ಜಗತ್ತು ನನ್ನ ಕವಿಯೆಂದರೆ
ಭಯವಾಗುತ್ತದೆ..
ಇನ್ನೂ ಪದಗಳಿಗೆ ನಿನ್ನ ಬೆವರ ಘಮ ಅಂಟಿಕೊಂಡಿಲ್ಲ
ಭಾವಗಳಿಗೆ ಇನ್ನೂ ನಿನ್ನ ಕಂಗಳ ಅಮಲು ತಾಕಿಲ್ಲ
ಸಿಕ್ಕಿಲ್ಲ, ನಿನ್ನ ಮುಂಗುರುಳ ಪ್ರಾಸ
ಸಾಲುಗಳ ತುದಿಗಳಿಗೆ
ಕನಸುಗಳನ್ನು ಹುಟ್ಟಿಸುವ ನಿನ್ನ ನಡಿಗೆಯ ತಾಕತ್ತು ಬಂದಿಲ್ಲ ಇನ್ನೂ !
ಪ್ರೀತಿಗೆ ಕಳಂಕ ತಂದೀತೆಂಬ ಭಯವಿದ್ದರೆ
ನೀನು ಮುದ್ದು ಮಾಡುವುದು ಬೇಡ
ಅಪ್ಪಿಕೋ ಒಮ್ಮೆ ನಿನ್ನ ಕಂಗಳಲಿ
ನಿನ್ನ ಬೆವರ ನದಿ ಹರಿಯಲಿ ನನ್ನ ನರನಾಡಿಯಲಿ
ಕರಗೇ ಹೋಗಲಿ ಕನಸುಗಳು ನಿನ್ನ ತಬ್ಬುಗೆಯಲಿ
ಒಂದು ಕ್ಷಣ ಇಲ್ಲವಾಗೇ ಹೋಗುತ್ತೇನೆ ನಾನು ನಿನ್ನಲಿ..
ಬೇಕಿದ್ದರೆ ಆಗ ಒಪ್ಪಿಕೊಳ್ಳುತ್ತೇವೆ
ನನ್ನನು ಕವಿಯೆಂದರೆ!