agibittetri.. na blog antha odhakatthidda nimda first ri..
    neev bardiddu odhak baal chandh adavu mattha.. valaga andra deep heartge muttuvang adavri..
    hinga barithirri..

    preeti inda,
    vk

  29. ಅನಾಮಿಕ ಹೇಳುತ್ತಾರೆ:

    nimma baravnige baravnige bavneglalli hrlid huvin hage ide. prakash.b.jalahalli

  30. ramu ಹೇಳುತ್ತಾರೆ:

    tumba ista aytu , heege munduvariyali

  31. Vijay Kulkarni ಹೇಳುತ್ತಾರೆ:

    ಪ್ರೀತಿಯ ರಂಜಿತ್ ಅಡಿಗ ಇವರಿಗೆ,
    ನಮಸ್ಕಾರಗಳು. ಇವತ್ತು “ವಿಜಯ ಕರ್ನಾಟಕ” ದಿನಪತ್ರಿಕೆ ಇಂದ ನಿಮ್ಮ ಬ್ಲಾಗ್ ಬಗ್ಗೆ ತಿಳಿಯಿತು.
    ನಿಮ್ಮ ತಾಣ “https://neelihoovu.wordpress.com” ಕ್ಕೆ ಭೇಟಿ ಕೊಟ್ಟೆ. ನಿಮ್ಮ ಲೇಖನಗಳು ಬಹಳ ಚೆನ್ನಾಗಿ ಇವೆ.
    ದಯವಿಟ್ಟು ನಿಮ್ಮ ಬರವಣಿಗೆ ಮುಂದುವರೆಸಿ.
    ಇಂತಿ ವಿಶ್ವಾಸಗಳೊಂದಿಗೆ,
    ವಿಜಯ ಕುಲಕರ್ಣಿ

  32. Raghu suvarna ಹೇಳುತ್ತಾರೆ:

    Super kanri Nimma Hobbey super,,

  33. smita ಹೇಳುತ್ತಾರೆ:

    i lik ur blog

  34. JAYA KUMAR ಹೇಳುತ್ತಾರೆ:

    ಚೆನ್ನಾಗಿದೆ ಸರ್, ತುಂಬಾ ಆಪ್ತ ಶೈಲಿ ತಮ್ಮದು,ದೇವರು ಒಳ್ಳೆಯದನ್ನೆ ಮಾಡಲಿ ನಿಮಗೆ, ಈ ಜೀವನ ಪ್ರೀತಿ ಯಾವತ್ತೂ ನಿಮ್ಮೊಟ್ಟಿಗಿರಲಿ ಧನ್ಯವಾದಗಳು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s